1:23 AM Tuesday21 - July 2026
ಬ್ರೇಕಿಂಗ್ ನ್ಯೂಸ್
ಮುಖ್ಯಮಂತ್ರಿಗಳ ಕಾರ್ಯದರ್ಶಿ ಆಗಿ ಕುಶಾಲನಗರದ ಎಸ್. ಎಸ್. ನಕುಲ್ ನೇಮಕ ವಂದೇ ಮಾತರಂ ಗೀತೆಗೆ ಹೊಸ ರೂಲ್ಸ್: ಸಂಸತ್ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಾಮುಕನಿಗೆ ಗ್ರಾಮಸ್ಥರ ಧರ್ಮದೇಟು; ಪೊಲೀಸ್ ವಶಕ್ಕೆ ವಂದೇ ಮಾತರಂ ಗೀತೆಗೆ ಹೊಸ ರೂಲ್ಸ್: ಸಂಸತ್ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆ ತೀರ್ಥಹಳ್ಳಿ | ಗುಂಡುಗದ್ದೆ ಬಳಿ ಆಟವಾಡುತ್ತಾ ರಸ್ತೆಗೆ ಬಂದ ಮಗು: ಕಾರು ಡಿಕ್ಕಿಯಾಗಿ… ಧಾರವಾಡ ಟು ಬೆಂಗಳೂರು: ಲಾರಿಯಲ್ಲಿ ಸಾಗಿಸುತ್ತಿದ್ದ 100ಕ್ಕೂ ಹೆಚ್ಚು ಗೋವುಗಳ ಮಾಂಸ ವಶ Mangaluru | ವೆನ್ಲಾಕ್ ಸರಕಾರಿ ಆಸ್ಪತ್ರೆಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಭೇಟಿ:… ದಾರಿ ತಪ್ಪಿ ನಾಪೋಕ್ಲು ಪಟ್ಟಣ ಪ್ರವೇಶಿಸಿದ ಜಿಂಕೆ: ವಾಹನಗಳ ಅರ್ಭಟ, ಬೀದಿ ನಾಯಿಗಳ… ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ನಿರ್ಧಾರ ಕೈಬಿಡದಿದ್ದರೆ ಧರಣಿ: ವಿವಿಧ ಸಂಘಟನೆಗಳ ಆಕ್ರೋಶ ಮುತ್ತೈದೆ ಸಾವು ಕಂಡ ಮಹಾತಾಯಿ: ಹುಟ್ಟೂರಿನ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಚೆನ್ನಮ್ಮ…

ಇತ್ತೀಚಿನ ಸುದ್ದಿ

RK Exclusive : ವಿಸ್ಟಾಡೋಮ್ ಹೊಸ ಪ್ರಯೋಗವೇ ?ರಾಜಕಾರಣಿಗಳು ಬಿಟ್ಟದ್ದು ರೈಲೇ? ಹಾಗಾದರೆ ಕೊಂಕಣ ರೈಲು ಓಡಿಸಿದ್ದು ಮತ್ಯೇನು? 

13/07/2021, 14:39

ಮಂಗಳೂರು(reporterkarnataka news): ಪಶ್ಚಿಮ ಘಟ್ಟದ ಪ್ರಕೃತಿ ಸೌಂದರ್ಯವನ್ನು ಅಸ್ವಾದಿಸಲು ಮಂಗಳೂರು-ಬೆಂಗಳೂರು ರೈಲಿನಲ್ಲಿ ಅಳವಡಿಸಲಾದ ಗಾಜಿನ ಛಾವಣಿ(ವಿಸ್ಟಾಡೋಮ್) ಹೊಂದಿರುವ ಬೋಗಿಗಳು ರೈಲ್ವೆಯ ನೂತನ ಪ್ರಯೋಗವೇ? ದಕ್ಷಿಣ ಭಾರತದಲ್ಲೇ ಇದನ್ನು ಮೊದಲ ಬಾರಿಗೆ ಬಳಸಲಾಗಿದೆ? ರಾಜಕಾರಣಿಗಳು, ಅಧಿಕಾರಿಗಳು  ಹೇಳಿರುವುದು ನಿಜವೇ?


ಜುಲೈ 11ರಂದು ವಿಸ್ಟಾಡೋಮ್ ಬೋಗಿಗಳನ್ನೊಳಗೊಂಡ ಮಂಗಳೂರು- ಬೆಂಗಳೂರು ರೈಲು ಸಂಚಾರಕ್ಕೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಸಿರು ನಿಶಾನೆ ತೋರಿಸಿದ್ದರು.

ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ ,ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.ಹಾಗೂ ರೈಲ್ವೆ ಅಧಿಕಾರಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗಾಜಿನ ಬೋಗಿಗಳ ಪ್ರಯೋಗ ದಕ್ಷಿಣ ಭಾರತದಲ್ಲೇ ಮೊದಲ ಬಾರಿ ಎನ್ನುವಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಣ್ಣಿಸಿದ್ದರು. ಆದರೆ ವಾಸ್ತವದಲ್ಲಿ ಇದು ನಿಜವಲ್ಲ ಎನ್ನುವುದು ಭಾರತೀಯ ರೈಲ್ವೆ ಇತಿಹಾಸವನ್ನು ಕೆದಕಿದಾಗ ತಿಳಿದು ಬರುತ್ತದೆ.


ವಿಸ್ಟಾಡೋಮ್ ಬೋಗಿಗಳನ್ನು ಈ ಹಿಂದೆ ಕೊಂಕಣ ರೈಲ್ವೆ ನಿಗಮ ತನ್ನ ರೈಲಿನಲ್ಲಿ ಉಪಯೋಗಿಸಿತ್ತು. ಕರಾವಳಿಯ ಹೆಮ್ಮೆಯ ರಾಜಕಾರಣಿ ಜಾರ್ಜ್ ಫೆರ್ನಾಂಡಿಸ್ ಅವರ ಕನಸಿನ ಕೂಸಾದ ಕೊಂಕಣ ರೈಲ್ವೆ ನಿಗಮ ಮಂಗಳೂರು- ಮುಂಬೈ ರೈಲಿನಲ್ಲಿ ವಿಸ್ಟಾಡೋಮ್ ಬೋಗಿಗಳ ಪ್ರಯೋಗ ಮಾಡಿತ್ತು. ಆದರೆ ಅಂದು ಸಾಮಾಜಿಕ ಜಾಲತಾಣಗಳು ಇರಲಿಲ್ಲ. ಸ್ಮಾರ್ಟ್ ಫೋನ್ ಯಾರ ಜೇಬನ್ನೂ ಸೇರಿರಲಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಅತ್ಯಂತ ಸರಳ, ಸಜ್ಜನ ರಾಜಕಾರಣಿಯಾದ ಜಾರ್ಜ್ ಫೆರ್ನಾಂಡಿಸ್ ಅವರಿಗೆ ಪ್ರಚಾರದ ಗೀಳು ಇರಲಿಲ್ಲ.

ಅಂದು ಕೊಂಕಣ ರೈಲ್ವೆಯಲ್ಲಿ ಉಪಯೋಗಿಸಿದ ವಿಸ್ಟಾಡೋಮ್ ಬೋಗಿಗಳು ಪ್ರಸ್ತುತ ಮಂಗಳೂರು- ಬೆಂಗಳೂರು ರೈಲಿನಲ್ಲಿ ಬಳಸಲಾದ ವಿಸ್ಟಾಡೋಮ್ ಬೋಗಿಗಳಷ್ಟೇಅತ್ಯಾಧುನಿಕವಾಗಿತ್ತು. ಎಸಿ, ತಿರುಗುವ ಕುರ್ಚಿ, ಗಾಜಿನ ಛಾವಣಿ, ನೀಳವಾದ ಕಿಟಕಿ, ಸುಸಜ್ಜಿತ ಶೌಚಾಲಯ, ವಾಶ್ ಬೇಸಿನ್ , ಸ್ಟೀಲ್ ಲಗೇಜ್ ಕವಾಟು ಎಲ್ಲವೂ ಅದರಲ್ಲಿತ್ತು. ವಿಶೇಷವೆಂದರೆ ಅಂದಿನ ವಿಸ್ಟಾಡೋಮ್ ಬೋಗಿಗಳನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಎಲ್ಎಚ್ಬಿ (ಲಿಂಕೆ-ಹಾಫ್ಮನ್-ಬುಶ್ ಪ್ಲಾಟ್ಫಾರ್ಮ್ / ತಂತ್ರಜ್ಞಾನ) ನಲ್ಲಿ ತಯಾರಿಸಲಾಗಿತ್ತು. ಮಂಗಳೂರು- ಬೆಂಗಳೂರು ರೈಲಿಗೆ ಅಳವಡಿಸಿದ ಬೋಗಿಗಳನ್ನು ಕೂಡ ಅದೇ ಫ್ಯಾಕ್ಟರಿಯಲ್ಲಿ ತಯಾರಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು