ಇತ್ತೀಚಿನ ಸುದ್ದಿ
ಕುದ್ರೋಳಿ ನಾರಾಯಣಗುರು ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರಗೆ ಡಾಕ್ಟರೇಟ್
21/03/2026, 21:29
ಮಂಗಳೂರು(reporterkarnataka.com): ನಗರದ ಕುದ್ರೋಳಿ ನಾರಾಯಣ ಗುರು ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾಗಿರುವ ಕೇಶವ ಬಂಗೇರ ಅವರಿಗೆ
ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ.
ಕೇಶವ ಬಂಗೇರ ಗೇರುಕಟ್ಟೆ ಅವರು ಮಂಡಿಸಿದ ” ತುಳು ರಂಗಭೂಮಿ ಮತ್ತು ಸಿನಿಮಾ, ಪ್ರೇರಣೆ ಮತ್ತು ಅನನ್ಯತೆ ” ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಕೇಶವ ಬಂಗೇರ ಅವರಿಗೆ ನಿವೃತ್ತ ಮುಖ್ಯ ಶಿಕ್ಷಕಿ ಉಮಾ ಮಾಧವಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.












