2:07 PM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಶ್ರೀನಿವಾಸಪುರ ಕರಾಡ ಬ್ರಾಹ್ಮಣ ಸುಧಾರಕ ಸಂಘ: ಪತ್ರಕರ್ತ ಮಂದಾರ ರಾಜೇಶ್ ಭಟ್ ಸಹಿತ 11 ಮಂದಿಗೆ ಸನ್ಮಾನ

06/11/2022, 19:48

ಮೂಡಬಿದ್ರೆ(reporterkarnataka.com): ಕರಾಡ ಬ್ರಾಹ್ಮಣ ಸುಧಾರಕ ಸಂಘ ಕೊಡ ಮಾಡುವ ಪ್ರತಿಷ್ಠಿತ ಸನ್ಮಾನ ಪತ್ರಕರ್ತ ಮಂದಾರ ರಾಜೇಶ್ ಭಟ್ ಸಹಿತ 11 ಮಂದಿಗೆ ಲಭಿಸಿದೆ.

ಮೂಡಬಿದ್ರೆ ತಾಲೂಕಿನ ಪುತ್ತಿಗೆ ಗ್ರಾಮದ ಗುಂಡ್ಯಡ್ಕ ಶ್ರೀನಿವಾಸಪುರ ಶ್ರೀ ವಿಠೋಬಾ ರುಕುಮಾಯಿ ದೇವಸ್ಥಾನದ 76ನೇ ಭಜನಾ ಸಪ್ತಾಹದ ಅಂಗವಾಗಿ ಭಾನುವಾರ ಭಜನಾ ಕಾರ್ಯಕ್ರಮದೊಂದಿಗೆ ಗುಂಡ್ಯಡ್ಕ ಶ್ರೀನಿವಾಸಪುರ ಕರಾಡ ಬ್ರಾಹ್ಮಣ ಸುಧಾರಕ ಸಂಘದ 54ನೇ ವಾರ್ಷಿಕ ಮಹಾಸಭೆಯನ್ನು ದೇವಸ್ಥಾನದ ಆವರಣದ ಸಭಾಂಗಣದಲ್ಲಿ ನಡೆಸಲಾಯಿತು.ಈ ಸಂದರ್ಭದಲ್ಲಿ ಕರಾಡ ಬ್ರಾಹ್ಮಣ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹರಿ ಭಟ್ ಕೇಮಾರು, ಸರೋಜಾ ಪಂಡಿತ್ ಈರಂದೋಡಿ, ಲೀಲಾ ಅಂಬೇಕರ್ ಗುಂಡ್ಯಡ್ಕ, ರಾಧಾ ಜಿ ಭಟ್ ಕುಂಡೇಲು ಉಡುಪಿ, ಶಕುಂತಲಾ ಭಟ್ ಕಾಯರ್ಗುಡ್ಡೆ, ರಾಮಕೃಷ್ಣ ಭಟ್ ತಲ್ವಳ್ಕರ್ ಉಡುಪಿ, ಪ್ರಭಾಕರ ಭಟ್ ಕಾರ್ಕಳ, ಚಂದ್ರಮೋಹನ್ ಭಟ್ ಮಂಗಳೂರು ಇವರುಗಳನ್ನು ಗೌರವಿಸಲಾಯಿತು.
ನಂತರದಲ್ಲಿ ವೇದಮೂರ್ತಿ ಸುಬ್ರಮಣ್ಯ ಭಟ್ ಪರಾಡ್ಕರ್, ದಯಾನಂದ ಪಂಡಿತ್ ಮೂಡಬಿದಿರೆ ಹಾಗೂ ಮಂದಾರ ರಾಜೇಶ್ ಭಟ್ ಅವರುಗಳಿಗೆ ವಿಶೇಷ ಸನ್ಮಾನ ನೀಡಿ ಗೌರವಿಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಸಮಾಜ ಸುಧಾರಕ ಸಂಘದ ಗೌರವ ಕಾರ್ಯಾಧ್ಯಕ್ಷರಾದ ಗಿರಿಧರ ಭಟ್ಟ ಪರಾಡ್ಕರ್ ಮಂಗಳೂರು, ಅಧ್ಯಕ್ಷರಾದ ಕೆ ರಾಮಚಂದ್ರ ಭಟ್ ನಾಟೇಕರ್ ಕುಕ್ಕುಡೆಲು, ಉಪಾಧ್ಯಕ್ಷರಾದ ರಾಮಚಂದ್ರ ಪಂಡಿತ್ ಕಾಂತಾವರ ಹಾಗೂ ಸರಸ್ವತಿ ಚಿಂಚಳ್ಕರ್ ಕೊಪ್ಪನ್ದಡ್ಕ, ಕಾರ್ಯದರ್ಶಿ ಚಂದ್ರಶೇಖರ್ ಭಟ್ ಕಟೀಲು, ಜೊತೆ ಕಾರ್ಯದರ್ಶಿ ಸದಾನಂದ ಚಿಂಚಲ್ಕರ್ ಕೊಪ್ಪಂದಡ್ಕ, ಕೋಶಾಧಿಕಾರಿ ಪ್ರಭಾಕರ್ ಬಾಟೆ ಗುಂಡಿಡ್ಕ ಹಾಗೂ ಉಡುಪಿ ವಲಯ ಜಿಲ್ಲಾಧ್ಯಕ್ಷರಾದ ಪಾಂಡುರಂಗ ಲಾಗ್ವನ್ಕರ್ ಉಪಸ್ಥಿತರಿದ್ದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಮಂದಾರ ರಾಜೇಶ್ ಭಟ್ಟರು ತಾನು ಬೆಳೆದು ಬಂದ ಹಾದಿ ಮಂದಾರ ತ್ಯಾಜ್ಯ ದುರಂತ ಸಂದರ್ಭದಲ್ಲಿ ಪಟ್ಟ ಬವಣೆ, ತಾನು ನೀಡುತ್ತಿರುವ ದಾನ ಧರ್ಮಗಳ ಪ್ರಮಾಣ ಮತ್ತು ಕಾರಣ, ತ್ಯಾಜ್ಯ ದುರಂತ ಸಂದರ್ಭದಲ್ಲಿ ತಾನು ಸಂಪೂರ್ಣವನ್ನು ಕಳೆದುಕೊಂಡು ಸಮಾಜದ ಮುಂದೆ ಕೈಚಾಚಿ ಕಳೆದ ದಿನಗಳು, ತನಗೆ ಇದುವರೆಗೆ ಬಂದ ಪ್ರಶಸ್ತಿಗಳ ವಿವರ ಕೊನೆಯಲ್ಲಿ ತನಗೆ ಗೌರವ ಡಾಕ್ಟರೇಟ್ ಬಂದ ಬಗೆ ಎಲ್ಲಾ ವಿವರಗಳನ್ನು ಸಹಸ್ರಾರು ಸಂಖ್ಯೆಯಲ್ಲಿ ಬಂದ ಕರಾಡ ಸಮಾಜದ ಬಂಧುಗಳಿಗೆ ವಿವರಿಸಿದರು.

“ವೈದಿಕ ಸಾಮ್ರಾಟ್ ” ಬಿರುದಾಂಕಿತ ಏರ್ಪಲೆ ಸುಬ್ರಮಣ್ಯ ಭಟ್ ಮಾತನಾಡಿ ಪೂಜೆ ಪುನಸ್ಕಾರಗಳ ಮಹತ್ವ, ತಂದೆ ತಾಯಿಗಳ ಮಹತ್ವ, ಮನಮುಟ್ಟುವಂತೆ ವಿವರಿಸಿದರು , ಸನ್ಮಾನಿತ ದಯಾನಂದ ಪಂಡಿತ ಮಾತನಾಡಿ ಕಾರ್ಯಕ್ರಮಗಳಲ್ಲಿ ಆಹಾರದ ಮಹತ್ವ, ಆಹಾರ ನಷ್ಟವಾಗದಂತೆ ಬದಲಾಗಬೇಕಾದ ವಿಧಿ ವಿಧಾನಗಳ ಬಗ್ಗೆ ಕಿವಿಮಾತುಗಳು, ಪರಿಸರ ಸಂರಕ್ಷಣೆ ಬಗ್ಗೆ ವಿವರಿಸಿದರು. ಚಂದ್ರಶೇಖರ್ ಭಟ್ ಕಟೀಲು ಹಾಗೂ ರಾಮಚಂದ್ರ ಪಂಡಿತ್ ಸಭಾ ಕಾರ್ಯಕ್ರಮ ನಿರೂಪಣೆ ಮತ್ತು ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು