8:59 PM Monday21 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಮೈಸೂರಿನ ಮೈಲಾರಿ ಹೊಟೇಲ್ ನಲ್ಲಿ ದೋಸೆ ಹೊಯ್ದ ಪ್ರಿಯಾಂಕಾ ವಾದ್ರ!: ಜನರಿಗೆ ಖುಷಿಯೇ ಖುಷಿ

26/04/2023, 23:46

ಮೈಸೂರು(reporterkarnataka.com); ಜನ ಸಾಮಾನ್ಯರ ಜತೆ ಬೆರೆಯುವ ಮೂಲಕವೇ ಗಾಂಧಿ ಕುಟುಂಬ ಪ್ರಸಿದ್ಧಿಗೆ ಬಂದಿರುವುದು. ಇದೀಗ ಚುನಾವಣಾ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಆಗಮಿಸಿದ ಪ್ರಿಯಾಂಕಾ ವಾದ್ರ ಇಲ್ಲಿನ ಮೈಲಾರಿ ಹೋಟೆಲ್ ಗೆ ಭೇಟಿ ನೀಡಿ ದೋಸೆ ಹೊಯ್ದು ಸುದ್ದಿ ಮಾಡಿದರು.


ಮೈಸೂರಿನ ಮೈಲಾರಿ ಹೋಟೆಲ್ ಅಂದ್ರೆ ಲಲಿತ ಮಹಲ್ ಪ್ಯಾಲೇಸ್, ಬಾಂಬೆಯ ಅಶೋಕ, ದಿಲ್ಲಿಯ ಮೌರ್ಯ ಹೋಟೆಲ್ ತರಹ ಸ್ಟಾರ್ ಹೋಟೆಲ್ ಅಲ್ಲ. ಬದಲಿಗೆ ಅದೊಂದು ಸಣ್ಣ ಗೂಡಿನ ಮಾದರಿಯ ಹೋಟೆಲ್ ಆಗಿದೆ. ಕಾಂಗ್ರೆಸ್ ನ ಯುವ ರಾಣಿ ಪ್ರಿಯಾಂಕಾ ಅವರು ಹೋಟೆಲಿಗೆ ಭೇಟಿ ಕೊಟ್ಟವರು ನೇರವಾಗಿ ನುಗ್ಗಿದ್ದು ಅಡುಗೆ ಮನೆಗೆ. ಪ್ರಿಯಾಂಕಾ ಅವರಿಗೆ ದಕ್ಷಿಣ ಭಾರತದ ದೋಸೆ ಕುರಿತು ಕುತೂಹಲ. ಹೋಟೆಲಿನ ಮಾಲೀಕ ಕಮ್ ಅಡುಗೆ ಭಟ್ಟರಲ್ಲಿ ಮಾಹಿತಿ ಪಡೆದ ಪ್ರಿಯಾಂಕಾ ವಾದ್ರ ಅವರು ಕಾದ ಕಾವಲಿಯ ಮೇಲೆ ದೋಸೆ ಹೊಯ್ದೇ ಬಿಟ್ಟರು. ಉದ್ದಿನ ದಪ್ಪ ದೋಸೆಯನ್ನು ಮಗುಚಿ ಹಾಕಬೇಕೆನ್ನುವ ಮಾಹಿತಿ ಇಲ್ಲದ ಪ್ರಿಯಾಂಕಾ ಅವರು ಅದನ್ನು ಸಿಂಗ್ ಫೋಲ್ಡ್ ಮಾಡಿ ಕಾವಲಿಯಿಂದ ಮೇಲಕ್ಕೆತ್ತಲು ಪ್ರಯತ್ನಿಸಿದಾಗ ಹೋಟೆಲ್ ನ ಅಡುಗೆ ಭಟ್ಟರು ಅದನ್ನು ತಿರುಗಿಸಿ ಹಾಕುವ ಬಗ್ಗೆ ಮಾಹಿತಿ ನೀಡಿದರು. ಒಟ್ಟಿನಲ್ಲಿ ಪ್ರಿಯಾಂಕಾ ಅವರು ದೋಸೆ ಹಾಕುವ ಕುರಿತು ಮಾಹಿತಿ ಪಡೆದರು.

ಇತ್ತೀಚಿನ ಸುದ್ದಿ

ಜಾಹೀರಾತು