11:28 PM Thursday2 - May 2024
ಬ್ರೇಕಿಂಗ್ ನ್ಯೂಸ್
ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:… ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ, ಕಾನೂನು ಸುವ್ಯವಸ್ಥೆ ಚಿಂತಾಜನಕ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳ ರೊಟ್ಟಿ ಸವಿದ ಪ್ರಧಾನಿ ಮೋದಿ

ಇತ್ತೀಚಿನ ಸುದ್ದಿ

ವೈದ್ಯರ ಹೂ ಕುಂಡ ಎತ್ತುವ ದಮ್ಮು ಇಲ್ಲದ ಪಾಲಿಕೆ ಆಡಳಿತ, ಅಕ್ರಮ ಕಟ್ಟಡಕ್ಕೆ ಕೈಹಾಕಿತೇ?: ಇದು ಮಂಗಳೂರಿಗರ ಪ್ರಶ್ನೆ

18/05/2022, 11:16

ಮಂಗಳೂರು(reporterkarnataka.com): ಪ್ರತಿಷ್ಠಿತರ ಅತಿಕ್ರಮಣದ ವಿರುದ್ಧ ಕೈಚೆಲ್ಲಿದ ಮಂಗಳೂರು ಮಹಾನಗರಪಾಲಿಕೆ ಆಡಳಿತ ಸಾರ್ವಜನಿಕರ ಛೀಮಾರಿಗೆ ಒಳಗಾಗಿದೆ. ನಗರದ ಡೊಂಗರಕೇರಿಯಲ್ಲಿ ವೈದ್ಯರೊಬ್ಬರು ಸಾರ್ವಜನಿಕ ಫುಟ್ ಪಾತ್ ಪ್ರದೇಶವನ್ನು ಅತಿಕ್ರಮಣ ಮಾಡಿ ಇಟ್ಟಿದ್ದ ಹೂ ಕುಂಡವನ್ನು ತೆಗೆಸುವಲ್ಲಿ ವಿಫಲವಾಗಿದೆ. ಗಡುವು ಮುಗಿದರೂ ಹೂ ಕುಂಡ ತೆರವಾಗದಿರುವುದನ್ನು ಕಂಡು ಮತ್ತೆ ಸಾಮಾಜಿಕ ಕಾರ್ಯಕರ್ತರೇ ತೆರವುಗೊಳಿಸಿದ ಘಟನೆ ನಡೆದಿದೆ.


ಹಲವು ತಿಂಗಳಿಗಳಿಂದ ಡೊಂಗರಕೇರಿಯಲ್ಲಿ ಅನಧಿಕೃತವಾಗಿ ಪ್ರತಿಷ್ಠಿತ ಹೃದಯತಜ್ಞ ವೈದ್ಯರ ಮನೆಯ ಮುಂಭಾಗದಲ್ಲಿ ಇಟ್ಟಂಥಹ ಹೂವಿನ- ಕುಂಡದ ವಿರುದ್ಧ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ, ದಕ್ಷಿಣ ವಿಧಾನ ಸಭೆ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್, ಬಂದರು ಪೊಲೀಸ್ ಠಾಣೆಗೆ ಈ ವಿಚಾರಗಳ ಬಗ್ಗೆ ಮನವಿಯನ್ನ ಸಲ್ಲಿಸಲಾಗಿತ್ತು

ರಾಜಕೀಯ ಒತ್ತಡಕ್ಕೆ ಮಣಿದ ಪಾಲಿಕೆ ಆಡಳಿತ ತರವುಗೊಳಿಸುವಲ್ಲಿ ವಿಫಲವಾಗಿತ್ತು. ಇದರಿಂದ ಡೊಂಗರಕೇರಿ ಪರಿಸರದ ನಾಗರೀಕರಿಗೆ ಯಾವುದೇ ರೀತಿಯಲ್ಲಿ ನ್ಯಾಯ ಸಿಗಲಿಲ್ಲ. ಮೇ 4ರಂದು ಅದೇ ಸ್ಥಳದಲ್ಲಿ ಪ್ರತಿಭಟನೆ ಮಾಡಿ ಮಂಗಳೂರು ಮಹಾನಗರ ಪಾಲಿಕೆಗೆ, ಮಾಧ್ಯಮ ಸ್ನೇಹಿತರ ಮುಖಾಂತರ ಮುಂದಿನ 10 ದಿನಗಳಲ್ಲಿ ಈ ಹೂವಿನ ಕುಂಡವನ್ನು ತೆರವುಗೊಳಸದೇ ಇದ್ದಲ್ಲಿ ಸಾರ್ವಜನಿಕರೇ ಸೇರಿ ಮಹಾನಗರ ಪಾಲಿಕೆ ಮಾಡುವಂತಹ ಕೆಲಸ ಮಾಡಿ ತೋರಿಸುತ್ತೇವೆ ಎಂಬ  ಸ್ಪಷ್ಟ ಎಚ್ಚರಿಕೆಯ ಸಂದೇಶವನ್ನು ಕೂಡ ರವಾನಿಸಲಾಗಿತ್ತು. ಇದೀಗ ಶಾಂತಿ ಸಂದೇಶವನ್ನು ಜಗತ್ತಿಗೆ ಸಾರಿದ ಗೌತಮ ಬುದ್ಧರ ಬುದ್ಧ ಪೂರ್ಣಿಮೆಯ ವಿಶೇಷ ದಿನದಂದು ಸಾಮಾಜಿಕ ಕಾರ್ಯಕರ್ತರ ಮಂಜುಳಾ ನಾಯಕ್ ನೇತೃತ್ವದಲ್ಲಿ ಹೂ ಕುಂಡಗಳನ್ನು ತೆರವುಗೊಳಿಸಲಾಯಿತು.

ಸಾರ್ವಜನಿಕರ ಸ್ಥಳದಲ್ಲಿ ಸಾರ್ವಜನಿಕರಿಗೆ ತೊಂದರೆಯಾದಾಗ ಪಾಲಿಕೆ ಆಡಳಿತ ಸ್ಪಂದಿಸಿ ತೆರವುಗೊಳಿಸಬೇಕಿತ್ತು. ಆದರೆ ಈ ಕೆಲಸವನ್ನು ಪಾಲಿಕೆ ಆಡಳಿತ ಮಾಡಿಲ್ಲ. ಇಲ್ಲಿನ ಕಾರ್ಪೊರೇಟರ್,  ಮೇಯರ್ ಮುಂತಾದವರು ಹಣವಂತರ, ಪ್ರಭಾವಿಗಳ ಓಟು ಮಾತ್ರ ಪಡೆದು ಗೆದ್ದವರೇ? ಸಾಮಾನ್ಯರ ಓಟು ಇವರಿಗೆ ಬಿದ್ದಿಲ್ಲವೇ? ಹೂ ಕುಂಡು ಎತ್ತುವ ದಮ್ಮು ಇಲ್ಲದ ಪಾಲಿಕೆ ಆಡಳಿತ ಮತ್ತೆ ಅಕ್ರಮ ಕಟ್ಟಡಗಳಿಗೆ ಕೈ ಹಾಕಿತೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಪಾಲಿಕೆ ಮೇಯರ್ ಮತ್ತು ಕಮಿಷನರ್ 
ಉತ್ತರಿಸಬೇಕು.

ಇತ್ತೀಚಿನ ಸುದ್ದಿ

ಜಾಹೀರಾತು