ಇತ್ತೀಚಿನ ಸುದ್ದಿ
ಗೋಣಿಕೊಪ್ಪ: ಕೇರಳದ ಖಾಸಗಿ ಬಸ್ -ಬೈಕ್ ಅಪಘಾತ: ಸವಾರರಿಬ್ಬರ ದಾರುಣ ಸಾವು
06/02/2026, 21:24
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೇರಳ ಮೂಲದ ಖಾಸಗಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಇಬ್ಬರೂ ಬೈಕ್ ಸವಾರರು ಮೃತಪಟ್ಟ ಘಟನೆ ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪ ದಲ್ಲಿ ನಡೆದಿದೆ.ಕಳೆದ ರಾತ್ರಿ ಗೋಣಿಕೊಪ್ಪದ ಮುಖ್ಯ ರಸ್ತೆಯ ಉಮಾ ಮಹೇಶ್ವರಿ ದೇವಾಲಯ ಬಳಿ ತೆರಳುತ್ತಿದ್ದ ಬೈಕ್ ಗೆ ಏಕಾಎಕಿ ಬಸ್ ಅಪ್ಪಳಿಸಿದ್ದು ಗೋಣಿಕೊಪ್ಪಲಿನ ಸುಲೈಮಾನ್(32)ಹಾಗೂ ಪೌಲೋಸ್(28) ಮೃತ ರಾಗಿದ್ದಾರೆ.
ದೇವಾಲಯದ ಮುಖ್ಯ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ
ಸುಲೈಮಾನ್ ಸ್ಥಳದಲ್ಲಿ ಮೃತಪಟ್ರೆ ಇನ್ನೊಬ್ಬ ಬೈಕ್ ಸವಾರ ಗಂಭೀರ ಗಾಯಗೊಂಡ ಚೆನ್ನಂಗೊಲ್ಲಿ ನಿವಾಸಿ ಪೌಲೋಸ್ ಅವರನ್ನು ಹೆಚ್ಚಿನ ಚಿಕಿತ್ಸೆ ಗೆ ಮೈಸೂರಿಗೆ ಕರೆದೊಯ್ಯುವ ಸಂದರ್ಭ ದಾರಿ ಮದ್ಯೆ ಸಾವನಪ್ಪಿದ್ದಾರೆ. ಖಾಸಗಿ ಬಸ್ ಕೇರಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಇದಾಗಿದೆ. ಪ್ರಯಾಣಿಕರನ್ನು ಪಡೆಯುವ ಸಲುವಾಗಿ ತಡರಾತ್ರಿ ಈ ಭಾಗದಲ್ಲಿ ಕೇರಳದ ಖಾಸಗಿ ಬಸ್ ಗಳು ನಡೆಸುವ ಪೈಪೋಟಿ ಈ ಘಟನೆಗೆ ಕಾರಣವಾಗಿದೆ. ಸದ್ಯ
ಗೋಣಿಕೊಪ್ಪಲು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು ಬಸ್ ಅನ್ನು ಪೊಲೀಸರ ವಶಪಡಿಸಿಕೊಂಡಿದ್ದಾರೆ.












