1:20 PM Saturday19 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

Udupi | ಒಣ ಮೀನು ಮಾರಿ ಮನೆ ಕಟ್ಟಲು ಕೂಡಿಟ್ಟ ಹಣದಿಂದ ಫುಡ್ ಕಿಟ್ ವಿತರಣೆ: ಲಕ್ಷ್ಮೀ ಹೃದಯ ಶ್ರೀಮಂತಿಕೆಗೆ ಡಿಕೆಶಿ ಫಿದಾ

07/07/2021, 10:38

ಉಡುಪಿ(reporterkarnataka news):

ಮಲ್ಪೆಯ ತೀರಾ ಬಡ ಕುಟುಂಬದಿಂದ ಬಂದಿರುವ ಲಕ್ಷ್ಮೀ ಅವರು ಹಸಿ ಮೀನು ಖರೀದಿಸಿ, ಅದನ್ನು ಒಣಮೀನಾಗಿಸಿ ಮಾರಾಟ ಮಾಡಿ ಜೀವನ ನಡೆಸುತ್ತಿರುವವರು. ಜೀವನ ಸಂಜೆಯಲ್ಲಾದರೂ ಒಂದು ಸ್ವಂತ ಸೂರು ಹೊಂದಬೇಕೆಂದು ಒಣ ಮೀನು ಮಾರಾಟದಲ್ಲಿ 40 ಸಾವಿರ ರುಪಾಯಿ, ಉಳಿತಾಯ ಮಾಡಿಟ್ಟುಕೊಂಡಿದ್ದರು.

ಮೊದಲಿಂದಲೂ ಕಂಡವರ ಸಮಸ್ಯೆಗೆ ಕರಗುವ, ಮಮ್ಮುಲ ಮರುಗುವ ಗುಣ ರೂಢಿಸಿಕೊಂಡಿದ್ದ ಮಾತೃ ಹೃದಯದ ಲಕ್ಷ್ಮೀ ಅವರಿಗೆ ಕೊರೊನಾ ಸಂದರ್ಭದಲ್ಲಿ ತಮಗಿಂತಲೂ ಬಡವರು ಅನ್ನ, ಆಹಾರಕ್ಕಾಗಿ ಪರಿತಪಿಸುತ್ತಿರುವುದನ್ನು ನೋಡಿ, ಸಹಿಸಿಕೊಳ್ಳಲು ಆಗಲಿಲ್ಲ.

ತಡಮಾಡದೇ, ಮನೆ ಕಟ್ಟಲೆಂದು ತಾವು ಕೂಡಿಟ್ಟಿದ್ದ 40 ಸಾವಿರ ರುಪಾಯಿಯಲ್ಲಿ ಅಕ್ಕಿ, ಬೇಳೆ, ಸಕ್ಕರೆ, ಎಣ್ಣೆ ಖರೀದಿಸಿ ಅದನ್ನು ಬಡವರಿಗೆ ಉಚಿತವಾಗಿ ಹಂಚಿಬಿಟ್ಟರು. ಆ ಮೂಲಕ ಹೃದಯ ಶ್ರೀಮಂತಿಕೆ ಮೆರೆದರು. ಮತ್ತೊಬ್ಬರ ಕಷ್ಟಕ್ಕೆ ನೆರವಾಗಲು ಹಣವಂತಿಕೆಗೂ ಮಿಗಿಲಾಗಿ ಗುಣವಂತಿಕೆ ಬೇಕೆಂಬುದನ್ನು ಸಾರಿದರು.

ತದನಂತರ ಈ ವಿಷಯ ಮಾಧ್ಯಮಗಳ ಮೂಲಕ ತಿಳಿದು ಸ್ಥಳೀಯ ಕಾಂಗ್ರೆಸ್ ಮುಖಂಡರು, ಆಕೆ ಆಹಾರ ಕಿಟ್ ಗಳ ವಿತರಣೆಗೆ ವಿನಿಯೋಗಿಸಿದ್ದ 40 ಸಾವಿರ ರೂಪಾಯಿಯನ್ನು ಮರಳಿಸಿದರು.

ಮಲ್ಪೆ ಬಂದರಿಗೆ ಇಂದು ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ವಿಷಯ ತಿಳಿದ ಡಿ.ಕೆ. ಶಿವಕುಮಾರ್ ಅವರು ಲಕ್ಷ್ಮೀ ಅವರನ್ನು ಭೇಟಿ ಮಾಡಿ, ಆಕೆಯ ಮಾತೃ ವಾತ್ಸಲ್ಯವನ್ನು ಮನತುಂಬಿ ಕೊಂಡಾಡಿದರು. ನಿಮ್ಮಂತಹ ತಾಯಿ ಮಮತೆಯ ಸಂತತಿ ನೂರ್ಮಡಿಯಾಗಲಿ, ಮನುಕುಲಕ್ಕೆ ಮಾದರಿಯಾಗಲಿ ಎಂದು ಬಯಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು