1:26 PM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಜಂಗಮ ಸಮಾಜದ ಮಸ್ಕಿ ತಾಲೂಕು ಅಧ್ಯಕ್ಷರಾಗಿ ಘನ್ ಮಟ್ಟದಯ ಸಾಲಿಮಠ ಆಯ್ಕೆ

26/11/2022, 19:56

ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಸ್ಕಿ ಪಟ್ಟಣದ ಗಚ್ಚನ ಹಿರೇಮಠದಲ್ಲಿ ಬೇಡ ಜಂಗಮ ಸಮಾಜ ಹಾಗೂವಮಸ್ಕಿ ಕ್ಷೇತ್ರ ಸಮಾಜ ಬಾಂಧವರು ಬೇಡ ಜಂಗಮರು ಸಮಾಜ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಿಂದ ಬೇಡ ಜಂಗಮ ಹಿರಿಯರ ಮಾರ್ಗ ಸೂಚಿಯ ಮೇರಿಗೆ ಸಲಹೆ ಸೂಚನೆ ಅನಿಸಿಕೆ ಮೂಲಕ ಪ್ರತಿ ಗ್ರಾಮಮಟ್ಟದಲ್ಲಿ ಜಂಗಮ ಸಮಾಜ ಒಗ್ಗಟ್ಟಿಸುವ ಮೂಲಕ ಜಂಗಮರು ದೇವರ ಸ್ವರೂಪಿ ಜೋಳಗೆ ಹಿಡಿದು ಭಿಕ್ಷಾ ಮಾಡುವ ಮೂಲಕ ಜನರಿಗೆ ಆಶೀರ್ವಾದ ಕೊಡುವ ಮೂಲಕ ಪ್ರತಿಯೊಂದು ಗ್ರಾಮ ಮಟ್ಟದಲ್ಲಿ ವೈದ್ಯಕೀಯ ಮಕ್ಕಳಿಗೆ ಶಿಕ್ಷಣ ನೀಡಬೇಕೆಂದು ಹಿರಿಯ ಮುಖಂಡರಾದ ಸಿದ್ದಲಿಂಗಯ್ಯ ಸ್ವಾಮಿ ಕರೆ ನೀಡಿದರು.

ನಂತರ ಸಂವಿಧಾನ ಸಮರ್ಪಣ ದಿನವಾದ ಇಂದು ಅಂಬೇಡ್ಕರ್ ಮೂರ್ತಿ ಹೂವಿನ ಹಾರ ಹಾಕುವುದರ ಮೂಲಕ ಪೂಜೆ ಸಲ್ಲಿಸಲಾಯಿತು. ಶ್ರೀ ಹೊರ ರುದ್ರ ಮುನಿ ಶಿವಾಚಾರ್ಯರ ಆಶೀರ್ವಾದದಿಂದ ಗೌರವ ಅಧ್ಯಕ್ಷರ ಮಾರ್ಗಸೂಚನೆ ಮೇರೆಗೆ ಯಾರದು ಆಕ್ಷೇಪಣೆ ಇಲ್ಲ ಸಂತೋಷವಾಗಿ ಸಂಘಟನೆಯ ಅಧ್ಯಕ್ಷರನ್ನು ಘನಮಟ್ಟದಯ್ಯ ಸಾಲಿಮಠ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು. ನಂತರ ಯುವ ಘಟಕದ ಅಧ್ಯಕ್ಷರಾಗಿ ಬಸವರಾಜ ಸ್ವಾಮಿ ಅಸಮಕಲ್ ಅವರನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಸಿದ್ದಲಿಂಗಯ್ಯ ಸ್ವಾಮಿ ಪಗಡದಲ್ಲಿ ಹಿರೇಮಠ ಹಾಗೂ ಪಂಚಾಕ್ಷರಯ್ಯ ಕಂಬಳಿ ಮಠ ಇವರನ್ನು ಮಾಡಲಾಯಿತು.


ಉಪಾಧ್ಯಕ್ಷರಾಗಿ ನಾಗಯ್ಯ ಸ್ವಾಮಿ ಕಡಾಮುಡಿ ಮಠ ಉದ್ಬಾಳ್ ಹಾಗೂ ಜಗದೀಶ್ ಚಂದ್ರಶೇಖರ ಸ್ವಾಮಿ ಹಾಲಾಪುರ್ ಇವರನ್ನು ಮಾಡಲಾಯಿತು. ಶ್ರೀಗಳಿಂದ ಆಶೀರ್ವಾದ ಮಾಡಲಾಯಿತು. ಪ್ರತಿಯೊಂದು ಕಾರ್ಯದಲ್ಲಿ ಶ್ರೀ ಜಗದ್ಗುರು ಶ್ರೀ ಜಗದ್ಗುರು ರೇಣುಕಾಚಾರ್ಯ ಜಂಗಮ ಸಮಿತಿ ಪ್ರತಿಯೊಂದು ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದು ಬೆಂಗಳೂರಿನಲ್ಲಿ ನಡೆಯುತ್ತಿದ್ದ ಕೇಂದ್ರಬಿಂದು ಬಿಡಿ ಹಿರೇಮಠ ಪೂಜ್ಯರ ಮತ್ತು ಕಲ್ಯಾಣ ಶ್ರೀಗಳ ಸತ್ಯಪ್ರದಪಾದನೆ ಕಾರ್ಯಕ್ರಮದಲ್ಲಿ ಕೈಜೋಡಿಸುವ ನಿಟ್ಟಿನಲ್ಲಿ ಸಂಘಟನೆಯ ಬಲವಾದ ಬಲಿಷ್ಠ ಗೊಳಿಸಲು ಸಮಾಜದವರು ಸಲಹೆ ನೀಡಿದರು ಸುಮಾರು 500ಕ್ಕೂ ಹೆಚ್ಚು ಬೇಡ ಜಂಗಮರು ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು