12:55 AM Sunday21 - September 2025
ಬ್ರೇಕಿಂಗ್ ನ್ಯೂಸ್
ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ಜಾಗೃತಿ: ಬೆಂಗಳೂರು ಇಸ್ಕಾನ್ ದೇವಾಲಯಕ್ಕೆ ಚಿನ್ನದ ಬಣ್ಣದ ಬೆಳಕು ನವೆಂಬರ್ ನಿಂದ ಮಾಹಿತಿ ಹಕ್ಕು ಅದಾಲತ್: ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಗುರಿ ಪಿಡಿಒ ಜೇಷ್ಠಾತಾ ಪಟ್ಟಿ ನ್ಯಾಯಸಮ್ಮತವಾಗಿ ಅಂತಿಮಗೊಳಿಸಲು ಸೂಕ್ತ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ ಮಂಗಳೂರಿನಲ್ಲಿ ಧರ್ಮದ ಹೆಸರಲ್ಲಿ ಜೈಲಿಗೆ ಹೋದವರು, ಕೊಲೆ ಆದವರೆಲ್ಲಾ ಹಿಂದುಳಿದವರೇ ಆಗಿದ್ದಾರೆ: ಸಿಎಂ… ವಿರಾಜಪೇಟೆ ಆರೆಂಜ್ ಸ್ಪಾ -ಬ್ಯೂಟಿ ಪಾರ್ಲರ್ ದಾಳಿ ಪ್ರಕರಣ: ನಾಲ್ವರು ಪ್ರಮುಖ ಆರೋಪಿಗಳ… Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್… ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ…

ಇತ್ತೀಚಿನ ಸುದ್ದಿ

ವಿಜಯನಗರ ಪೂಜಾರಹಳ್ಳಿ ತಾಂಡ: ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಗಾರೆ ಪಾಠ.!?

17/05/2022, 19:54

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com 

ಜಿಲ್ಲೆಯ ಕೂಡ್ಲಿಗಿ ತಾಲೂಕು ಪೂಜಾರಹಳ್ಳಿ ತಾಂಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, ಮೇ17ರಂದು ಕೆಲ ಮಕ್ಕಳನ್ನು ಬಳಸಿ ಶಾಲೆ ಸ್ವಚ್ಚತೆ ಮಾಡಿಸಲಾಗಿದೆ. ಶಾಲಾ ಕೊಠಡಿಯ ಮೇಲೆ ಮಕ್ಕಳನ್ನು ಹತ್ತಿಸಿ ಮಾಳಿಗಿ ಮೇಲ್ಭಾಗದಲ್ಲಿದ್ದ, ಭಾರೀ ಗಾತ್ರದ ಸಿಮೆಂಟ್ ತ್ಯಾಜ್ಯದ ಗುಪ್ಪೆಯನ್ನು ತೆರವುಗೊಳಿಸಲು ಮಕ್ಕಳನ್ನು ಬಳಸಲಾಗಿದೆ.   ಮಕ್ಕಳನ್ನು ಕಟ್ಟಡದ ಮೇಲ್ಭಾಗದ ಚಾವಣೆ ಮೇಲೆ ಹತ್ತಲು ತಿಳಿಸಿದ್ದು, ಕಸ ಹಾಗೂ ತ್ಯಾಜ್ಯ ನೀರು ಮತ್ತು ಸಿಮೆಂಟ್ ತ್ಯಾಜ್ಯವನ್ನು ಕೀಳಲು ಸೂಚಿಸಿದ್ದಾರೆ.

ತ್ಯಾಜ್ಯ ತೆಗೆಯಲು ತಾಸು ಗಟ್ಟಲೆ ಮಕ್ಕಳಿಗೆ ಸಾಮಾಗ್ರಿಗಳನ್ನು ನೀಡಿ ತಾಸುಗಟ್ಟಲೆ ಕೆಲಸ ಮಾಡಿಸಲಾಗಿದೆ. ಶಾಲಾ ಬಿಸಿಯೂಟ ಕೋಣೆಯ ಮೇಲ್ಭಾಗದಲ್ಲಿದ್ದ ಕಸ ಹಾಗೂ ತ್ಯಾಜ್ಯ  ಸಿಮೆಂಟ್ ಕಿತ್ತು ತೆಗೆಯಲು, ಅವರಿಗೆ ಸುತ್ತಿಗೆ ಹಾಗೂ ಕಿರಿ ಹಾರೆ ಕೊಟ್ಟು ಕೆಲಕ್ಕೆ ಬಳಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಸಲಿಗೆ ಪೂಜಾರ ಹಳ್ಳಿ ತಾಂಡ ಕೂಡ್ಲಿಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಯುವರಾಜ ನಾಯಕ ರವರ ಅಜ್ಜಿಯ ತವರು ಊರೆಂದು ತಿಳಿದುಬಂದಿದೆ. ಬಿ.ಇ.ಓರವರ ನಂಟಿರುವ ಗ್ರಾಮದ ಶಾಲೆಯಲ್ಲಿ ಈ ದುರಾವಸ್ತೆ ಜರುಗಿದೆ. ಶಾಲಾವರಣ ದನಗಳ ಕೊಟ್ಟಿಗೆ ರೂಪದಲ್ಲಿದೆ. ಕಸ ತ್ಯಾಜ್ಯದಿಂದ ಶಾಲಾವರಣ ತುಂಬಿದೆ. ಮಳೆ ನೀರು ನಿಂತು ಕೊಚ್ಚೆ ಗುಂಡಿ ನಿರ್ಮಾಣವಾಗಿದೆ. ಆದರೂ ಸಂಬಂಧಿಸಿದವರು ಕ್ರಮ ಜರುಗಿಸಿಲ್ಲ. ಮಕ್ಕಳಿಗೆ ಶಿಸ್ಥಿನೊಂದಿಗೆ ಶಿಕ್ಷಣ ನೀಡಬೇಕಾಗಿರುವ ಗುರುಗಳು, ಅವರೇ ನಿಂತು ಮಕ್ಕಳಿಗೆ ಗಾರೆ ಹಾಗೂ ಕಸ ಮತ್ತು ಸಿಮೆಂಟ್,ತ್ಯಾಜ್ಯ ನೀರು ಬಳಿಯಲು ಬಳಸಿಕೊಂಡಿದ್ದಾರೆ, ಏನೂ ತಿಳಿಯದ ಮಕ್ಕಳಿಗೆ ಶಿಕ್ಷಣ ನೀಡದೇ ಅವರಿಗೆ ಗಾರೆ ಕೆಲದ ತರಬೇತಿ ನೀಡಿದಂತಹ ದೃಶ್ಯ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ.ಈ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ, ಹಾಗೂ ನಾಗರೀಕರಲ್ಲಿ ಕೆಲವರಲ್ಲಿ ಮಾತ್ರ ಪರವಾದ ಅಭಿಪ್ರಾಯವಿದೆ. ಬಹುತೇಕರಲ್ಲಿ ಖಂಡನೀಯ ಅಭಿಪ್ರಾಯ ವ್ಯಕ್ತವಾಗಿದೆ. ಸಂಬಂಧಿಸಿದಂತೆ ಸಿಬ್ಬಂದಿ ವಿರುದ್ಧ ಶಿಸ್ಥು ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು