9:57 PM Sunday20 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

ಲಾಕ್ ಡೌನ್ ಹೆಸರಿನಲ್ಲಿ ಲೂಟಿ: ವ್ಯಾಪಾರಿಗಳು ಆಡಿದ್ದೇ ಆಟ, ಹೇಳಿದ್ದೇ ರೇಟ್; ಜಿಲ್ಲಾಧಿಕಾರಿಯವರೇ ನಿಗಾ ವಹಿಸಿ

30/05/2021, 08:15

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತಗಂಗಿ

info.reporterkarnataka@gmail.com

ತರಕಾರಿ, ಹಣ್ಣು- ಹಂಪಲು ಮಾರುವ ವ್ಯಾಪಾರಸ್ಥರು, ಜಿನಸಿ ಅಂಗಡಿಯವರು, ಕೋಳಿ- ಮಾಂಸದ ವ್ಯಾಪಾರಿಗಳು ಜನಸಾಮಾನ್ಯರನ್ನು ಹಿಡಿದು ತಿನ್ನಲು ಆರಂಭಿಸಿದ್ದಾರೆ. ಇದು ರಾಯಚೂರು, ವಿಜಯಪುರ, ಬಾಗಲಕೋಟೆ, ಬೆಳಗಾವಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವಿಷಯ ಮಾತ್ರವಲ್ಲ, ಇಡೀ ಕರ್ನಾಟಕದ ಪರಿಸ್ಥಿತಿಯ ಅವಲೋಕನ. ಇದಕ್ಕೆ ಕಾರಣ ಕೊರೊನಾ ಲಾಕ್ ಡೌನ್.

ತರಕಾರಿ, ಹಣ್ಣು ಹಂಪಲು ರೇಟ್ ಗಗನಕ್ಕೇರಿದೆ. ತೆಂಗಿನ ಕಾಯಿ, ಕೊಬ್ಬರಿ ಜನಸಾಮಾನ್ಯರಿಗೆ ಎಟಕುತ್ತಿಲ್ಲ. ಸಕ್ಕರೆ, ಬೆಲ್ಲ, ಚಾಹುಡಿ, ಎಣ್ಣೆ, ಬೇಳೆ, ಮೆಣಸು, ಕೊತ್ತಂಬರಿ, ಜೀರಿಗೆ ಯಾವುದನ್ನೂ ಮುಟ್ಟಿದರೂ ರೇಟ್ ಎಂಬ ಕರೆಂಟ್ ಶಾಕ್ ಹೊಡೆಸುತ್ತದೆ. ಮಂಗಳೂರಿನಲ್ಲಿ ಕೊಳೆತು ಹೋದ ನೆಲ್ಲಿಕಾಯಿಯೊಂದು 5 ರೂಪಾಯಿಗೆ ಬಿಕಾರಿಯಾಗುತ್ತಿದೆ. ಲಿಂಬೆ ಹಣ್ಣಿನ ಸ್ಥಿತಿಯೂ ಇದೆ ಆಗಿದೆ. ಕೊರೊನಾ ಎರಡನೇ ಅಲೆ ಬೀಸಿದ ಬಳಿಕ ಕರಾವಳಿಯಲ್ಲಿ ನೆಲ್ಲಿಕಾಯಿ ಹಾಗೂ ಲಿಂಬೆ ಹಣ್ಣಿಗೆ ಡಿಮಾಂಡ್ ಜಾಸ್ತಿಯಾಗಿದೆ. ಕೊರೊನಾ ತಡೆಗಟ್ಟಲು ಇದು ಉಪಯುಕ್ತ ಎಂಬ ನಂಬಿಕೆ ಕರಾವಳಿ ಜನತೆಯದ್ದಾಗಿದೆ. ಹಾಗೆ ಕಿತ್ತಳೆ ಕೂಡ ಕೆಜಿಗೆ 180ರಿಂದ 200 ರೂ.ಗೆ ಏರಿದೆ. ಸಾಮಾನ್ಯ ದಿನಗಳಲ್ಲಿ ಇದನ್ನು ಕೆಜಿಗೆ 40 ರೂಪಾಯಿಗೆ ಕೊಳ್ಳಲು ಕೂಡ ಗಿರಾಕಿಗಳು ಸಿಗುತ್ತಿರಲಿಲ್ಲ. ಈಗ ಮಾತ್ರ ವಿಪರೀತ ಡಿಮಾಂಡ್. ಇದಕ್ಕೆಲ್ಲ ಲಾಕ್ ಡೌನ್, ಆಯಾ ಜಿಲ್ಲೆಗಳ ಜಿಲ್ಲಾಡಳಿತದ ವೈಫಲ್ಯ, ಬೆಲೆ ನಿಯಂತ್ರಣದ ಬಗ್ಗೆ ನಿಗಾ ಇಡಬೇಕಾಗಿದ್ದ ಜಿಲ್ಲಾಧಿಕಾರಿಗಳ ನಿರ್ಲಕ್ಷ್ಮ ಕಾರಣ ಆಗಿದೆ.

ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಈ ರೀತಿಯ ಪರಿಸ್ಥಿತಿ ಇದ್ದರೆ ಉತ್ತರ ಕರ್ನಾಟಕ ಹಾಗೂ ಈಶಾನ್ಯ ಕರ್ನಾಟಕದ ಭಾಗದಲ್ಲಿ ಇನ್ನೂ ಕೆಟ್ಟ ಪರಿಸ್ಥಿತಿ ಇದೆ. ದುಪ್ಪಟ್ಟು ಹಣ ಸುಲಿಗೆ ಮಾಡುವ ಬಗ್ಗೆ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಸಾರ್ವಜನಿಕರು ಮಾತನಾಡುವುದು ಕೇಳಿ ಬರುತ್ತಿದೆ. ಕೊರೊನಾ ಎರಡನೇ ಅಲೆ ಹೆಚ್ಚಾಗಿರುವುದರಿಂದ ಜಿಲ್ಲಾಡಳಿತ ಹೇರಿರುವ ಕಠಿಣ ಲಾಕ್ ಡೌನ್ ನ್ನು ವ್ಯಾಪಾರಸ್ಥರು, ಕಾಳಸಂತೆಕೋರರು ಬಂಡವಾಳ ಮಾಡಿಕೊಂಡಿದ್ದಾರೆ. ಸಾರ್ವಜನಿಕರಿಂದ ಹಣ ದುಪ್ಪಟ್ಟು ಸುಲಿಗೆ ಮಾಡುತ್ತಿದ್ದಾರೆ.ಹಣ್ಣು- ಹಂಪಲು ಮುಟ್ಟಲಾರದಷ್ಟು ದುಬಾರಿಯಾಗಿದೆ.

ಮೆಣಸಿನ ಕಾಯಿ 80ರಿಂದ 100 ರೂಪಾಯಿ,ತಮಟೆ ಕಾಯಿ 40- 50 ರೂಪಾಯಿ, ಈರುಳ್ಳಿ 50-60 ರೂಪಾಯಿಗೆ ಬಿಕಾರಿಯಾಗುತ್ತಿದೆ. ಸರಕಾರ 3 ಕೆಜಿ ಈರುಳ್ಳಿಯನ್ನು 50 ರೂ.ಗೆ ಮಾರಾಟ ಮಾಡಲು ಆದೇಶ ನೀಡಿದೆ. ಆದರೆ ವ್ಯಾಪಾರಿಗಳು ಸರಕಾರದ ಆದೇಶಕ್ಕೆ ಮೂರು ಕಾಸಿನ ಬೆಲೆ ಕೊಡುತ್ತಿಲ್ಲ. ಸಾರ್ವಜನಿಕರು ಕೊರೊನಾದಿಂದ ಪಾರಾಗಲು ಮನೆಯಲ್ಲಿದ್ದು ಸರಕಾರ ಆದೇಶ್ ಪಾಲನೆ ಮಾಡುತ್ತಿದ್ದರೆ ವ್ಯಾಪಾರಿಗಳು ಹಗಲು ದರೋಡೆಯಲ್ಲಿ ತೊಡಗಿದ್ದಾರೆ. ಜಿಲ್ಲಾಧಿಕಾರಿಯವರೇ ಬೆಲೆ ಮೇಲೆ ನಿಗಾ ವಹಿಸಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು