2:10 PM Monday22 - June 2026
ಬ್ರೇಕಿಂಗ್ ನ್ಯೂಸ್
ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್… Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;… ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ… Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್… ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ

ಇತ್ತೀಚಿನ ಸುದ್ದಿ

ರಷ್ಯಾದಿಂದ ಮಂಗಳೂರಿಗೆ ಕಚ್ಚಾತೈಲ ತಂದ ಹಡಗು: ಅನ್‌ಲೋಡಿಂಗ್‌ ಆರಂಭ; ಎಂಆರ್‌ಪಿಎಲ್‌ಗೆ ರವಾನೆ ಶುರು

23/03/2026, 11:58

ಮಂಗಳೂರು(reporterkarnataka.com): ರಷ್ಯಾದ ಪ್ರಿಮೋರ್ಸ್ಕ್ ಎಂಬಲ್ಲಿಂದ “ಉರಾಲ್‌’ ಕಚ್ಚಾತೈಲ ಹೇರಿಕೊಂಡು ಬಂದ “ಅಕ್ವಾ ಟೈಟಾನ್‌’ ಈಗಾಗಲೇ ಮಂಗಳೂರು ಬಂದರಿನ ಹೊರ ವಲಯದಲ್ಲಿ ಸುಮಾರು 12 ನಾಟಿಕಲ್‌ ಮೈಲು ದೂರದ ತೇಲುವ ಜಟ್ಟಿಯಲ್ಲಿ ಲಂಗರು ಹಾಕಿದೆ. ಭಾನುವಾರ ಬೆಳಗ್ಗೆ 7 ಗಂಟೆಯಿಂದ ಕಚ್ಚಾ ತೈಲ ಅನ್‌ ಲೋಡಿಂಗ್‌ ಪ್ರಕ್ರಿಯೆ ಆರಂಭವಾಗಿದೆ. ಅಲ್ಲಿಂದ ಎಂಆರ್‌ಪಿಎಲ್‌ಗೆ ಈ ತೈಲ ರವಾನೆಯಾಗಿ ಸಂಸ್ಕರಣೆಗೊಳ್ಳಲಿದೆ. ಒಂದೆರಡು ದಿನದಲ್ಲಿ ಅನ್‌ ಲೋಡಿಂಗ್‌ ಪೂರ್ಣವಾಗಿ ಬಳಿಕ ಸುಮಾರು ಒಂದು ವಾರದ ಸಂಸ್ಕರಣೆ ಪ್ರಕ್ರಿಯೆ ಎಂಆರ್‌ಪಿಎಲ್‌ನಲ್ಲಿ ನಡೆಯಲಿದೆ. ಸಂಸ್ಕರಣೆ ಆದ ಬಳಿಕ ಪೆಟ್ರೋಲ್‌, ಡೀಸೆಲ್‌ ಉತ್ಪಾದನೆ ಆಗಲಿದೆ. ಎಚ್‌ಪಿಸಿಎಲ್‌ ಸಹಿತ ವಿವಿಧ ಕಂಪೆನಿಗಳು ಇದರ ವಿತರಣೆ ಅವಕಾಶ ಪಡೆಯುವ ಸಾಧ್ಯತೆ ಇದೆ. ರಾಜ್ಯಕ್ಕೆ ಇದು ಪೂರೈಕೆಯಾಗುವ ನಿರೀಕ್ಷೆ ಇದೆ.
ಚೀನದತ್ತ ಹೊರಟಿದ್ದ ಒಟ್ಟು ಏಳು ಕಚ್ಚಾತೈಲ ಹೊತ್ತ ಹಡಗುಗಳು ಭಾರತದತ್ತ ಹಾದಿ ಬದಲಾಯಿಸಿದ್ದು, ಅಕ್ವಾ ಟೈಟಾನ್‌ ಇವುಗಳಲ್ಲಿ ಒಂದು. ಇನ್ನುಳಿದ ಹಡಗುಗಳು ಮುಂದಿನ ದಿನಗಳಲ್ಲಿ ಬರಲಿವೆ ಎನ್ನಲಾಗಿದೆ. ಇವೆಲ್ಲವೂ ರಷ್ಯ ಸರಕಾರದ ನೇರ ನಿಯಂತ್ರಣದಲ್ಲಿರುವ ಹಡಗುಗಳಾ ಗಿದ್ದು, ರಷ್ಯಾದಿಂದ ಕಚ್ಚಾತೈಲ ಆಮದಿಗೆ ನಿರ್ಬಂಧ ತೆರವಾದ ತತ್‌ಕ್ಷಣ ಭಾರತದತ್ತ ತಿರುಗಿರುವುದು ಮಹತ್ವದ ಬೆಳವಣಿಗೆಯಾಗಿದೆ.

*ಸೌದಿಯಿಂದ ಮತ್ತೊಂದು ಹಡಗು?*
ಎಚ್‌ಪಿಸಿಎಲ್‌ಗೆ ಸಂಬಂಧಿಸಿದ ಎಲ್‌ಪಿಜಿ ಹೊತ್ತ ಹಡಗು ಮಾ.25ರ ವೇಳೆಗೆ ಸೌದಿಯಿಂದ ಮಂಗಳೂರಿಗೆ ಆಗಮಿಸುವ ಬಗ್ಗೆ ಮಾಹಿತಿ ಇದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ನವಮಂಗಳೂರು ಬಂದರಿಗೆ ಲಭ್ಯವಾಗಿಲ್ಲ. ಒಂದು ವೇಳೆ ಈ ಹಡಗು ಮಂಗಳೂರಿಗೆ ಆಗಮಿಸಿದರೆ ಎಲ್‌ಪಿಎಜಿ ಆತಂಕ ಕೊಂಚ ಮಟ್ಟಿಗೆ ನಿವಾರಣೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚಿನ ಸುದ್ದಿ

ಜಾಹೀರಾತು