1:43 PM Sunday6 - September 2026
ಬ್ರೇಕಿಂಗ್ ನ್ಯೂಸ್
ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ

ಇತ್ತೀಚಿನ ಸುದ್ದಿ

ಕಳವಾರು ಪೇಜಾರು ಸಂತ ಜೋಸೆಫರ ಚರ್ಚ್ ನಲ್ಲಿ 242ನೇ ಪವಿತ್ರ ಶಿಲುಬೆಯ ದಾರಿ: ಜಾಗತಿಕ ಶಾಂತಿಗಾಗಿ ಪ್ರಾರ್ಥನೆ

01/04/2026, 11:08

ಮಂಗಳೂರು(reporterkarnataka.com): ಕಳವಾರು ಪೇಜಾರು ಸಂತ ಜೋಸೆಫರ ಚರ್ಚ್ ನಲ್ಲಿ 242ನೇ ಪವಿತ್ರ ಶಿಲುಬೆಯ ದಾರಿ ಮಂಗಳವಾರ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಕ್ರೈಸ್ತರು ಶಿಲುಬೆಯ ದಾರಿಯಲ್ಲಿ ಸಾಗಿ ಯೇಸು ಕ್ರೀಸ್ತರ ಕಷ್ಟ ಮರಣವನ್ನು ಸ್ಮರಿಸಿ ಧ್ಯಾನಿಸಿದರು. ನಟನೆಯ ಮೂಲಕ ಆಯೋಜಿಸಲಾದ ಶಿಲುಬೆಯ ದಾರಿ ಭಕ್ತಿ ಪರಾಕಾಷ್ಠೆಯನ್ನು ಹೆಚ್ಚಿಸಿತು. ಪ್ರತೀ ಹಂತದಲ್ಲೂ ಪ್ರತ್ಯೇಕ ವಿಚಾರಗಳನ್ನು ಮುಂದುಟ್ಟುಕೊಂಡು ಪ್ರಾರ್ಥಿಸಲಾಯಿತು. ಕ್ರಿಸ್ತರು ಶಿಲುಬೆ ಮರಣ ಹಾಗೂ ಅವರು ಸಹಿಸಿದ 14 ಹಂತಗಳನ್ನು ವಿವರಿಸುತ್ತಾ, ಶಿಲುಬೆ ಮರಣದ ಮಹತ್ವವನ್ನು ವಿವರಿಸಲಾಯಿತು. ಜಾಗತಿಕ ಶಾಂತಿಗಾಗಿ ಪ್ರಾರ್ಥಿಸಲಾಯಿತು.
ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ|ವಂ|ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಪವಿತ್ರ ಬಲಿಪೂಜೆ ನೆರವೇರಿಸಿ ಶಿಲುಬೆ ಹಾದಿಯಲ್ಲಿ ನಡೆದು ವಿಶೇಷ ಪ್ರಾರ್ಥನೆ ನೆರವೇರಿಸಿದರು. ಆಶೀರ್ವಚನ ನೀಡಿದ ಅವರು, ನಿತ್ಯದ ಜೀವನದಲ್ಲಿ ಯಾರಿಗೆ ಎಂತಹ ಸನ್ನಿವೇಷ ಎದುರಾಗುತ್ತದೆ ಎಂಬುವುದನ್ನು ಹೇಳಲು ಸಾಧ್ಯವಿಲ್ಲ. ಆದರೆ, ಕ್ರಿಸ್ತರ ಶಿಲುಬೆ ನಮಗೆಲ್ಲರಿಗೂ ಭರವಸೆಯಾಗಿದೆ. ಶಿಲುಬೆಯ ಹಾದಿಯಲ್ಲಿ ಹಲವು ಬಾರಿ ಕ್ರಿಸ್ತರು ಬಿದ್ದರೂ ಸಹ ಎದ್ದು ಮುಂದೆ ಸಾಗಿದರು. ಅದುವೇ ನಮ್ಮ ಪಯಣದಲ್ಲಿ ಮುನ್ನಡೆಯಲು ಪ್ರೇರಣೆ ಹಾಗೂ ಶಕ್ತಿ. ಯೇಸುವಿನ ಶಿಷ್ಯರಾದ ‘ಯೂದ ಇಸ್ಕರಿಯೋತು’ ಹಾಗೂ ‘ಪೇತ್ರ’ರು ಕ್ರಿಸ್ತರನ್ನು ನಿರಾಕರಿಸಿ ಬಳಿಕ ತಮ್ಮ ತಪ್ಪಿನ ಅರಿವಾದಂತೆ, ನಾವೆಲ್ಲರೂ ಕೂಡ ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಸನ್ಮಾರ್ಗದಲ್ಲಿ ನಡೆಯುವ ವ್ಯಕ್ತಿಗಳಾಗೋಣ ಎಂದು ಕರೆ ನೀಡಿದರು.
ವಂ| ವಿಜಯ್ ಮಚಾದೊ ಅವರು ಪ್ರವಚನ ನೀಡಿ, ಯೇಸುಕ್ರೀಸ್ತರು ಶಿಲುಬೆಯ ಕಷ್ಟಗಳನ್ನು ಸೋಲೆಂದು ಸ್ವೀಕರಿಸಲಿಲ್ಲ. ಒಳಿತು ಮಾಡಿದವರಿಗೆ ಕಷ್ಟ ತಪ್ಪಿದ್ದಲ್ಲ ಎಂದು ಅವರು ತಿಳಿದುಕೊಂಡಿದ್ದರು. ಅದಕ್ಕಾಗಿ ಶಿಲುಬೆಯ ಕಷ್ಟಗಳನ್ನು ಅವರು ಗೆಲುವೆಂದು ಸ್ವೀಕರಿಸಿದರು. ದೇವರ ಯೋಜನೆ ಪೂರ್ಣವಾಗಲು ಶಿಲುಬೆ ಮರಣ ಅನಿವಾರ್ಯವೆಂದು ಅವರು ನಂಬಿದ್ದರು. ಶಿಲುಬೆ ಮರಣ ಹಾಗೂ ಪುನರುತ್ಥಾನದ ಮೂಲಕ ದೇವರ ಯೋಜನೆ ಪೂರ್ಣಗೊಳಿಸಿದರು. ಆ ಮೂಲಕ ಶಿಲುಬೆ ಕ್ರೈಸ್ತರಿಗೆ ಗೆಲವು, ಅಭಿಮಾನದ ಸಂಕೇತವಾಗಿ ಮಾರ್ಪಟ್ಟಿತು.
ಪೇಜಾರು ವಲಯದ ಪ್ರಧಾನ ಗುರು ಹಾಗೂ ಗುರುಪುರ ಚರ್ಚ್ ನ ಧರ್ಮಗುರು ವಂ| ರುಡಾಲ್ಫ್ ರವಿ ಡೇಸಾ, ಪೇಜಾರು ಸಂತ ಜೋಸೆಫರ ಚರ್ಚಿನ ಧರ್ಮಗುರು ವಂ| ರೊನಾಲ್ಡ್ ಡಿಸೋಜಾ, ವಾಮಂಜೂರು ಚರ್ಚ್ ನ ಧರ್ಮಗುರು ವಂ| ಜೇಮ್ಸ್ ಡಿಸೋಜಾ, ಪಾಲ್ದನೆ ಚರ್ಚ್ ನ ಧರ್ಮಗುರು ವಂ| ರಿಚರ್ಡ್ ಅಲೋಶಿಯಸ್ ಕುವೆಲ್ಲೊ, ಮುಕ್ಕ ಚರ್ಚ್ ನ ಧರ್ಮಗುರು ವಂ| ಸ್ಟ್ಯಾನಿ ಪಿಂಟೊ, ವಂ| ಫ್ರಾನ್ಸಿಸ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.
ಶಿಲುಬೆಯ ಹಾದಿಗೂ ಮೊದಲು ಪಾದಯಾತ್ರೆ ನಡೆಯಿತು. ಸಾವಿರಾರು ಕ್ರೈಸ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಬೆಳಗ್ಗೆ ಭಿನ್ನಹ ಪ್ರಾರ್ಥನೆ ಹಾಗೂ ದೇವರ ವಾಕ್ಯದ ಧ್ಯಾನ ಕೂಟ, ಕೆಥೋಲಿಕ್ ಧರ್ಮಪ್ರಾಂತದ ಕಾರಿಸ್ಮಾಟಿಕ ಸಂಚಾಲನದ ನಿರ್ದೇಶಕ ವಂ| ಕ್ಲಿಫರ್ಡ್ ಫೆರ್ನಾಂಡೀಸ್ ಅವರ ನೇತೃತ್ವದಲ್ಲಿ ಪವಿತ್ರ ಪರಮ ಪ್ರಸಾದದ ಆರಾಧನೆ ಹಾಗೂ ಆಧ್ಯಾತ್ಮಿಕ ಸೌಖ್ಯಕ್ಕಾಗಿ ಪ್ರಾರ್ಥನೆ ನಡೆಯಿತು.

ಇತ್ತೀಚಿನ ಸುದ್ದಿ

ಜಾಹೀರಾತು