ಇತ್ತೀಚಿನ ಸುದ್ದಿ
ಅಗಸ್ಟ್ 1ರಿಂದ ಆಗುಂಬೆ ಘಾಟಿ ಮತ್ತೆ ಬಸ್ ಸಂಚಾರಕ್ಕೆ ಮುಕ್ತ: ಲಾರಿ ಸಹಿತ ಘನ ವಾಹನಗಳಿಗೆ ನಿಷೇಧ
30/07/2022, 11:04
ಕಾರ್ಕಳ(reporterkarnataka.com): ಅಗಸ್ಟ್ 1 ರಿಂದ ಅಗುಂಬೆ ಘಾಟಿಯಲ್ಲಿ ಬಸ್ ಹಾಗೂ ಲಘು ವಾಹನಗಳಿಗೆ ಸಂಚಾರಕ್ಕೆ ಮುಕ್ತವಾಗಲಿದೆ.
ಮಲ್ಪೆ ಮೊಣಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಅಗುಂಬೆ ಘಾಟಿಯ11ನೇ ತಿರುವಿನಲ್ಲಿ ಕುಸಿತ ಉಂಟಾಗಿತ್ತು. ಜೊತೆಗೆ ರಸ್ತೆಯ ತಡೆಗೋಡೆಯು ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಜುಲೈ10 ರಂದು ಸಂಚಾರಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದರು. ಜುಲೈ13ರಂದು ಲಘು ವಾಹನಗಳ ಪ್ರಯಾಣಕ್ಕೆ ಅನುವು ಮಾಡಲಾಗಿತ್ತು. ಅಗಸ್ಟ್ 1 ರಿಂದ ಸಾರ್ವಜನಿಕ ರ ಕೋರಿಕೆಯಂತೆ ಬಸ್ ಹಾಗೂ ಲಘು ವಾಹನಗಳಿಗೆ ಮುಕ್ತವಾಗಿ ಸಂಚರಿಸಬಹುದಾಗಿದೆ. ಅದರೆ ಲಾರಿ ಟಿಪ್ಪರ್ ಸೇರಿದಂತೆ ಘನ ವಾಹನಗಳಿಗೆ ಅಗಸ್ಟ್ 30 ರ ವರೆಗೆ ನಿಷೇಧ ಹೇರಲಾಗಿದೆ.














