9:57 AM Tuesday26 - May 2026
ಬ್ರೇಕಿಂಗ್ ನ್ಯೂಸ್
ಕಾಫಿ ತೋಟದಲ್ಲಿ ಕಾಡಾನೆಗಳ ‘ರೌದ್ರ ನರ್ತನ: ಅರಣ್ಯ ಸಿಬ್ಬಂದಿಯನ್ನೇ ಬೆನ್ನಟ್ಟಿದ ಗಜಪಡೆ ಮೇಕೆದಾಟು ವಿವಾದ: ತಮಿಳುನಾಡು ಸಿಎಂ ವಿಜಯ್ ತುರ್ತು ಸಭೆ, ಕಾನೂನು ಹೋರಾಟ ಚುರುಕುಗೊಳಿಸಲು… ಕೊಲ್ಲೂರು ಆಕ್ಸಿಡೆಂಟ್ | ಮೃತ ಮಹಿಳೆಯ ಮೈ ಮೇಲಿನ ಚಿನ್ನಾಭರಣ ಕದ್ದ ಕೇಸಿಗೆ… ಚಿಕ್ಕಮಗಳೂರು: ಕೈ ಕೈ ಮಿಲಾಯಿಸುವ ಮಟ್ಟಿಗೆ ತಲುಪಿದ ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ… ಮಂಗಳೂರು ವಿಮಾನ ದುರಂತ | ಕಾಕ್‌ಪಿಟ್‌ನಲ್ಲಿ ಹಾರಾಟದ ವೇಳೆ 1 ಗಂಟೆ 40… ಭಾರತೀಯರ ರಕ್ತಕ್ಕೆ ಪಾಕ್​ನಲ್ಲಿ ಪ್ರತೀಕಾರ: ಪುಲ್ವಾಮಾ ದಾಳಿ ಮಾಸ್ಟರ್‌ ಮೈಂಡ್ ಹಮ್ಜಾ ಬುರ್ಹಾನ್… ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ: 80,535 ವಿದ್ಯಾರ್ಥಿಗಳ ಪೈಕಿ 36,764 ಮಂದಿ… ತಜ್ಞರ ಸಮಿತಿ ವರದಿಯನ್ನು ನಿರ್ಲಕ್ಷಿಸಿದ್ದೇ ದುಬಾರೆ ದುರ್ಘಟನೆ ಕಾರಣ? ನಂಜನಗೂಡು | ಯಡಿಯಾಲ ಸುತ್ತಮುತ್ತ ಹುಲಿ ಹೆಜ್ಜೆ ಪತ್ತೆ: ಗ್ರಾಮಸ್ಥರಲ್ಲಿ ಆತಂಕ ದುಬಾರೆ ಆನೆ ಶಿಬಿರದಲ್ಲಿ ಮಾರ್ಗಸೂಚಿ ಪಾಲಿಸಲು ಸೂಚನೆ: ಕೊಡಗು ಉಸ್ತುವಾರಿ ಸಚಿವ ಬೋಸರಾಜು

ಇತ್ತೀಚಿನ ಸುದ್ದಿ

ವೈದ್ಯೋ ನಾರಾಯಣೋ ಹರಿಃ: ಇದಕ್ಕೆ ತಕ್ಕ ಹೆಸರು ಮಂಗಳಾ ಆಸ್ಪತ್ರೆಯ ಸಂಸ್ಥಾಪಕ ಡಾ. ಗಣಪತಿ

01/07/2021, 11:57

ಏಪ್ರಿಲ್ 28, 2021ರ ಬುಧವಾರ ರಾತ್ರಿ 11ರ ಸಮಯ. ಸುಮಾರು ದಿನಗಳಿಂದ ಜ್ವರ ಮೈಕೈನೋವು ಎಂದು ಚಡಪಡಿಸುತ್ತಿದ್ದ ನನ್ನ ಪತ್ನಿ ಹಾಗೂ ಮಗ ಇಬ್ಬರಿಗೂ ಅಂದು ತಡೆಯಲಾರದ ವೇದನೆ. ಇದು ಕೋವಿಡ್ ಎಂದು ಆಗಲೇ ತಿಳಿದಿದ್ದ ನಮಗೆ ಗಾಬರಿ. ಮನೆಯಲ್ಲಿ ಚಿಕ್ಕಮಕ್ಕಳು.  ಸಣ್ಣ ಊರುಗಳಲ್ಲಿ ಸರಿಯಾದ ವ್ಯವಸ್ಥೆ ಇರದ ಕಾರಣ, ದೂರದ ಮಂಗಳೂರು/ ಮಣಿಪಾಲವೇ ಗತಿ. ಆಗ ನಮಗೆ ಸಹಾಯಕ್ಕೆ ಬಂದವರು ಮಂಗಳೂರಿನ ಪ್ರಸಿದ್ಧ, ಮಂಗಳ ಆಸ್ಪತ್ರೆ ಮತ್ತು ಕಿಡ್ನಿ ಫೌಂಡೇಶನ್ ನ ಸಂಸ್ಥಾಪಕರಾದ ಡಾ। ಗಣಪತಿ. ವಿಷಯ ತಿಳಿದ ಕೂಡಲೇ ತಮ್ಮ ಸಂಸ್ಥೆಯ ಅಂಬುಲೆನ್ಸ್ ಅನ್ನು ಕಾರ್ಕಳದಲ್ಲಿರುವ ನಮ್ಮ ಮನೆಗೆ ಕಳುಹಿಸಿ ಆಸ್ಪತ್ರೆಗೆ ದಾಖಲಿಸಿ ನುರಿತ ವೈದ್ಯರ ತಂಡದ ಸಹಾಯದೊಂದಿಗೆ ಸೂಕ್ತ ಚಿಕಿತ್ಸೆಯನ್ನು ಕೊಟ್ಟರು. ತೀವ್ರ ನಿಗಾ ವಹಿಸಿದ ಪರಿಣಾಮ, ಕೇವಲ ಎರಡೇ ದಿನಗಳಲ್ಲಿ ಸೋಂಕು ಕಡಿಮೆಯಾಯಿತು. ನನ್ನಂತಹ  ಸಾವಿರಾರು ಫಲಾನುಭವಿಗಳ ಭಾವನೆಗಳ ಸಂಕೇತವಾಗಿರುವ ಈ ನಮನಗಳು ಡಾ. ಗಣಪತಿ ಹಾಗೂ ಅವರ ಎಲ್ಲ ಸಿಬ್ಬಂದಿ ವರ್ಗಕ್ಕೆ  ಹಾಗೂ ಸಮಸ್ತ ವೈದ್ಯ ಲೋಕಕ್ಕೆ ಸಮರ್ಪಿತ. 

ವೈದ್ಯೋ ನಾರಾಯಣೋ ಹರಿಃ 

ಇತ್ತೀಚಿನ ಸುದ್ದಿ

ಜಾಹೀರಾತು