7:06 AM Wednesday5 - August 2026
ಬ್ರೇಕಿಂಗ್ ನ್ಯೂಸ್
ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ ಕಾವೇರಿ ನೀರು ಹಂಚಿಕೆ ವಿವಾದ | ಕಾನೂನು ತಜ್ಞರು, ಪ್ರತಿಪಕ್ಷಗಳ ಸಲಹೆ ಬಳಿಕ…

ಇತ್ತೀಚಿನ ಸುದ್ದಿ

ವಿಜಯನಗರ ಜಿಲ್ಲಾ ಶಿಳ್ಳೇಕ್ಯಾತರ ಮಹಿಳಾ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ: ಗೌರಮ್ಮ ನೂತನ ಅಧ್ಯಕ್ಷೆ

21/09/2021, 08:58

ವಿ.ಜಿ.ವೃಷಭೇಂದ್ರ  ಕೂಡ್ಲಿಗಿ ವಿಜಯನಗರ 

info.reporterkarnataka@gmail.com

ಜಿಲ್ಲೆಯ ಶಿಳ್ಳೇಕ್ಯಾತರ ನೂತನ ಮಹಿಳಾ ಕ್ಷೇಮಾಭಿವೃದ್ಧಿ ಸಂಘ ಅಸ್ಥಿತ್ವಕ್ಕೆ ಬಂದಿದ್ದು,ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ  ರಾಜ್ಯ ಮುಖಂಡರ ಉಪಸ್ಥಿತಿಯಲ್ಲಿ ಜರುಗಿದ ಸಭೆಯಲ್ಲಿ ನೂತನ ಸಂಘದ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 

ವಿಜಯನಗರ ಜಿಲ್ಲಾಧ್ಯಕ್ಷರಾಗಿ ಕೂಡ್ಲಿಗಿ ಪಟ್ಟಣದ ಬಿದಿಬದಿ ವ್ಯಾಪಾರಿ ಗೌರಮ್ಮ ಮಹಂತೇಶ ಸಿಂದೆರನ್ನು ಆಯ್ಕೆಮಾಡಲಾಯಿತು. ಉಪಾಧ್ಯಕ್ಷೆ ಹನುಮಕ್ಕ, ಪ್ರಧಾನ ಕಾರ್ಯದರ್ಶಿ ಅಲಿಗಿಲಿವಾಡ ರೂಪ, ಸಂಘಟನಾ ಕಾರ್ಯದರ್ಶಿ ಕೊಟ್ಟೂರು ಕವಿತಾ, ಕೋಶಾಧ್ಯಕ್ಷರು ನಾಗರಕಟ್ಟೆ ಮಹಾದೇವಮ್ಮ, ದೀಪಾ, ಗಾಳೆಮ್ಮಗುಡಿ ಉಮಾದೇವಿ ಅವರನ್ನು ಸಭೆಯಲ್ಲಿ ಅಯ್ಕೆ ಮಾಡಲಾಯಿತು. ಸಂಘದ ಗೌರವಾಧ್ಯಕ್ಷರು ಮಹೇಂದ್ರ ರಾವ್ ಸಾಸನಿಕ್ ಅವರನ್ನು ನೇಮಿಸಲಾಯಿತು.

ಕಾರ್ಯಕ್ರಮದ ಸಾನಿಧ್ಯವನ್ನು ಶಿಳ್ಳೇಕ್ಯಾತ ಸ್ವಾಮೀಜಿ ಶ್ರೀಕಲ್ಲಿನಾಥ ಮಹಾಸ್ವಾಮಿ ಭೀಮಘಡ ಹಾಗೂ ಬಡೇಲಡಕು ಶ್ರೀವಸಂತಪ್ಪತಾತ ರವು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯಧ್ಯಕ್ಷ ಡಾ. ಸಣ್ಣ ದೊಡ್ಮನಿ,ರಾಜ್ಯ ಕಾರ್ಯದರ್ಶಿ ಗಂಗೂರು ಮತ್ತಣ್ಣವಾಯ್, ರಾಜ್ಯಉಪಾಧ್ಯಕ್ಷ ಸುರೇಶ್ ವಾಯ್ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿಗಳಾದ ಅಶೋಕ ಶಿಳ್ಳೆಕ್ಯಾತರ ,ರಾಜ್ಯ ಸಂಚಾಲಕ ವಿಲಾಸಕುಮಾರ ಜಿ.ಶಿಂಧೆ,ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಶೈಲಾ ಸೀತಾರಾಂ ಪಾಚಂಗೆ ಮತ್ತಿರರು ವೇದಿಕೆಯಲ್ಲಿದ್ದರು. ತೊಗಲುಗೊಂಬೆ ಕಲಾವಿದರಾದ ಬಡೇಲಡಕು ತಿಪ್ಪೇಸ್ವಾಮಿ ಹಾಗೂ ತಬಲಸಾತಿ ವೆಂಕಟೇಶ್ ಕಟ್ಟಿಮನಿ ಪ್ರಾರ್ಥಿಸಿದರು. ಮುತ್ತಣ್ಣ ವಾಯ್ ಕಟ್ಟಿಮನಿ ನಿರೂಪಿಸಿದರು,ಕೂಡ್ಲಿಗಿ ಮಂಜು ಸಿಂದೆ ಸ್ವಾಗತಿಸಿದರು, ಬಡೇಲಡಕು ವಿರುಪಾಕ್ಷಪ್ಪ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು