1:59 PM Thursday20 - August 2026
ಬ್ರೇಕಿಂಗ್ ನ್ಯೂಸ್
ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ…

ಇತ್ತೀಚಿನ ಸುದ್ದಿ

ಥೇಟ್ ಮಹಾತ್ಮ ಗಾಂಧೀಜಿಯಂತೆ ಇವರ ವೇಷ!: ರಾಷ್ಟ್ರಪಿತ ಪುತ್ಥಳಿಯಂತೆ ತಾಸುಗಟ್ಟಲೆ ಕದಲದೆ ನಿಲ್ಲುತ್ತಾರೆ!!

25/11/2023, 19:33

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಉದರ ನಿಮಿತ್ತಂ ಬಹುಕೃತ ವೇಷಂ ಎಂಬಂತೆ ಮನುಷ್ಯ ತನ್ನ ಜೀವನೋಪಾಯ ಹಾಗೂ ಹೊಟ್ಟೆಪಾಡಿಗಾಗಿ ಏನೆಲ್ಲಾ ಮಾಡುತ್ತಾನೆ ನೀವೇ ನೋಡಿ.
ಇಲ್ಲೊಬ್ಬ ವ್ಯಕ್ತಿ ತನ್ನ ಹೊಟ್ಟೆಪಾಡಿಗಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನೆ ನಾಚಿಸುವಂತಹ ವೇಷದಾರಿಯಾಗಿ ನಿಂತಿದ್ದಾನೆ.
ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಮುಂಭಾಗ ದಿಢೀರ್ ಪ್ರತ್ಯಕ್ಷವಾದ ಈ ಮಹಾತ್ಮ ನೋಡುವುದಕ್ಕೆ ಥೇಟ್ ಮಹಾತ್ಮ ಗಾಂಧಿಯಂತೆಯೇ ಕಾಣುತ್ತಿದ್ದಾನೆ. ಇವನು ನಿಂತಿರುವ ಭಂಗಿ ಯಾವುದೇ ಮಹಾತ್ಮ ಗಾಂಧೀಜಿಯವರ ಚಿತ್ರ ಹಾಗೂ ಪುತ್ತಳಿಗಿಂತ ಕಮ್ಮಿ ಇಲ್ಲ. ತಲೆಯಿಂದ ಉಂಗುಷ್ಟದವರೆಗೂ ಒಂದು ರೀತಿ ಸಿಲ್ವರ್ ಬಣ್ಣ ಹಚ್ಚಿಕೊಂಡು ಕಣ್ಣಿಗೆ ಕನ್ನಡಕ ಕೈಯಲ್ಲಿ ಕೋಲು ಹಿಡಿದು ಕೊಂಡು ನಿಂತಿರುವ ದೃಶ್ಯ ಗಾಂಧೀಜಿ ಅವರ ಪುತ್ಥಳಿ ಯಂತೆ ಭಾಸವಾಗುತ್ತಿದೆ.


ಸುಡು ಬಿಸಿಲಿನಲ್ಲಿಯೇ ಯಾವುದೇ ಚಲನವಲನವಿಲ್ಲದೆ, ಕಣ್ಣು ಸಹ ಮಿಟುಕಿಸದೆ, ಮಾತನ್ನು ಸಹ ಆಡದೇ ನಿರ್ಜೀವ ಶಿಲೆಯಂತೆಯೇ ನಿಂತಿರುವ ಈತನ ಭಂಗಿ ನಿಜಕ್ಕೂ ಮೆಚ್ಚುವಂಥದ್ದೆ ಆಗಿದೆ.
ದೇವಾಲಯಕ್ಕೆ ಬರುವ ಭಕ್ತರು ಇದನ್ನು ನೋಡಿ ಇದೊಂದು ಪುತ್ತಳಿಯೇ ಇರಬೇಕು ಎಂದು ಭಾವಿಸಿದರೆ ಮತ್ತೆ ಕೆಲವರು ಆತನ ಮೈ ಕೈ ಹಾಗೂ ಕೋಲನ್ನು ಮುಟ್ಟಿ ಇದು ಪುತ್ಥಳಿಯೋ ಅಥವಾ ಮನುಷ್ಯನೋ ಎಂದು ಖಾತರಿಪಡಿಸಿಕೊಳ್ಳುತ್ತಿದ್ದರು.
ಕೆಲವು ಭಕ್ತರು ಭಕ್ತಿಯಿಂದ ಮುಟ್ಟಿ ನಮಸ್ಕರಿಸಿದರೆ ಮತ್ತೆ ಕೆಲವರು ಸೆಲ್ಫಿ ಹಾಗೂ ಫೋಟೋ ತೆಗೆಸಿಕೊಂಡು ಖುಷಿಪಟ್ಟು ತಮ್ಮ ಕೈಲಾದ ಹಣ ಸಹಾಯ ಮಾಡುತ್ತಿದ್ದರು.
ಒಟ್ಟಾರೆ ಯಾರೇ ಮುಟ್ಟಿದರು ಏನೇ ಮಾತನಾಡಿದರು ತಾನು ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ನಿರ್ಜೀವ ವಸ್ತುವಿನಂತೆ ನಿಂತುಕೊಂಡೇ ಎಲ್ಲಾ ಸಾರ್ವಜನಿಕರ ಗಮನ ಸೆಳೆದ ಮಹಾತ್ಮ ಗಾಂಧಿ ವೇಷದಾರಿ.

ಇತ್ತೀಚಿನ ಸುದ್ದಿ

ಜಾಹೀರಾತು