8:00 PM Tuesday5 - August 2025
ಬ್ರೇಕಿಂಗ್ ನ್ಯೂಸ್
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ‘ರಿದಂ ಆಫ್ ಬಿಎಲ್‌ಆರ್‌’: ವಿಶಿಷ್ಟ ಧ್ವನಿ ಗುರುತು… ಶಿಬು ಸೊರೇನ್ ನಿಧನ: ಮತಗಳ್ಳತನ ವಿರುದ್ಧ ಪ್ರತಿಭಟನಾ ಸಭೆ ಆ. 8ಕ್ಕೆ ಮುಂದೂಡಿಕೆ:… ವಿಶ್ವ ವಿಖ್ಯಾತ ಮೈಸೂರು ದಸರಾ: ಪುಷ್ಪಾರ್ಚನೆ ಮೂಲಕ ಅಭಿಮನ್ಯು ನೇತೃತ್ವದ ಗಜ ಪಯಣಕ್ಕೆ… Shivamogga | ತೀರ್ಥಹಳ್ಳಿ: ಮನೆಗಾಗಿ ಸಾಲ; ಮನನೊಂದ ವೃದ್ದ ದಂಪತಿ ಒಂದೇ ಮರಕ್ಕೆ… Kodagu | ಬೆಕ್ಕೆಸುಡ್ಲೂರಿನಲ್ಲಿ ತಡರಾತ್ರಿ ರಸ್ತೆ ಮಧ್ಯೆ ಲಾರಿ ಪಲ್ಟಿ: ಕುಟ್ಟ- ಪೊನ್ನಂಪೇಟೆ… Kodagu | ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ: ರ್‍ಯಾಂಬುಟನ್ ಹಣ್ಣು ಮಾರಾಟಕ್ಕೆ ನಿರ್ಬಂಧ; ವ್ಯಾಪಾರಸ್ಥರ… SIT | ಧರ್ಮಸ್ಥಳ ಪ್ರಕರಣ: ದೂರು ನೀಡಲು ಮತ್ತೊಬ್ಬ ದೂರುದಾರ ಎಸ್ಐಟಿ ಕಚೇರಿಗೆ… ಸುಹಾಸ್ ಶೆಟ್ಟಿ ಮರ್ಡರ್ ಕೇಸ್: ಕಾಫಿನಾಡು ಕಳಸದಲ್ಲಿ ಎನ್ಐಎ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ Bangaluru | ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಯಕೃತ್‌ ರವಾನೆ: ಸ್ಪರ್ಶ್‌ ಆಸ್ಪತ್ರೆಯಲ್ಲಿ… ರಾಹುಲ್ ಗಾಂಧಿ ನೀಡಿರುವ ‘ಮತ ಕಳ್ಳತನ’ ಪದವು ಭಾರತೀಯ ರಾಜಕೀಯ ಶಬ್ದಕೋಶಕ್ಕೆ ಸೇರ್ಪಡೆ:…

ಇತ್ತೀಚಿನ ಸುದ್ದಿ

ಮೈಸೂರಿನ ಮೈಲಾರಿ ಹೊಟೇಲ್ ನಲ್ಲಿ ದೋಸೆ ಹೊಯ್ದ ಪ್ರಿಯಾಂಕಾ ವಾದ್ರ!: ಜನರಿಗೆ ಖುಷಿಯೇ ಖುಷಿ

26/04/2023, 23:46

ಮೈಸೂರು(reporterkarnataka.com); ಜನ ಸಾಮಾನ್ಯರ ಜತೆ ಬೆರೆಯುವ ಮೂಲಕವೇ ಗಾಂಧಿ ಕುಟುಂಬ ಪ್ರಸಿದ್ಧಿಗೆ ಬಂದಿರುವುದು. ಇದೀಗ ಚುನಾವಣಾ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಆಗಮಿಸಿದ ಪ್ರಿಯಾಂಕಾ ವಾದ್ರ ಇಲ್ಲಿನ ಮೈಲಾರಿ ಹೋಟೆಲ್ ಗೆ ಭೇಟಿ ನೀಡಿ ದೋಸೆ ಹೊಯ್ದು ಸುದ್ದಿ ಮಾಡಿದರು.


ಮೈಸೂರಿನ ಮೈಲಾರಿ ಹೋಟೆಲ್ ಅಂದ್ರೆ ಲಲಿತ ಮಹಲ್ ಪ್ಯಾಲೇಸ್, ಬಾಂಬೆಯ ಅಶೋಕ, ದಿಲ್ಲಿಯ ಮೌರ್ಯ ಹೋಟೆಲ್ ತರಹ ಸ್ಟಾರ್ ಹೋಟೆಲ್ ಅಲ್ಲ. ಬದಲಿಗೆ ಅದೊಂದು ಸಣ್ಣ ಗೂಡಿನ ಮಾದರಿಯ ಹೋಟೆಲ್ ಆಗಿದೆ. ಕಾಂಗ್ರೆಸ್ ನ ಯುವ ರಾಣಿ ಪ್ರಿಯಾಂಕಾ ಅವರು ಹೋಟೆಲಿಗೆ ಭೇಟಿ ಕೊಟ್ಟವರು ನೇರವಾಗಿ ನುಗ್ಗಿದ್ದು ಅಡುಗೆ ಮನೆಗೆ. ಪ್ರಿಯಾಂಕಾ ಅವರಿಗೆ ದಕ್ಷಿಣ ಭಾರತದ ದೋಸೆ ಕುರಿತು ಕುತೂಹಲ. ಹೋಟೆಲಿನ ಮಾಲೀಕ ಕಮ್ ಅಡುಗೆ ಭಟ್ಟರಲ್ಲಿ ಮಾಹಿತಿ ಪಡೆದ ಪ್ರಿಯಾಂಕಾ ವಾದ್ರ ಅವರು ಕಾದ ಕಾವಲಿಯ ಮೇಲೆ ದೋಸೆ ಹೊಯ್ದೇ ಬಿಟ್ಟರು. ಉದ್ದಿನ ದಪ್ಪ ದೋಸೆಯನ್ನು ಮಗುಚಿ ಹಾಕಬೇಕೆನ್ನುವ ಮಾಹಿತಿ ಇಲ್ಲದ ಪ್ರಿಯಾಂಕಾ ಅವರು ಅದನ್ನು ಸಿಂಗ್ ಫೋಲ್ಡ್ ಮಾಡಿ ಕಾವಲಿಯಿಂದ ಮೇಲಕ್ಕೆತ್ತಲು ಪ್ರಯತ್ನಿಸಿದಾಗ ಹೋಟೆಲ್ ನ ಅಡುಗೆ ಭಟ್ಟರು ಅದನ್ನು ತಿರುಗಿಸಿ ಹಾಕುವ ಬಗ್ಗೆ ಮಾಹಿತಿ ನೀಡಿದರು. ಒಟ್ಟಿನಲ್ಲಿ ಪ್ರಿಯಾಂಕಾ ಅವರು ದೋಸೆ ಹಾಕುವ ಕುರಿತು ಮಾಹಿತಿ ಪಡೆದರು.

ಇತ್ತೀಚಿನ ಸುದ್ದಿ

ಜಾಹೀರಾತು