5:13 AM Saturday22 - August 2026
ಬ್ರೇಕಿಂಗ್ ನ್ಯೂಸ್
ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್…

ಇತ್ತೀಚಿನ ಸುದ್ದಿ

ವಿಟಮಿನ್ ‘ಎ’ ಪ್ರಾಮುಖ್ಯತೆ: ಯಾವುದರಲೆಲ್ಲ ಇದು ಸಿಗುತ್ತದೆ?; ಕೊರತೆಯ ಲಕ್ಷಣಗಳೇನು ?

28/01/2022, 23:31

ಮೊಟ್ಟ ಮೊದಲು ಕಂಡುಹಿಡಿದ ವಿಟಮಿನ್ ಅಂದರೆ ವಿಟಮಿನ್ A. ಇದು ಕಣ್ಣಿನ ಆರೋಗ್ಯಕ್ಕೆ ಬೇಕಾದ ಅತೀ ಮುಖ್ಯವಾದ ಅಂಶವಾಗಿದೆ. ಇದು ಸಸ್ಯಾಹಾರ ಹಾಗು ಮಾಂಸಾಹಾರ ಎರಡೂ ಮೂಲಗಳಿಂದ ದೊರೆಯುತ್ತದೆ.

ಮೊಟ್ಟೆ, ಕೋಳಿ ಮಾಂಸ, ಲಿವರ್, ಹಾಲು, ತುಪ್ಪ ,ಬೆಣ್ಣೆ, ಕಾಳುಗಳು , ಹಸಿರು ತರಕಾರಿ, ಕ್ಯಾರಟ್, ಸಿಹಿಗುಂಬಳಕಾಯಿ, ಹಳದಿ ಬಣ್ಣದ ಹಣ್ಣು ಪಪ್ಪಾಯ, ಮಾವಿನಕಾಯಿ, ಫಿಶ್ ಲಿವರ್ ಆಯಿಲ್ ಇವುಗಳಲ್ಲಿ ಹೇರಳವಾಗಿ ವಿಟಮಿನ್ A ಕಂಡು ಬರುತ್ತದೆ.

ಬೇರೆ ಬೇರೆ ಕಾರಣಗಳಿಂದ ಇದರ ಅಂಶದ ಕೊರತೆ  ನಮ್ಮ ದೇಹದಲ್ಲಿ ಕಂಡುಬರುತ್ತದೆ.

* ಜೀರ್ಣನಾಂಗವ್ಯೂಹದಲ್ಲಿನ ತೊಂದರೆಯಿಂದಾಗಿ ನಾವು ಸೇವಿಸಿದ ವಿಟಮಿನ್ಅನ್ನು ನಮ್ಮ ದೇಹ ಸರಿಯಾಗಿ ಹೀರಿಕೊಳ್ಳದೇ ಇರುವುದರಿಂದ

* ಲಿವರ್ /ಪಿತ್ತಜನಕಾಂಗದ ಖಾಯಿಲೆ

* ಗರ್ಭಿಣಿಯರಲ್ಲಿ, ಬೆಳೆಯುವ ಮಕ್ಕಳಲ್ಲಿ ಅಧಿಕ  ಬೇಡಿಕೆ  ಇದ್ದಾಗ ಸರಿಯಾಗಿ ಆಹಾರದಲ್ಲಿ ಪೂರೈಕೆ ಆಗದೇ ಇರುವುದರಿಂದ ವಿಟಮಿನ್ A ಕೊರತೆ ಉಂಟಾಗುತ್ತದೆ.

ಲಕ್ಷಣಗಳು ಏನು?:

ಮೊತ್ತ ಮೊದಲಿಗೆ ಕಂಡು ಬರುವ ಲಕ್ಷಣ ಎಂದರೆ ಇರುಳುಗಣ್ಣು, ಮಂದ ಬೆಳಕಿನಲ್ಲಿ ಸರಿಯಾಗಿ ಕಾಣಿಸದೇ ಇರುವುದು, ಒಣ ಚರ್ಮ, ಮೂಳೆಗಳ ಸರಿಯಾದ ಬೆಳವಣಿಗೆ ಆಗದೆ ಮಕ್ಕಳಲ್ಲಿ ಬೆಳವಣಿಗೆ ಕುಂಠಿತವಾಗುವುದು, ರೋಗ ನಿರೋಧಕ ಶಕ್ತಿ ಕಡಿಮೆ ಆಗಿ ಸೋಂಕು  ಸುಲಭವಾಗಿ ತಗಲುವುದು , ನರಗಳ ಕಾರ್ಯಕ್ಷಮತೆ ತಗ್ಗುವುದು, ಕಣ್ಣಿನ ಬಿಳಿಭಾಗಕ್ಕೆ ಸಂಬಂಧಿಸಿದ ತೊಂದರೆ, ಕೆಲವೊಮ್ಮೆ ಶಾಶ್ವತವಾಗಿ ದೃಷ್ಟಿಹೀನರನ್ನಾಗಿ ಮಾಡಬಹುದು.

RDA ಪ್ರಕಾರ ಒಬ್ಬ ಆರೋಗ್ಯವಂತನಿಗೆ, ಮಗುವಿನಿಂದ ಹಿಡಿದು ವಯಸ್ಕರವರೆಗೆ ದಿನವೊಂದಕ್ಕೆ ಸುಮಾರು 350ರಿಂದ 950 ಮೈಕ್ರೋ ಗ್ರಾಂನಷ್ಟು ವಿಟಮಿನ್ A ಆಹಾರದ ಮೂಲಕ ಸೇವನೆ ಮಾಡುವುದದಿಂದ ಈ ಎಲ್ಲಾ ತೊಂದರೆಗಳು ಬಾರದಂತೆ ತಡೆಗಟ್ಟಬಹುದು. ಹಾಗೆಂದು ಅತಿಯಾದ ಸೇವನೆಯೂ ಸಹ ತೊಂದರೆಯನ್ನ ಉಂಟುಮಾಡಬಹುದು. ಆದ್ದರಿಂದ ದೇಹಕ್ಕೆ ಅನುಗುಣವಾಗಿ ಸರಿಯಾದ ಪ್ರಮಾಣವನ್ನು ಸೇವನೆ ಮಾಡುವುದು ಒಳಿತು.

✍️ ಡಾ. ಭವ್ಯ ಶೆಟ್ಟಿ

ಹೋಮಿಯೋಪತಿ ವೈದ್ಯರು

ಶ್ರೀ ಗುರು ಹೋಮಿಯೋಪತಿ ಕ್ಲೀನಿಕ್ ಬೆಳುವಾಯಿ

ಇತ್ತೀಚಿನ ಸುದ್ದಿ

ಜಾಹೀರಾತು