7:19 AM Friday19 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3…

ಇತ್ತೀಚಿನ ಸುದ್ದಿ

ವಿಷಪೂರಿತ ಫಲ್ಗುಣಿ ನದಿ ನೀರು ; ಸಾಯುತ್ತಿವೆ ಮೀನುಗಳು ನೂರಾರು ! ಪಂಜರ ಮೀನು ಕೃಷಿಕರ ಕಣ್ಣೀರಿಗೆ ಹೊಣೆ ಯಾರು ?

15/05/2022, 21:27

ಗಣೇಶ್ ಅದ್ಯಪಾಡಿ ಮಂಗಳೂರು
info.reporterkarnataka@gmail.com

ಲಕ್ಷಗಟ್ಟಲೆ ಬಂಡವಾಳ ಹಾಕಿ ಹದಿನೆಂಟು ತಿಂಗಳು ಕಾಳಜಿಯಿಂದ ಸಾಕಿ ಇನ್ನೇನು ಮಾರಾಟಕ್ಕೆ ಅಣಿಯಾಗುವಾಗಲೆ ರಾಶಿ ರಾಶಿ ಮೀನುಗಳ ಮಾರಣ ಹೋಮ ನಡೆಯುತ್ತಿದೆ.

ಹೌದು, ಮಂಗಳೂರಿನ‌ ಬಂಗ್ರ ಕೂಳೂರು ಸಮೀಪ ಪಂಜರ ಮೀನು ಕೃಷಿ ಮಾಡುತ್ತಿರುವ ಮೀನುಗಾರರ ವ್ಯಥೆಯಿದು. ನಗರದ ಫಲ್ಗುಣಿ ನದಿಯಲ್ಲಿ ಪಂಜರ ಅಳವಡಿಸಿ ಮೀನು ಕೃಷಿ ಮಾಡುತ್ತಿರುವ ಸ್ಥಳೀಯರಾದ ರಾಯ್ಸ್ ಡಿಸೋಜಾ, ರುಫಿನಾ ಡಿಸೋಜಾ ಹಾಗೂ ಆಸ್ಟಿನ್ ಅವರ ಮೀನುಗಳು ಕಲುಷಿತಗೊಂಡ ನದಿಯ ನೀರಿನಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದು, ಶನಿವಾರ ಒಂದೇ ದಿನ ತಲ ಒಂದೂವರೆ ಕೆ.ಜಿ ತೂಕದ 47 ಮೀನುಗಳು ಸತ್ತು ಹೋಗಿದ್ದು,‌ಕೃಷಿಕರನ್ನು ಚಿಂತೆಗೀಡು ಮಾಡಿದೆ.

ನದಿಯ ಕಿನಾರೆಯಲ್ಲಿರುವ ಅನೇಕ ಕಾರ್ಖಾನೆಗಳು ರಾಸಾಯನಿಕಯುಕ್ತ ನೀರನ್ನು ನದಿಗೆ ಬಿಡುತ್ತಿರುವುದೇ ಇದಕ್ಕೆ ಕಾರಣವಾಗಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ‌ ಸಂಬಂಧಪಟ್ಟ ಇಲಾಖೆಗಳು ಕಣ್ಣು ಮುಚ್ಚಿ ಕೂತಿದ್ದು, ಮೀನುಗಾರರ ಕಣ್ಣೀರಿಗೆ ಬೆಲೆಯೆ ಇಲ್ಲದಂತಾಗಿದೆ.

ರಾಯ್ಸ್ ಅವರು ಹೇಳುವ ಪ್ರಕಾರ 2020ರ ಡಿಸೆಂಬರ್‌ನಲ್ಲಿ ಮೀನಿನ ಮರಿಗಳನ್ನು ಹಾಕಲಾಗಿತ್ತು, ಮಾರ್ಚ್ ತಿಂಗಳಲ್ಲಿ ಕಲುಷಿತ ನೀರು ಬರಲು ಶುರುವಾಗಿತ್ತು, ಆಗಲೇ ಹಲವಾರು ಮೀನುಗಳನ್ನು ಬಿಸಾಡಲಾಗಿತ್ತು.

ಒಟ್ಟಾಗಿ ಎಂಟೂವರೆ ಸಾವಿರ ಮೀನು ಮರಿಗಳನ್ನು ಹಾಕಿದ್ದೇವೆ. ಅರವತ್ತೈದು ದಿನಗಳಲ್ಲಿಯೇ ಬಹುತೇಕ ಮೀನುಗಳನ್ನು ಬಿಸಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಆಗಲೂ ಬಿಸಾಡಿದ್ದೇವೆ ಈಗ ಹದಿನೆಂಟು ತಿಂಗಳು ಸಾಕಿದ ಮೀನನ್ನು ತೆಗೆದು ಹೂಳುವಂತಾಗಿದೆ ಎಂದು ನೋವಿನಿಂದ ಹೇಳುತ್ತಾರೆ.

ಇಲ್ಲಿ ಸಾಕಿರುವ ಮುಡಾವು ಎನ್ನುವ ಮೀನಿನ ಮರಿಗೆ 50ರೂ. ದರವಿದೆ ಇದನ್ನು ಆಂದ್ರದಿಂದ ತರಿಸಿಕೊಳ್ಳಬೇಕು. ನಾಲ್ಕೂವರೆ ಐದು ಲಕ್ಷ ರೂಪಾಯಿ ಮೀನಿನ ಮರಿಗಳಿಗೆ ಲಕ್ಷಾಂತರ ರೂಪಾಯಿ ಗೂಡುಗಳಿಗೆ ಹಾಕು ಪ್ರತಿ ತಿಂಗಳು ಮೀನಿನ ಆಹಾರಕ್ಕೆ ನಲವತ್ತು ಸಾವಿರ ಖರ್ಚು ಮಾಡಿ ಕೊನೆಗೆ ಸಾಕಿದ ಮೀನುಗಳ ಶವದ ರಾಶಿ ನೋಡಿ ಕಣ್ಣೀರು ಹಾಕುತ್ತಿರುವ ಮೀನು ಕೃಷಿಕರಿಗಾದ ಲಕ್ಷಾಂತರ ರೂಪಾಯಿ ನಷ್ಟಕ್ಕೆ ಹೊಣೆ ಯಾರು ?

ತೆರೆದ ಕಣ್ಣಿಗೆ ನದಿಯ ನೀರು ಹಾಲು ಹಾಕದ ಚಹಾ ದಂತೆ ಕಪ್ಪು ಕಪ್ಪಾಗಿ ಕಂಡರೂ ಮಾಲಿನ್ಯ ನಿಯಂತ್ರಣ ಮಂಡಳಿ ಕುರುಡಾಗಿದ್ದು ಯಾಕೆ ? ಮೀನುಗಾರರಿಗಾದ ಲಕ್ಷಾಂತರ ರೂಪಾಯಿ ನಷ್ಟಕ್ಕೆ ಹೊಣೆ ಯಾರು ? ಮೀನು ಕೃಷಿಕರ ಕಣ್ಣೀರು ಒರೆಸುವವರಾರು ? ಕೆಎಫ್‌ಡಿಸಿ ಕೂಡ ಸುಮ್ಮನೆ ಕೂತಿದ್ದು ಯಾಕೆ ? ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿದ್ದು ಇದಕ್ಕೆ ಸೂಕ್ತ ಉತ್ತರಗಳು ಸಿಗಬೇಕಾಗಿದೆ.

ಹದಿನೆಂಟು ತಿಂಗಳು ಕಾಳಜಿಯಿಂದ ಸಾಕಿದ ಮೀನುಗಳು ಈಗ ಶವವಾಗಿ ಮೇಲೆ ಬರುತ್ತಿರುವಾಗ ಕರುಳು ಚುರುಕು ಎನ್ನುತ್ತಿದೆ. ಎಂಟು ಟನ್‌ನಷ್ಟು ಇಳುವರಿ ಬರಬೇಕಾದಲ್ಲಿ ಈಗ ಒಂದು ಟನ್‌ ನಷ್ಟು ಮೀನು ಸಿಗುವುದು ಅನುಮಾನವಾಗಿದೆ.‌ಕಳೆದ ಒಂದೂವರೆ ವರ್ಷದಿಂದ ನದಿಯ ನೀರು ಕಲುಷಿತಗೊಳ್ಳುತ್ತಿದ್ದರೂ ಯಾರೂ ಈ ಬಗ್ಗೆ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ.
-ರಾಯ್ಸ್ ಡಿಸೋಜಾ, ಪಂಜರ ಮೀನು ಕೃಷಿಕರು

ಇತ್ತೀಚಿನ ಸುದ್ದಿ

ಜಾಹೀರಾತು