ಇತ್ತೀಚಿನ ಸುದ್ದಿ
ವಾರಣಾಸಿಯಲ್ಲಿ ವಿಶ್ವನಾಥ ಧಾಮ ಪ್ರಧಾನಿ ಲೋಕಾರ್ಪಣೆ: ಗಚ್ಚಿ ಮಠದಲ್ಲಿ ನೇರ ಪ್ರಸಾರ
13/12/2021, 20:01
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka.com
ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಕಾಶಿ ವಿಶ್ವನಾಥ ಧಾಮವನ್ನು ಲೋಕಾರ್ಪಣೆ ಮಾಡಿದ್ದು,ಕಾರ್ಯಕ್ರಮವನ್ನು ಮಸ್ಕಿ ಸುಕ್ಷೇತ್ರ ಗಚ್ಚಿನ ಹಿರೇಮಠದ ಷಟಸ್ಥಲ ಬ್ರಹ್ಮಶ್ರೀ ವರ ರುದ್ರಮುನಿ ಶಿವಾಚಾರ್ಯರು ಮಹಾಸ್ವಾಮಿಗಳ ಅವರ ಗಚ್ಚಿನ ಹಿರೇಮಠದಲ್ಲಿ ನೇರ ಪ್ರಸಾರ ಮಾಡಲಾಯಿತು.




ಮಾಜಿ ಶಾಸಕ ಪ್ರತಾಪ ಗೌಡ ಪಾಟೀಲ್ ಹಾಗೂ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶರಣ ಬಸವ ಸೊಪ್ಪಿಮಠ, ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ನಾಗರಾಜ್ ಯಂಬಲದ, ಪದಾಧಿಕಾರಿಗಳಾದ ಮಲ್ಲಿಕಾರ್ಜುನ್ ಬ್ಯಾಳಿ, ಮಲ್ಲಿಕಾರ್ಜುನ್ ಬೈಲಗುಡ್ಡ, ಶ್ರೀಧರ್ ಪಾಟೀಲ್, ಕುಡಬೂರು ಎರಿಸ್ವಾಮಿ ಅಂಗಡಿ, ಸ್ಥಳೀಯ ಮುಖಂಡರು ಗುರುಹಿರಿಯರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.














