9:31 PM Sunday16 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ತೀರ್ಥಹಳ್ಳಿ: ಟಿಂಬರ್ ಲೋಡ್ ಮಾಡುವಾಗ ತಲೆ ಮೇಲೆ ಬಿದ್ದ ಮರದ ದಿಮ್ಮಿ ಬಿದ್ದು ವ್ಯಕ್ತಿ ಸಾವು

08/07/2025, 19:12

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಟಿಂಬರ್ ಲೋಡ್ ಕೆಲಸಕ್ಕೆಂದು ಹೋಗಿದ್ದ ವೇಳೆಯಲ್ಲಿ ಮರದ ದಿಮ್ಮಿಗಳನ್ನು ಮೇಲಿನಿಂದ ಕೆಳಗೆ ತಂದು ಹಾಕುತ್ತಿರುವಾಗ ಕಾಲು ಜಾರಿ ಬಿದ್ದ ಕಾರಣದಿಂದ ಮರದ ದಿಮ್ಮಿ ಮೈಮೇಲೆ ಮೇಲೆ ಬಿದ್ದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಸವಾನಿಯಲ್ಲಿ ನಡೆದಿದೆ.
ಯೋಗೇಂದ್ರ (52 ) ಮೃತಪಟ್ಟ ದುರ್ದೈವಿ. ದೇವಂಗಿ ಗ್ರಾಮದ ವ್ಯಕ್ತಿ ಯೊಬ್ಬರು ಟಿಂಬರ್ ಲೋಡ್ ಮಾಡಲು ಹೇಳಿದ್ದ ಕಾರಣದಿಂದ ಬಸವಾನಿ ಗ್ರಾಮದ ಜ್ಯೋತಿಸರ ಎಂಬಲ್ಲಿಗೆ ಯೋಗೇದ್ರ ಸೇರಿ ನಾಲ್ವರು ಕೆಲಸಕ್ಕಾಗಿ ಹೋಗಿದ್ದರು. ಈ ವೇಳೆ ಮರದ ದಿಮ್ಮಿಗಳನ್ನು ಮೇಲಿನಿಂದ ಕೆಳಗೆ ತಂದು ಹಾಕುತ್ತಿರುವಾಗ ಕಾಲು ಜಾರಿ ಬಿದ್ದು ಮರದ ದಿಮ್ಮಿ ಯೋಗೇಂದ್ರ ಎಂಬುವರ ತಲೆಗೆ ಹಾಗೂ ಮೂಗಿಗೆ ಬಲವಾಗಿ ಬಡಿದು ರಕ್ತ ಸ್ರಾವವಾಗಿರುತ್ತದೆ.
ತಕ್ಷಣವೇ ಅವರ ಸ್ನೇಹಿತರು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಆ ವೇಳೆಗೆ ಯೋಗೇದ್ರ ಎಂಬುವರು ಮೃತಪಟ್ಟಿರುತ್ತಾರೆ. ಕೂಲಿ ಕೆಲಸಕ್ಕೆಂದು ಪರಸ್ಥಳದಿಂದ ಕರೆಸಿ ಅತೀ ಭಾರವಾದಂತಹ ಮರದ ದಿಮ್ಮಿಗಳನ್ನು ಮೇಲಿನಿಂದ ತಂದು ಕೆಳಗೆ ಹಾಕಲು ಒತ್ತಾಯ ಪಡಿಸಿದ್ದು ಯಾವುದೇ ಮುಂಜಾಗ್ರತೆ ಕ್ರಮವನ್ನು ಕೆಲಸಗಾರರಿಗೆ ಕೆಲಸ ಮಾಡಲು ತೆಗೆದುಕೊಳ್ಳದೆ ನಿರ್ಲಕ್ಷ್ಯವಹಿಸಿ ನನ್ನ ತಮ್ಮ ಯೋಗೇಂದ್ರ ರವರ ಸಾವಿಗೆ ಕಾರಣನಾದ ಟಿಂಬರ್ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಯೋಗೇದ್ರ ಅವರ ಸಹೋದರ ದೂರು ನೀಡಿದ್ದಾರೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕಾರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು