7:09 AM Thursday10 - July 2025
ಬ್ರೇಕಿಂಗ್ ನ್ಯೂಸ್
ಮಂಗಳೂರಿನ ಪೆಟ್ರೋಲಿಯಂ ಕಂಪನಿಗಳ ಸಂಬಂಧಿತ ದುರಂತ ನಿರ್ವಹಣೆಗೆ ಅಗ್ನಿಶಾಮಕ ಇಲಾಖೆಯ ಸಶಕ್ತಗೊಳಿಸಲಾಗಿದೆ: ಗೃಹ… ಕೊಪ್ಪ ಮೊರಾರ್ಜಿ‌ ವಸತಿ ಶಾಲೆಯ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಪ್ರಿನ್ಸಿಪಾಲ್, ವಾರ್ಡನ್ ಅಮಾನತು:… ಕೊಲೆ ಪ್ರಕರಣ: ಯೆಮೆನ್‌ನಲ್ಲಿ ಮರಣ ದಂಡನೆಗೆ ಒಳಗಾಗಿರುವ ಕೇರಳದ ನರ್ಸ್ ನಿಮಿಷಾಗೆ ಜುಲೈ… ನಂಜ ಈ ಪಣಿ ಮಾಡಿತಾಮಿ ಸಾರೂ: ವಿರಾಜಪೇಟೆ ಶಾಸಕರ ಮುಂದೆ ಕೆದರಿದ ಕೂದಲಿನ,… ಪುನರ್ವಸು ಮಳೆ ಅಬ್ಬರ: ಕೊಚ್ಚಿ ಹೋಗುವ ಭೀತಿಯಲ್ಲಿ ತೀರ್ಥಹಳ್ಳಿಯ ಕುನ್ನಿಕೇವಿ ಸೇತುವೆ! ತುಂಗಾ ಕಮಾನು ಸೇತುವೆ ಮೇಲೆ ಹರಿಯುತ್ತಿದೆ ನೀರು!: ಹೆದ್ದಾರಿ ಇಂಜಿನಿಯರ್ ಗಳ ಅದ್ಬುತ… ಶೈಕ್ಷಣಿಕ ಧನ ಸಹಾಯ ಪಾವತಿಸಲು ಆಗ್ರಹಿಸಿ ಜುಲೈ 9ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ… Kodagu | 19 ವರ್ಷದಲ್ಲಿ ದಾಖಲೆ ಸೃಷ್ಟಿಸಿದ ಹಾರಂಗಿ ಡ್ಯಾಮ್: ಜಲಾಶಯಕ್ಕೆ ಹರಿದು… Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ…

ಇತ್ತೀಚಿನ ಸುದ್ದಿ

ಉಕ್ರೇನ್‌ನಿಂದ ವಾಪಸ್ಸಾದ ಕೋಲಾರದ ಮೋನಿಷಾ ಪ್ರಿಯಾ: ಕೇಂದ್ರ ಸರಕಾರ, ರಾಯಭಾರ ಕಚೇರಿ ಸಿಬ್ಬಂದಿಗೆ ಧನ್ಯವಾದ 

07/03/2022, 21:55

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಕೋಲಾರ ಎಪಿಎಂಸಿ ನೌಕರ ಮುನಿರಾಜು ಅವರ ಸಹೋದರ ರಾಜ್ ಕುಮಾರ್ , ಸುಕನ್ಯಾ ದಂಪತಿ ಪುತ್ರಿ ಮೋನಿಷಾಪ್ರಿಯ ಕಳೆದ ರಾತ್ರಿ ಯುದ್ಧಪೀಡಿತ ಉಕ್ರೇನ್‌ನಿಂದ ವಾಪಸ್ಸಾಗಿದ್ದು , ಭಾರತ ಸರ್ಕಾರ ಹಾಗೂ ರಾಯಭಾರ ಕಚೇರಿ ನೀಡಿದ ನೆರವಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು , ಬಂಕರ್‌ಗಳು , ಮೆಟ್ರೋ ನಿಲ್ದಾಣಗಳಲ್ಲಿ ನಾವು ತಂಗಿದ್ದೆವು , ಅತ್ಯಂತ ಕಷ್ಟದ ದಿನಗಳನ್ನು ನೋಡಬೇಕಾಯಿತು. ನಾವಿದ್ದ ಹಾಸ್ಟೆಲ್‌ಗೂ ಭಾರತದ ಧ್ವಜ ಕಟ್ಟಿದ್ದು , ಧ್ವಜ ಹಿಡಿದೇ ಗಡಿ ತಲುಪಿದ್ದು ನಮಗೆ ನೆರವಾಯಿತು ಎಂದರು . ಉಕ್ರೇನ್‌ನೊಳಗೆ ನಮ್ಮ ಭಾರತದ ವಿಮಾನಗಳು ಬರುವ ಹಾಗಿರಲಿಲ್ಲ. ಯುದ್ಧ ಭೀತಿ ಹಾಗೂ ವಿಮಾನ ನಿಲ್ದಾಣಗಳು ಧ್ವಂಸಗೊಂಡಿದ್ದವು.

ಕಷ್ಟಪಟ್ಟು ಗಡಿ ತಲುಪುವಂತೆ ನಮ್ಮ ರಾಯಭಾರ ಕಚೇರಿ ನಿರ್ದೇಶನ ನೀಡಿತ್ತು . ರೈಲುಗಳಲ್ಲಿ ಬರುವಾಗಲೂ ಅಲ್ಲಲ್ಲಿ ಬಾಂಬ್ ಸದ್ದು ಕೇಳಿಸುತ್ತಿದ್ದರಿಂದ ಪ್ರಾರ್ಥನೆ ಮಾಡಿಕೊಂಡು ಬಂದು ಗಡಿ ತಲುಪಿದೆವು ಎಂದರು .

ಗಡಿಯಿಂದ ನಮ್ಮ ಭಾರತೀಯ ರಾಯಭಾರ ಸಿಬ್ಬಂದಿ ನಮ್ಮನ್ನು ಅತ್ಯಂತ ಉತ್ತಮ ರೀತಿಯಲ್ಲಿ ನೋಡಿಕೊಂಡರು ನಾವಿಂದು ಬದುಕಿ ಬಂದಿದ್ದೇವೆ ಎಂಬುದೇ ಅತಿಹೆಚ್ಚ ಸಂತಸ , ಭಾರತ ಸರ್ಕಾರ , ರಾಜಭಾರ ಕಚೇರಿಗೆ ನಾವು ಋಣಿಯಾಗಿದ್ದೇವೆ ಎಂದು ತಿಳಿಸಿದರು . 

ಕೋಲಾರದ ಎಪಿಎಂಸಿ ನೌಕರ ಮುನಿರಾಜು ಅವರ ಸಹೋದರ ರಾಜ್‌ಕುಮಾರ್‌ , ಸುಕನ್ಯಾ ದಂಪತಿ ಪುತ್ರಿ ಮೋನಿಷಾಪ್ರಿಯ ಕಳೆದ ರಾತ್ರಿ ಯುದ್ಧಪೀಡಿತ ಉಕ್ರೇನ್‌ನಿಂದ ವಾಪಸ್ಸಾಗಿದ್ದು , ಭಾರತ ಸರ್ಕಾರ ಹಾಗೂ ರಾಯಭಾರ ಕಚೇರಿ ನೀಡಿದ ನೆರವಿಗೆ ಧನ್ಯವಾದ ಸಲ್ಲಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು