ಇತ್ತೀಚಿನ ಸುದ್ದಿ
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಪಟ್ಟಿ ಪ್ರಕಟ; ದಕ್ಷಿಣ ಕನ್ನಡದಿಂದ ಮಂಜುನಾಥ ಭಂಡಾರಿ ಸ್ಪರ್ಧೆ
22/11/2021, 22:21

ಬೆಂಗಳೂರು(reporterkarnataka.com): ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತನ್ನ 17 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಸಂಜೆ ಬಿಡುಗಡೆ ಮಾಡಿದ್ದು, ದಕ್ಷಿಣ ಕನ್ನಡದಿಂದ ಮುಂಜುನಾಥ ಭಂಡಾರಿ ಸ್ಪರ್ಧಿಸಲಿದ್ದಾರೆ.
ರಾಜ್ಯ ವಿಧಾನ ಪರಿಷತ್ತಿನ ಒಟ್ಟು 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದರಲ್ಲಿ 20 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಕಾಂಗ್ರೆಸ್ ಘೋಷಿಸಿದೆ.
ಅಭ್ಯರ್ಥಿಗಳ ವಿವರ
*ದಕ್ಷಿಣ ಕನ್ನಡ-ಮಂಜುನಾಥ ಭಂಡಾರಿ
*ಉತ್ತರ ಕನ್ನಡ-ಭೀಮಣ್ಣ ನಾಯ್ಕ್
* ಶಿವಮೊಗ್ಗ-ಆರ್.ಪ್ರಸನ್ನ ಕುಮಾರ್
* ಹಾಸನ-ಎಂ.ಶಂಕರ್
* ಚಿಕ್ಕಮಗಳೂರು-ಎ.ವಿ.ಗಾಯತ್ರಿ ಶಾಂತೇಗೌಡ
* ಕೊಡಗು-ಡಾ.ಮಂತರ್ಗೌಡ
*ಗುಲ್ಬರ್ಗ(ಕಲಬುರಗಿ)-ಶಿವಾನಂದ ಪಾಟೀಲ್ ಮರ್ತೂರ್
*ಬೆಳಗಾವಿ-ಚನ್ನರಾಜ ಹಟ್ಟಿಹೊಳಿ
*ಹುಬ್ಬಳ್ಳಿ-ಧಾರವಾಡ-ಗದಗ-ಹಾವೇರಿ-ಸಲೀಮ್ ಅಹ್ಮದ್
*ರಾಯಚೂರು-ಶರಣಗೌಡ ಪಾಟೀಲ್
*ಚಿತ್ರದುರ್ಗ-ಬಿ.ಸೋಮಶೇಖರ್
*ತುಮಕೂರು-ಆರ್.ರಾಜೇಂದ್ರ
*ಮಂಡ್ಯ-ಎಂ.ಜಿ.ಗೂಳಿ ಗೌಡ
*ಬೆಂಗಳೂರು ಗ್ರಾಮಾಂತರ-ಎಸ್.ರವಿ
*ಬಿಜಾಪುರ,ಬಾಗಲಕೋಟೆ- ಸುನೀಲ್ ಗೌಡ ಪಾಟೀಲ್
*ಮೈಸೂರು,ಚಾಮರಾಜನಗರ-ಡಾ.ಡಿ.ತಿಮ್ಮಯ್ಯ
*ಬಳ್ಳಾರಿ-ಕೆ.ಸಿ.ಕೊಂಡಯ್ಯ.