4:29 PM Saturday20 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ…

ಇತ್ತೀಚಿನ ಸುದ್ದಿ

ವಿಜಯನಗರ: ಭಕ್ತಿ- ಶ್ರದ್ಧೆಯಿಂದ ಗೌರಿದೇವಿ ಹಬ್ಬ ಆಚರಣೆ; ಬಾಲೆಯರಿಗೆ ಸೀರೆ ಉಡಿಸಿ ಅಲಂಕಾರ

22/11/2021, 11:22

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಜಿಲ್ಲೆಯ ಕೂಡ್ಲಿಗಿ ತಾಲೂಕು ಸೇರಿದಂತೆ ಹಲವೆಡೆಗಳಲ್ಲಿ  ಶಕ್ತಿದಾತೆ ಹಾಗೂ ಬುದ್ದಿದಾತೆ ಶ್ರೀಗೌರಿದೇವಿಯ ಆರಾಧನೆ ನಡೆಯಿತು.

ಮಕ್ಕಳು, ರೈತರು ಹಾಗೂ ರೈತ ಹೆಂಗಳೆಯರ ಗ್ರಾಮೀಣ ಪ್ರದೇಶದ ವಿಶೇಷ ಹಬ್ಬ ಗೌರಿದೇವಿ ಹಬ್ಬವಾಗಿದೆ. ಗೌರಿ ಹುಣ್ಣಿಮೆಯಂದು ಪ್ರತಿಷ್ಟಾಪಿಸಲ್ಪಡುವ ಗೌರಿ, ಮೂರು ದಿನಗಳ ಕಾಲ ಆರಾಧಿಸಲ್ಪಡುತ್ತಾಳೆ. ನಂತರ  ಮೂರನೇ ದಿನದಂದು ಹೆಣ್ಣು ಮಕ್ಕಳು ಅಥವಾ ಕನ್ಯೆಯರು ಗೌರಿಯನ್ನ ಸಕ್ಕರೆ ಆರತಿ ಬೆಳಗುವುದರೊಂದಿಗೆ ವಿಧಿವತ್ತಾಗಿ  ಆರಾಧಿಸಿ ಹಬ್ಬ ಆಚರಿಸುತ್ತಾರೆ. ಸ್ಥಳೀಯ ಹಿರಿಯರು ರಾತ್ರಿಹೊತ್ತಿನವರೆಗೆ ಭಜನೆ ವಿಶೇಷ ಪೂಜೆಗಳನ್ನು ಆಚರಿಸಿ ನಂತರ ತಡರಾತ್ರಿ ಗೌರಿಯನ್ನು ವಿಧಿವತ್ತಾಗಿ ಗಂಗೆ ಕಾಣಿಸುವುದೆ ಮೂಲಕ ಗೌರಿಹಬ್ಬಕ್ಕೆ ಅಂತ್ಯವಾಡುತ್ತಾರೆ.

ಗೌರಿಹಬ್ಬ ಎಂದಾಕ್ಷಣ ಗೌರಿ ಮಕ್ಕಳು ಸಹಜವಾಗಿಯೇ ನೆನಪಾಗುತ್ತಾರೆ. ಬಾಲೆಯರು ಕುವರಿಯರು, ಅವರಮ್ಮಂದಿರು ಉಡಿಸಿದ ಸೀರೆಯಲ್ಲಿ ಸಾಕ್ಷಾತ್ ಗೌರಿಯಂತೆ ಗೋಚರಿಸುತ್ತಾರೆ. ಹಾಗಾಗಿ ಗ್ರಾಮೀಣ ಪ್ರದೇಶದಲ್ಲಿ ಗೌರಿಹುಡಿಗೇರು ಗೌರಿ ಮಕ್ಕಳು ಎಂದು ಕರೆಸಿಕೊಳ್ಳುತ್ತಾರೆ ಕನ್ಯೆಯರು. ಗೌರಿಹಬ್ಬ ರೈತಾಪಿಗರ ಗ್ರಾಮೀಣ ಜನರ ಹೆಂಗಳಯರ ಹೆಣ್ಣು ಮಕ್ಕಳ ಹಾಗೂ ಕನ್ಯಾಮಣಿಗಳ ಬಹುಪ್ರಿಯವಾದ ಹಬ್ಬವಾಗಿದೆ.ಹಲವೆಡೆಗಳಲ್ಲಿ ಗೌರಿ ಹಬ್ಬದ ಸಮಯದಲ್ಲಿ ಹಿರಿಯೆ ಹಬ್ಬ ಆಚರಿಸಲಾಗುತ್ತದೆ. ಮನೆಮಂದಿಯಲ್ಲಾ ಮಡಿ ಮುಡಿಯಿಂದ ಹಾಗೂ ಸಿಹಿಖಾದ್ಯಗಳ ಭೂರಿ ಭೋಜನ ತಾಯಾರಿಸಿ, ಮನೆಯ ಹಿರಿಯರಿಗೆ ಹೆಂಗಸರು ಮಕ್ಕಳು ವೃದ್ಧರಾದಿಯಾಗಿ ಹೊಚ್ಚ ಹೊಸ ಬಟ್ಟೆಗಳನ್ನು ಧರಿಸಿ ಕಾಲನ ಕರೆಗೆ ಓಗೊಟ್ಟು ಇಹಲೋಕ ತೊರೆದ ಮನೆಯ ಹಿರಿಯರ ಹೆಸರಲ್ಲಿ ಬಟ್ಟೆ ಸಮೇತ ಅವರ ಇಷ್ಟದಡಿಗೆ ಮಾಡಿ ಎಡೆಮಾಡುತ್ತಾರೆ.ಈ ಮೂಲಕ ಹಿರಿಯರ ಹಾಗೂ ಕಿರಿಯರ ಬಹುಪ್ರಿಯವಾದ ಹಬ್ಬ,ರೈತಾಪಿ ಜನರ ಗ್ರಾಮೀಣ ಜಾನಪದ ಹಬ್ಬ ಸಕ್ಕರೆ ಆರತಿಯ ಹಬ್ಬ ಶ್ರೀಗೌರಿಹಬ್ಬವಾಗಿದೆ. ಹಬ್ಬವನ್ನು ವಿಜಯನಗರ ಜಿಲ್ಲೆಯಾದ್ಯಾಂತ ಬಹು ಅರ್ಥಪೂರ್ಣವಾಗಿ, ಸಾಂಪ್ರದಾಯಿಕವಾಗಿ ಶಾಸ್ತ್ರೋಕ್ತವಾಗಿ ಶ್ರದ್ಧೆ ಭಕ್ತಿಯಿಂದ ಆಚರಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು