ಇತ್ತೀಚಿನ ಸುದ್ದಿ
ದಾರಿ ತಪ್ಪಿ ನಾಪೋಕ್ಲು ಪಟ್ಟಣ ಪ್ರವೇಶಿಸಿದ ಜಿಂಕೆ: ವಾಹನಗಳ ಅರ್ಭಟ, ಬೀದಿ ನಾಯಿಗಳ ಕಾಟದಿಂದ ದಿಕ್ಕೆಟ್ಟ ಹರಿಣಿಯ ರಕ್ಷಣೆ
18/07/2026, 19:45
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೊಡಗು ಜಿಲ್ಲೆಯಲ್ಲಿ ಕಾಡಿನಿಂದ ವನ್ಯಜೀವಿಗಳು ನಾಡಿನತ್ತ ಬರುವುದು ಹೊಸತೇನಲ್ಲ, ಅದರಂತೆ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಪಟ್ಟಣಕ್ಕೆ ಚುಕ್ಕಿ ಜಿಂಕೆಯೊಂದು ಆಹಾರ ಅರಸಿಯೋ, ಇಲ್ಲಾ ತನ್ನ ಹಿಂಡು ಇಂದ ಬೆರ್ಪಟ್ಟು ಪ್ರವೇಶಿಸಿದೆ.ಕೊಡವ ಸಮಾಜದ ರಸ್ತೆಯಿಂದ ಮುಖ್ಯ ರಸ್ತೆಗೆ ಓಡಿ ಬಂದ ಈ ಅಮಾಯಕ ಜೀವಿ ಒಂದೆಡೆ ವಾಹನ ದಟ್ಟಣೆ, ಬೀದಿ ನಾಯಿಗಳ ದಾಳಿಯಿಂದ ದಿಕ್ಕು ತೋಚದೆ ಪಟ್ಟಣದೆಲ್ಲಡೆ ಓಡಾಡಿದೆ.


ಸ್ಥಳೀಯರು ಹಿಡಿಯುವ ಪ್ರಯತ್ನ ಮಾಡಿದರು ಸಾಧ್ಯವಾಗಿಲ್ಲ ಹೀಗೆ ಮುಖ್ಯ ರಸ್ತೆಯಲ್ಲೇ ಬಸ್ ನಿಲ್ದಾಣ ಮೂಲಕ ಬೇತು ಗ್ರಾಮದ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಬಳಿ, ಸ್ಥಳೀಯಯುವಕರಾದ ರಫೀಕ್ ಮತ್ತು ಇಸ್ಮಾಯಿಲ್ ಜಿಂಕೆಯನ್ನು ಹಿಡಿಯುವಲ್ಲಿ ಯಶಸ್ವಿಯಾದರು, ಆಗಲೇ ಸಣ್ಣ ಪುಟ್ಟ ಗಾಯಕ್ಕೆ ಒಳಗಾಗಿದ್ದ ಜೀವಿಯನ್ನು ನೀರು ನೀಡಿ ಆರೈಕೆ ಮಾಡಿದರು.ಬಳಿಕ ಪೊಲೀಸ್ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು.ಅರಣ್ಯ ಇಲಾಖೆ ಸಿಬ್ಬಂದಿಗಳು ಪ್ರಥಮ ಚಿಕಿತ್ಸೆ ನೀಡಿ ತಲಕಾವೇರಿ ವನ್ಯ ಜೀವಿ ವಿಭಾಗದ ಅರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಯಿತು.












