2:07 AM Thursday17 - April 2025
ಬ್ರೇಕಿಂಗ್ ನ್ಯೂಸ್
Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:… Karnataka BJP | ದಲಿತರ ತುಳಿದವರೇ ಕಾಂಗ್ರೆಸಿಗರು: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಜನ ಬೇಸತ್ತಿರುವುದಕ್ಕೆ ಜನಾಕ್ರೋಶ ಯಾತ್ರೆಗೆ ಸಿಗುತ್ತಿರುವ ಬೆಂಬಲವೇ ಸಾಕ್ಷಿ : ಪ್ರತಿಪಕ್ಷದ ನಾಯಕ…

ಇತ್ತೀಚಿನ ಸುದ್ದಿ

ದೇವದುರ್ಗ: ಕಿರಾಣಿ ಅಂಗಡಿಗಳಲ್ಲಿ ಬಡವರ ಲೂಟಿ, ಕಲಬೆರಕೆ ಗೊಬ್ಬರ ಮೂಲಕ ರೈತರ ಜೇಬಿಗೆ ಕತ್ತರಿ, ಅಕ್ರಮ ಮದ್ಯ ದಂಧೆಯಲ್ಲಿ ಲಕ್ಷ ಲಕ್ಷ ಕಮಾಯಿ!!

27/05/2021, 07:51

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜನಪ್ರತಿನಿಧಿಗಳು ಯಾಕೆ ಸೂಚಿಸುವುದಿಲ್ಲ? ಪ್ರಗತಿ ಪರಿಶೀಲನ ಸಭೆಯಲ್ಲಿ ಅಧಿಕಾರಿಗಳಿಗೆ ಯಾಕೆ ಎಚ್ಚರಿಕೆ ನೀಡುತ್ತಿಲ್ಲ? ಎಂಬ ಪ್ರಶ್ನೆಯನ್ನು ರಾಯಚೂರು ಜಿಲ್ಲೆಯ ದೇವದುರ್ಗ ಕ್ಷೇತ್ರದ ಸಾರ್ವಜನಿಕರು ಕೇಳುತ್ತಿದ್ದಾರೆ. ಗಬ್ಬೂರ್ ಹೋಬಳಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ, ಕಿರಾಣಿ ಅಂಗಡಿಗಳನ್ನು ಲೂಟಿ ಮಾಡಲಾಗುತ್ತಿದೆ, ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಆದರೆ ಜನಪ್ರತಿನಿಧಿಗಳು ಮೌನವಹಿಸಿದ್ದಾರೆ ಎಂಬ ಆರೋಪವಿದೆ.

ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ಸಾಗಿದೆ.160 ರೂಪಾಯಿಯ ಬೀರ್ 400 ರೂಪಾಯಿಗೆ, 100 ರೂಪಾಯಿಯ ಕ್ವಾಟರ್ 450 ರೂ.ಗೆ ಮಾರಾಟವಾಗುತ್ತಿದೆ. ಇವೆಲ್ಲವನ್ನು ತಡೆಯಲು ಅಬಕಾರಿ ಇಲಾಖೆಯಲ್ಲಿ ಸಿಬ್ಬಂದಿಗಳು ಇಲ್ಲವಂತೆ. ಹಾಗೆ ಕಿರಾಣಿ ಅಂಗಡಿಗಳ ಲೂಟಿ ನಡೆಯುತ್ತಿದೆ

ಸುಂಕೇಶ್ವರಹಳ, ಗಬ್ಬುರ್ ದಲ್ಲಿ 1ಕೆಜಿ ಎಣ್ಣೆ 220 ರೂ. ಮಾರಾಟ ಮಾಡಲಾಗುತ್ತದೆ. ಇಷ್ಟೆಲ್ಲ ಹಣ ಕೊಟ್ಟು ಬಡವರಿಗೆ ತಿನ್ನಲು  ಆಗುತ್ತಾ ತಹಶೀಲ್ದಾರ ಸಾಹೇಬರೇ? ಎಂದು ಬಡವರು ಪ್ರಶ್ನಿಸುತ್ತಿದ್ದಾರೆ. ಅಕ್ರಮ ಮರಳುಗಾರಿಕೆ ಮಾಡುವವರು, ಅಕ್ರಮ ಮದ್ಯ ಮಾರಾಟ ಮಾಡುವವರು, ಮಟ್ಕಾ ಬರೇದುಕೊಳ್ಳುವವರು, ದುಪ್ಪಟ್ಟು ರೇಟ್ ಕೊಟ್ಟು ತಿನ್ನಬಹುದು, ಆದರೆ ಬಡ ಸಾರ್ವಜನಿಕರು, ಕೂಲಿ ಕಾರ್ಮಿಕರು ತಿನ್ನಲು ಆಗುವುದಿಲ್ಲ. ಆದ ಕಾರಣ ದಯವಿಟ್ಟು ಕಿರಾಣಿ ಅಂಗಡಿಗಳ ಮೇಲೆ ದಾಳಿ ಮಾಡಿ. ಇನ್ನು ಮುಂದೆ ಮೋಸ ಮಾಡದಂತೆ ತಡೆಯಿರಿ ಎಂದು ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.

ದೇವದುರ್ಗ ಪಟ್ಟಣದಲ್ಲಿ ಯೂರಿಯಾ ಗೊಬ್ಬರವನ್ನು ಕೃತಕ ಸೃಷ್ಟಿ ಮಾಡಲು, ಬೇರೆ ಬೇರೆ ಸ್ಥಳಗಳಲ್ಲಿ ಸ್ಟಾಕ್  ಮಾಡುತ್ತಿದ್ದಾರೆ.  ಅಮಾಯಕ ರೈತ ಬಾಂಧವರೇ ಈ ಸಲವಾದರೂ ಎಚ್ಚೆತ್ತುಕೊಳ್ಖುವ ಅಗತ್ಯವಿದೆ. ಕರ್ನಾಟಕದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮೋಸ ಮಾಡುತ್ತಿರುವ ಗೊಬ್ಬರ  ಅಂಗಡಿಯ ಮಾಲೀಕರು ಗಳಿರುವುದು ದೇವದುರ್ಗದಲ್ಲಿ. ಬೇರೆ ಬೇರೆ ವಿಧದ ಬಹಳಷ್ಟು ನಿಷೇಧಿತ ಕ್ರಿಮಿನಾಶಕಗಳನ್ನು ಎರಡು ನೂರು ರೂಪಾಯಿ ತೆಗೆದುಕೊಂಡು ಬಂದು ರೈತರಿಗೆ ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಾರೆ. ಲಾಕ್ ಡೌನ್ ಸಮಯದಲ್ಲಿ ಜನರು ಕೆಲಸವಿಲ್ಲ ಮನೆಯಲ್ಲಿ ಕುಳಿತ್ತಿದ್ದಾರೆ. ಶಾಸಕ ಶಿವನಗೌಡ ನಾಯಕ್ ಅಧಿಕಾರಿಗಳ ಮೂಲಕ ಕ್ರಮ ಜರಗಿಸಿ ಬಡವರ ಪಾಲಿಗೆ ದಯ ತೋರಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು