1:26 PM Wednesday8 - July 2026
ಬ್ರೇಕಿಂಗ್ ನ್ಯೂಸ್
ನಾಗರಹೊಳೆ ಉದ್ಯಾನದ ಬೀಟ್‌ಗಾರ್ಡ್ ಮನೆಯಲ್ಲಿ ಅಕ್ರಮ ಜಿಂಕೆ ಪತ್ತೆ: ಬಂಧನ; ಬಂದೂಕು ವಶ ಮೂಗ್ರಹಳ್ಳಿ ಸೇತುವೆ ಕಾಮಗಾರಿಯಲ್ಲಿ ಸುರಕ್ಷತೆ ನಿರ್ಲಕ್ಷ್ಯ ಆರೋಪ; ಕಾಮಗಾರಿ ತಾತ್ಕಾಲಿಕ ಸ್ಥಗಿತಕ್ಕೆ ಗ್ರಾಮಸ್ಥರ… ಮರದ ದಿಮ್ಮಿ ಸಾಗಾಟ | ದಸರಾ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು ದಂತ… ಬೇಲೂರು | SIR ಕರ್ತವ್ಯದ ಒತ್ತಡಕ್ಕೆ ಕುಸಿದು ಬಿದ್ದ ನಿವೃತ್ತಿಯಂಚಿನಲ್ಲಿರುವ 60ರ ಹರೆಯದ… ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಎದುರಿಸಲು ಸಜ್ಜಾಗಿ: ಮೇಲುಸ್ತುವಾರಿ ಸಚಿವ ಯು.ಟಿ.… ಕಳಸ: ಬೈಕಿಗೆ ಸೈಡ್ ಕೊಡಲು ಹೋಗಿ ತೋಟಕ್ಕೆ ನುಗ್ಗಿದ ಕಾರು; ಪ್ರಯಾಣಿಕರು ಪಾರು ತೀರ್ಥಹಳ್ಳಿ | ಅರಳಾಪುರದ ಕೊಪ್ಪಲು ಗ್ರಾಮದಲ್ಲಿ ಗಾಳಿ ಮಳೆಗೆ ಬಿದ್ದ ಬೃಹತ್ ಮರ:… Raichuru | ಮಸ್ಕಿ: ಅತಿಥಿ ಶಿಕ್ಷಕರ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ… ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಟ: 28 ಜನರ ಬಂಧನ;… ಮತ ಪರಿಷ್ಕರಣೆ ವಿಚಾರದಲ್ಲಿ ಅಧಿಕಾರಿಗಳ ಕಳ್ಳಾಟ..!?: ಮನೆ ಮನೆಗೆ ಹೋಗುವ ಬದಲಾಗಿ ಜನರನ್ನೇ…

ಇತ್ತೀಚಿನ ಸುದ್ದಿ

ಮೂತ್ರಜನಕಾಂಗದ ಸೋಂಕು: ಕಾರಣಗಳೇನು? ಇದನ್ನು ತಡೆಗಟ್ಟುವುದು ಹೇಗೆ?

05/02/2022, 11:22

ಮೂತ್ರ ಜನಕಾಂಗದ ಸೋಂಕು ಮಹಿಳೆಯರು ಮತ್ತು ಪುರುಷರನ್ನು ಕಾಡುವ ಸಾಮಾನ್ಯವಾದ ಸೊಂಕಾಗಿದೆ. ಆದರೆ ಹೆಚ್ಚಾಗಿ ಮಹಿಳೆಯರಲ್ಲಿ ಕಂಡು ಬರುತ್ತದೆ.
ಮೂತ್ರನಾಳ, ಮೂತ್ರಚೀಲ, ಅಥವಾ ಕಿಡ್ನಿ  ಹೀಗೆ ಬೇರೆ ಬೇರೆ ಭಾಗ ಸೊಂಕಿಗೆ ಒಳಗಾಗಬಹುದು.


ಕಾರಣಗಳು ಏನು?

ಇದು ಹೆಚ್ಚಾಗಿ ಬ್ಯಾಕ್ಟರಿಯ ಅಥವಾ ಫಂಗಸ್ನಿಂದಾಗಿ ಬರುವ ತೊಂದರೆಯಾಗಿದೆ. ಈ ಸೂಕ್ಷ್ಮಣು ಜೀವಿಗಳು ಮೂತ್ರ ನಳಿಕೆಯ ಮೂಲಕ ದೇಹವನ್ನು ಪ್ರವೇಶಿಸಿ ಸೋಂಕು ತಗಲುತ್ತದೆ.

ಮಧುಮೇಹ ಇರುವವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಇಂತಹ ಸೋಂಕು ಸುಲಭವಾಗಿ ತಗಲುತ್ತದೆ. ಕಿಡ್ನಿ ಸ್ಟೋನ್ 

ಪುರುಷರಲ್ಲಿ ದೊಡ್ಡದಾದ ಪ್ರೊಸ್ಟೆಟ್ ಗ್ರಂಥಿಯ ಸಮಸ್ಯೆಯಿಂದಾಗಿ ಉರಿಮೂತ್ರ ಉಂಟಾಗುತ್ತದೆ.

ಲಕ್ಷಣಗಳು ಏನು?

*ಸೊಂಟನೋವು

*ಮೇಲಿಂದ ಮೇಲೆ ಮೂತ್ರ ವಿಸರ್ಜನೆ

*ಮೂತ್ರ ವಿಸರ್ಜನೆ ಸಮಯದಲ್ಲಿ ನೋವು *ಉರಿಮೂತ್ರ

*ಮೂತ್ರದ ಬಣ್ಣ ಹಾಗೂ ವಾಸನೆಯಲ್ಲಿ ವ್ಯತ್ಯಾಸ *ಕಿಬ್ಬೊಟ್ಟೆ ನೋವು

*ಚಳಿ, ಜ್ವರ, ವಾಂತಿ

ಪತ್ತೆ ಹಚ್ಚುವ ವಿಧಾನಗಳು ಏನು?

ಯೂರಿನ್ ಅನಾಲಿಸಿಸ್ : ಇದರ ಮೂಲಕ ಸೊಂಕಿನ ತೀವ್ರತೆಯನ್ನು ಪತ್ತೆಹಚ್ಚಬಹುದು.

ಯೂರಿನ್ ಕಲ್ಚರ್ : ಇದರಿಂದ ಯಾವ ಸೂಕ್ಷ್ಮಣು ಜೀವಿಯಿಂದ ತೊಂದರೆ ಉಂಟಾಗಿದೆ ಎಂದು ತಿಳಿದುಕೊಳ್ಳಬಹುದು.

ಅಲ್ಟ್ರಾಸೌಂಡ್ : ಒಂದುವೇಳೆ  ಚಿಕಿತ್ಸೆ ನಂತರವೂ ಗುಣಮುಖವಾಗದೆ ಇದ್ದಲ್ಲಿ, ಇದರ ಮೂಲಕ ಮೂತ್ರ ನಾಳ ಅಥವಾ ಕೋಶದಲ್ಲಿಇರುವ ತೊಂದರೆಯನ್ನು ಪತ್ತೆ ಹಚ್ಚಬಹುದು.

ಸಿಸ್ಟೋಸ್ಕೋಪಿ: ಇದರ ಮೂಲಕ ಮೂತ್ರಕೋಶದ ಒಳಭಾಗವನ್ನು ವೀಕ್ಷಿಸಿ ಸೂಕ್ತ ಕಾರಣವನ್ನು ತಿಳಿದುಕೊಳ್ಳಬಹುದು.


ತಡೆಗಟ್ಟುವ ಕ್ರಮ ಹೇಗೆ?

*ಹೆಚ್ಚಿನ ಪ್ರಮಾಣದಲ್ಲಿ  ನೀರನ್ನು ಕುಡಿಯುವುದರಿಂದ ಬ್ಯಾಕ್ಟರಿಯ ಬೆಳೆಯದಂತೆ ತಡೆಯಬಹುದು.

*ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು.

*ಮೂತ್ರವನ್ನು ತಡೆಹಿಡಿಯದೇ ಇರುವುದು

*ಮಧುಮೇಹ ನಿಯಂತ್ರಣ

* ಮಲಬದ್ಧತೆ ಆಗದಂತೆ ಎಚ್ಚರವಹಿಸುವುದು

*ವಿಟಮಿನ್ C ಜಾಸ್ತಿ ಹೊಂದಿರುವ ಆಹಾರ ಸೇವನೆ ಮಾಡುವುದರಿಂದ ಮೂತ್ರದ ಸೋಂಕು ಬಾರದಂತೆ ತಡೆಗಟ್ಟಬಹುದು.

*ಮೂತ್ರಜನಕಾಂಗದ ಸೋಂಕು ಉಂಟಾದ ತಕ್ಷಣ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಸೋಂಕು ತೀವ್ರತೆಯನ್ನು ನಿಯಂತ್ರಿಸಬಹುದು.

ಡಾ. ಭವ್ಯ ಶೆಟ್ಟಿ
ಹೋಮಿಯೋಪತಿ ವೈದ್ಯರು
ಶ್ರೀ ಗುರು ಹೋಮಿಯೋಪತಿ

ಇತ್ತೀಚಿನ ಸುದ್ದಿ

ಜಾಹೀರಾತು