ಇತ್ತೀಚಿನ ಸುದ್ದಿ
ಕೊಡಗಿನ ಕುಗ್ರಾಮ ಬೆಟ್ಟತೂರುನಲ್ಲಿ ಕಾಡಾನೆ ದಾಳಿಗೆ ಯುವತಿ ಬಲಿ: ತಾಯಿಯ ಕಣ್ಣೆದುರೇ ನಡೆದ ದುರ್ಘಟನೆ
01/03/2026, 11:07
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮಡಿಕೇರಿ ತಾಲ್ಲೂಕು ಮದೆನಾಡು ಗ್ರಾಮ ಪಂಚಾಯಿತಿ ತಾಲ್ಲೂಕಿನ ಬೆಟ್ಟತೂರು ಗ್ರಾಮದಲ್ಲಿ ಕಾಡಾನೆಯೊಂದು ದಾಳಿ ನಡೆಸಿದ್ದು ಯುವತಿಯೊಬ್ಬಳು ಬಲಿಯಾದ ಘಟನೆ ನಡೆದಿದೆ.


ಮಡಿಕೇರಿಯ ಸಂತ ಮೈಕಲ್ ಕಾಲೇಜು ನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪೂಜ್ಯ (19) ಮೃತ ದುರ್ದೈವಿ. ಸದಾ ಕಾಡಾನೆ ಓಡಾಟದ ಭೀತಿ ಇರುವ ಬೆಟ್ಟತೂರು ಗ್ರಾಮದಲ್ಲಿ ತನ್ನ ಚೆರಂಬಾಣೆಯಿಂದ ತಂದೆ ತಾಯಿಯೊಂದಿಗೆ ಬೈಕ್ ನಲ್ಲಿ ಗ್ರಾಮಕ್ಕೆ ಬಂದಿದ್ದು, ಕಡಿದಾದ ರಸ್ತೆಯ ಕಾರಣ ಮೂವರು ಬೈಕ್ ನಲ್ಲಿ ತೆರಳಲು ಸಾಧ್ಯವಾಗದ ಕಾರಣ ತಾಯಿ ದೇವಕ್ಕಿಯೊಂದಿಗೆ ಮನೆಯತ್ತ ಹೆಜ್ಜೆ ಹಾಕುತ್ತಿದ್ದoತೆ ಕಾಡಾನೆ ಪೂಜ್ಯ ಮೇಲೆ ಏಕಾಏಕಿ ದಾಳಿ ನಡೆಸಿ ತುಳಿದು ಹಾಕಿದೆ,ಆನೆ ದಾಳಿ ಮಾಡುತ್ತಿದ್ದoತೆ ತಾಯಿ ದೇವಕ್ಕಿ ಜೋರಾಗಿ ಬಾಯಿ ಬಡಿದುಕೊಂಡಿದ್ದು, ಇದನ್ನು ಕೇಳಿ ಚಂಗಪ್ಪ ಸ್ಥಳಕ್ಕೆ ಓಡಿ ಬಂದಿದ್ದಾರೆ. ತಕ್ಷಣವೇ ಕಡಿದಾದ ರಸ್ತೆಯಲ್ಲಿ ಆಸ್ಪತ್ರೆಗೆ ತರುವ ಪ್ರಯತ್ನ ನಡೆಸಲಾಯಿತಾದರೂ, ಅಷ್ಟರಲ್ಲೇ ಪೂಜ್ಯ ಪ್ರಾಣ ಪಕ್ಷಿ ಹಾರಿ ಹೋಗಿದೆ. ಕಾಡಾನೆಗಳ ಹಾವಳಿ, ಅಸಮಾರ್ಪಕ ರಸ್ತೆ ಸಂಪರ್ಕ, ದಿನಕ್ಕೆ ಬೆಳಗ್ಗೆ ಸಂಜೆ ಬಂದು ಹೋಗುವ ಬಸ್ಸು.ಇಂತಹ ಕುಗ್ರಾಮವಾಗಿರುವ ಬೆಟ್ಟತೂರು ಗ್ರಾಮದ ಸಮಸ್ಯೆಗೆ ಪರಿಹಾರ ಎನ್ನುವುದೇ ಎದ್ದಿರುವ ಪ್ರಶ್ನೆ.












