1:43 PM Saturday9 - May 2026
ಬ್ರೇಕಿಂಗ್ ನ್ಯೂಸ್
ಚಾಲಕನಿಗೆ ಹಠಾತ್ ಕಾಣಿಸಿಕೊಂಡ ಎದೆನೋವು: ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಮಗುಚಿದ ಖಾಸಗಿ… ಮೂಡಿಗೆರೆ: ಬಾಳೂರು ಪೊಲೀಸರ 12 ತಾಸುಗಳ ಕಾರ್ಯಾಚರಣೆ ಬಳಿಕ ಪತ್ತೆಯಾದ ಒಂದೂವರೆ ವರ್ಷದ… Shivamogga | ತೀರ್ಥಹಳ್ಳಿ: ವಾಹನದಲ್ಲಿ ಅಕ್ರಮ ಗೋ ಸಾಗಾಟ; ಮೂವರು ವಶಕ್ಕೆ ರಕ್ತ ಸಂಬಂಧವನ್ನೇ ಮರೆತು ಹಸೆಮಣೆಗೆ ಏರಿದ ಅಕ್ಕ ತಮ್ಮ..! ದುಬಾರೆ | ಅರಣ್ಯ ಸಚಿವರಿಗೆ ಘೇರಾವ್ ಯತ್ನ: ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ ಪಶ್ಚಿಮ ಬಂಗಾಳದಲ್ಲಿ ನೂತನ ಸರಕಾರ ರಚನೆ: ಚುನಾವಣಾ ಆಯೋಗ ಅಧಿಸೂಚನೆ ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳು… ಪಶ್ಚಿಮ ಬಂಗಾಳ: ರಾಜೀನಾಮೆ ನೀಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಾಕರಣೆ ಧಾರವಾಡದಲ್ಲಿ ಬೌದ್ಧ ಸನ್ಯಾಸಿ ಕೊಲೆ ಪ್ರಕರಣ: ಮಹಾರಾಷ್ಟ್ರದಲ್ಲಿ 3 ಮಂದಿ ಆರೋಪಿಗಳ ಅರೆಸ್ಟ್ ಸಿದ್ದಾಪುರ: ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ದಾರುಣ ಸಾವು

ಇತ್ತೀಚಿನ ಸುದ್ದಿ

ಮಾಯೊದಪ್ಪೆ ಮಂತ್ರದೇವತೆಗೆ ಮುಹೂರ್ತ: ಕಲಾವಿದೆರ್‌ ಕುಡ್ಲ ತಂಡದಿಂದ ಪೌರಾಣಿಕ ನಾಟಕ

15/06/2022, 20:51

ಮಂಗಳೂರು(reporterkarnataka.com): ಪ್ರಾಪ್ತಿ ಕಲಾವಿದೆರ್‌ ಕುಡ್ಲ ಪ್ರದರ್ಶಿಸಲಿರುವ ಕಲಾ ಸವ್ಯಸಾಚಿ ಪ್ರಶಾಂತ್‌ ಸಿ.ಕೆ. ರಚಿಸಿ ನಿರ್ದೇಶಿಸಿರುವ ಮಾಯೊದಪ್ಪೆ ಮಂತ್ರದೇವತೆ ತುಳು ಪೌರಾಣಿಕ ನಾಟಕದ ಮುಹೂರ್ತ ಕದ್ರಿಮಂಜುನಾಥೇಶ್ವರ ಕ್ಷೇತ್ರದಲ್ಲಿ ನಡೆಯಿತು.

ಪೌರಾಣಿಕ ರಂಗಭೂಮಿಯ ದಿಗ್ಗಜರಾದ ಜಿ.ಕೆ.ರೈ, ಸತೀಶ್‌ ಕದ್ರಿ, ಉದಯ್‌ ಆಚಾರ್‌, ಮಾಧವ ಇರುವೈಲ್‌ ಜತೆ ಸುಹಾನ್‌ ಕುಳಾಯಿ ಮೊದಲಾದ ಯುವ ಕಲಾವಿದರ ಸೇರ್ಪಡೆಯೊಂದಿಗೆ ನಾಟಕ ರಂಗಭೂಮಿ ಪಯಣಕ್ಕೆ ಸಜ್ಜಾಗುತ್ತಿದೆ.


ಮುಹೂರ್ತ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಂಗಭೂಮಿ ನಿರ್ದೇಶಕ ಕಿಶೋರ್‌ ಡಿ.ಶೆಟ್ಟಿ ಮಾತನಾಡಿ, ಪೌರಾಣಿಕ ನಾಟಕದ ಕುರಿತು ಪ್ರೇಕ್ಷಕರ ನಿರೀಕ್ಷೆಯೂ ಬೆಟ್ಟದಷ್ಟಿರುತ್ತದೆ, ಖರ್ಚುವೆಚ್ಚ, ಕಷ್ಟ ನಷ್ಟಗಳೂ ಹೆಚ್ಚು, ಕಷ್ಟ ಪಟ್ಟು ದುಡಿದರೆ ರಂಗಭೂಮಿಯಲ್ಲಿ ಹೆಸರು ಅಚ್ಚಳಿಯದೆ ಉಳಿಯುತ್ತದೆ ಎಂದರು.

ಉದ್ಘಾಟಿಸಿದ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಮಾತನಾಡಿ, ಸಮೃದ್ಧವಾದ ತುಳು ರಂಗಭೂಮಿಯಲ್ಲಿ ಯುವ ಕಲಾವಿದರಿಗೆ, ಪ್ರಯೋಗಶೀಲರಿಗೆ ಹೆಚ್ಚಿನ ಅವಕಾಶ ಇದೆ, ಇದನ್ನು ಇತ್ತೀಚೆಗೆ ಪೌರಾಣಿಕ ನಾಟಕಗಳು ಮಾಡುತ್ತಿರುವ ಪ್ರದರ್ಶನಗಳ ದಾಖಲೆಯೇ ಹೇಳುತ್ತದೆ ಎಂದರು.

ಕ್ಯಾಟ್ಕ ಸಂಘದ ಅಧ್ಯಕ್ಷ ಮೋಹನ ಕೊಪ್ಪಲ ಮಾತನಾಡಿ, ಕರೋನಾ ಬಳಿಕ ಕಲಾವಿದರಿಗೆ ಮತ್ತೆ ಒಳ್ಳೆಯ ಅವಕಾಶಗಳು ಸಿಗುತ್ತಿದ್ದು, ಸದುಪಯೋಗಪಡಿಸಿಕೊಳ್ಳಿ, ನಾಟಕ ಅತಿ ಹೆಚ್ಚು ಪ್ರದರ್ಶನಗಳನ್ನು ನೀಡಲಿ ಎಂದು ಹಾರೈಸಿದರು.

ನಿರ್ದೇಶಕ ಪ್ರಶಾಂತ್‌ ಸಿ.ಕೆ. ಸ್ವಾಗತಿಸಿದರು. ವಿಜೆ ಮಧುರಾಜ್‌ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು