2:31 PM Friday26 - June 2026
ಬ್ರೇಕಿಂಗ್ ನ್ಯೂಸ್
ಎಐ ತಂತ್ರಜ್ಞಾನದಲ್ಲಿ ಗೃಹಿಣಿಯ ಫೋಟೋ ಎಡಿಟ್; 30 ಲಕ್ಷಕ್ಕೆ ಬೇಡಿಕೆ; ಮಹಿಳೆ ಆತ್ಮಹತ್ಯೆಗೆ… ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ… ಚನ್ನಪಟ್ಟಣ | ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಭೀಕರ ಅಪಘಾತ: ಕಾರಿನ ಚಕ್ರ ಸ್ಫೋಟಗೊಂಡು ಚಾಲಕ… ಹಸೆಮಣೆ ಏರಬೇಕಿದ್ದಾಕೆಗೆ ಪಾಪಿ ಯುವಕನಿಂದ ಬೆದರಿಕೆ: ಮಾನಕ್ಕೆ ಅಂಜಿ ಒಂದೇ ಕುಟುಂಬದ ಮೂವರು… ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್… Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;… ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ…

ಇತ್ತೀಚಿನ ಸುದ್ದಿ

ಜಂಗಮ ಸಮಾಜದ ಮಸ್ಕಿ ತಾಲೂಕು ಅಧ್ಯಕ್ಷರಾಗಿ ಘನ್ ಮಟ್ಟದಯ ಸಾಲಿಮಠ ಆಯ್ಕೆ

26/11/2022, 19:56

ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಸ್ಕಿ ಪಟ್ಟಣದ ಗಚ್ಚನ ಹಿರೇಮಠದಲ್ಲಿ ಬೇಡ ಜಂಗಮ ಸಮಾಜ ಹಾಗೂವಮಸ್ಕಿ ಕ್ಷೇತ್ರ ಸಮಾಜ ಬಾಂಧವರು ಬೇಡ ಜಂಗಮರು ಸಮಾಜ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಿಂದ ಬೇಡ ಜಂಗಮ ಹಿರಿಯರ ಮಾರ್ಗ ಸೂಚಿಯ ಮೇರಿಗೆ ಸಲಹೆ ಸೂಚನೆ ಅನಿಸಿಕೆ ಮೂಲಕ ಪ್ರತಿ ಗ್ರಾಮಮಟ್ಟದಲ್ಲಿ ಜಂಗಮ ಸಮಾಜ ಒಗ್ಗಟ್ಟಿಸುವ ಮೂಲಕ ಜಂಗಮರು ದೇವರ ಸ್ವರೂಪಿ ಜೋಳಗೆ ಹಿಡಿದು ಭಿಕ್ಷಾ ಮಾಡುವ ಮೂಲಕ ಜನರಿಗೆ ಆಶೀರ್ವಾದ ಕೊಡುವ ಮೂಲಕ ಪ್ರತಿಯೊಂದು ಗ್ರಾಮ ಮಟ್ಟದಲ್ಲಿ ವೈದ್ಯಕೀಯ ಮಕ್ಕಳಿಗೆ ಶಿಕ್ಷಣ ನೀಡಬೇಕೆಂದು ಹಿರಿಯ ಮುಖಂಡರಾದ ಸಿದ್ದಲಿಂಗಯ್ಯ ಸ್ವಾಮಿ ಕರೆ ನೀಡಿದರು.

ನಂತರ ಸಂವಿಧಾನ ಸಮರ್ಪಣ ದಿನವಾದ ಇಂದು ಅಂಬೇಡ್ಕರ್ ಮೂರ್ತಿ ಹೂವಿನ ಹಾರ ಹಾಕುವುದರ ಮೂಲಕ ಪೂಜೆ ಸಲ್ಲಿಸಲಾಯಿತು. ಶ್ರೀ ಹೊರ ರುದ್ರ ಮುನಿ ಶಿವಾಚಾರ್ಯರ ಆಶೀರ್ವಾದದಿಂದ ಗೌರವ ಅಧ್ಯಕ್ಷರ ಮಾರ್ಗಸೂಚನೆ ಮೇರೆಗೆ ಯಾರದು ಆಕ್ಷೇಪಣೆ ಇಲ್ಲ ಸಂತೋಷವಾಗಿ ಸಂಘಟನೆಯ ಅಧ್ಯಕ್ಷರನ್ನು ಘನಮಟ್ಟದಯ್ಯ ಸಾಲಿಮಠ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು. ನಂತರ ಯುವ ಘಟಕದ ಅಧ್ಯಕ್ಷರಾಗಿ ಬಸವರಾಜ ಸ್ವಾಮಿ ಅಸಮಕಲ್ ಅವರನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಸಿದ್ದಲಿಂಗಯ್ಯ ಸ್ವಾಮಿ ಪಗಡದಲ್ಲಿ ಹಿರೇಮಠ ಹಾಗೂ ಪಂಚಾಕ್ಷರಯ್ಯ ಕಂಬಳಿ ಮಠ ಇವರನ್ನು ಮಾಡಲಾಯಿತು.


ಉಪಾಧ್ಯಕ್ಷರಾಗಿ ನಾಗಯ್ಯ ಸ್ವಾಮಿ ಕಡಾಮುಡಿ ಮಠ ಉದ್ಬಾಳ್ ಹಾಗೂ ಜಗದೀಶ್ ಚಂದ್ರಶೇಖರ ಸ್ವಾಮಿ ಹಾಲಾಪುರ್ ಇವರನ್ನು ಮಾಡಲಾಯಿತು. ಶ್ರೀಗಳಿಂದ ಆಶೀರ್ವಾದ ಮಾಡಲಾಯಿತು. ಪ್ರತಿಯೊಂದು ಕಾರ್ಯದಲ್ಲಿ ಶ್ರೀ ಜಗದ್ಗುರು ಶ್ರೀ ಜಗದ್ಗುರು ರೇಣುಕಾಚಾರ್ಯ ಜಂಗಮ ಸಮಿತಿ ಪ್ರತಿಯೊಂದು ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದು ಬೆಂಗಳೂರಿನಲ್ಲಿ ನಡೆಯುತ್ತಿದ್ದ ಕೇಂದ್ರಬಿಂದು ಬಿಡಿ ಹಿರೇಮಠ ಪೂಜ್ಯರ ಮತ್ತು ಕಲ್ಯಾಣ ಶ್ರೀಗಳ ಸತ್ಯಪ್ರದಪಾದನೆ ಕಾರ್ಯಕ್ರಮದಲ್ಲಿ ಕೈಜೋಡಿಸುವ ನಿಟ್ಟಿನಲ್ಲಿ ಸಂಘಟನೆಯ ಬಲವಾದ ಬಲಿಷ್ಠ ಗೊಳಿಸಲು ಸಮಾಜದವರು ಸಲಹೆ ನೀಡಿದರು ಸುಮಾರು 500ಕ್ಕೂ ಹೆಚ್ಚು ಬೇಡ ಜಂಗಮರು ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು