ಇತ್ತೀಚಿನ ಸುದ್ದಿ
*ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: 4 ವರ್ಷಗಳ ನಂತರ ಸೋಮವಾರ ಪೇಟೆಯ ಅಬ್ದುಲ್ ನಾಸೀರ್, ಬೆಳ್ತಂಗಡಿಯ ನೌಷದ್ ಬಂಧನ*
12/07/2026, 22:44
*ಬೆಂಗಳೂರು ಮತ್ತು ಕೇರಳದ ಕೊಚ್ಚಿಯಲ್ಲಿ ಎನ್ ಐಎ ಕಾರ್ಯಾಚರಣೆ*
*2022, ಜುಲೈ 26 ರಂದು ರಾತ್ರಿ ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಿತ್ತು*
ಬೆಂಗಳೂರು(reporterkarnataka.com): ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿ ಸೋಮವಾರ ಪೇಟೆಯ ಅಬ್ದುಲ್ ನಾಸೀರ್ ಎಂಬಾತನನ್ನು 4 ವರ್ಷಗಳ ನಂತರ ಬಂಧಿಸಲಾಗಿದೆ.
ಬೆಂಗಳೂರು ಮತ್ತು ಕೇರಳದ ಕೊಚ್ಚಿಯಲ್ಲಿ ಎನ್ ಐಎ ಕಾರ್ಯಾಚರಣೆ ನಡೆಸಿತ್ತು.
ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧಿಸಲಾಗಿದೆ.
2022, ಜುಲೈ 26 ರಂದು ರಾತ್ರಿ ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಿತ್ತು.
ಬೆಳ್ತಂಗಡಿಯ ನೌಷದ್(32) ನನ್ನು ಬೆಂಗಳೂರು ಮತ್ತು ಕೇರಳದ ಕೊಚ್ಚಿಯಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ಅಬ್ದುಲ್ ನಾಸೀರ್(41) ಎನ್ ಐಎ ಬಂಧಿಸಿದೆ.
ಕೃತ್ಯ ಎಸಗಿ ಆರೋಪಿಗಳು ತಲೆಮರೆಸಿಕೊಳ್ಳಲು ಬೆಳ್ತಂಗಡಿಯ ನೌಷದ್(32) ಮತ್ತು ಸೋಮವಾರ ಪೇಟೆಯ ಅಬ್ದುಲ್ ನಾಸೀರ್(41) ಸಹಕರಿಸಿದ್ದರು ಎಂದು ಆರೋಪಿಸಲಾಗಿದೆ.












