3:46 AM Friday21 - August 2026
ಬ್ರೇಕಿಂಗ್ ನ್ಯೂಸ್
ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್…

ಇತ್ತೀಚಿನ ಸುದ್ದಿ

Sports | ಪುತ್ತೂರು: ಜನವರಿ 4ರಂದು ಅಂತರ್ ಜಿಲ್ಲಾ ಬಲ್ಯಾಯ ಕ್ರೀಡೋತ್ಸವ 2026

22/12/2025, 12:37

ಪುತ್ತೂರು(reporterkarnataka.com): ಕಣಿಯಾನ್ ಸಮಾಜ ಸೇವಾ ಸಂಘ ಮಂಗಳೂರು( ರಿ )ಪುತ್ತೂರು ಹಾಗೂ ಕಣಿಯನ್ ಅಭ್ಯುದಯ ಯುವ ಸಂಘ ಪುತ್ತೂರು, ದ.ಕ. ಇದರ ಸಹ ಯೋಗದಲ್ಲಿ ದ.ಕ,ಉಡುಪಿ, ಕಾಸರಗೋಡು, ಜಿಲ್ಲಾ ಮಟ್ಟದ ಸ್ವ ಜಾತಿ ಬಾಂಧವರ ಕಣಿಯನ್ ಕ್ರೀಡೋತ್ಸವ 2026 ಇದೆ ಬರುವ ಜನವರಿ 4ರಂದು ಪುತ್ತೂರಿನ ಟೆಂಕಿಲ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ನಾಟಿ ವೈದ್ಯ ದೇವಸ್ಯ ನಾರಾಯಣ ಬಲ್ಯಾಯ ಉದ್ಘಾಟಿಸಲಿದ್ದಾರೆ.


ಮುಖ್ಯ ಅತಿಥಿಗಳಾಗಿ ಬಲ್ಯಾಯ ಸಂಘ ಮಂಗಳೂರು ಅಧ್ಯಕ್ಷೆ ಉಮಾಲಕ್ಷ್ಮಿ ಕುಡುಪು, ಕಣಿಯನ್ ಸಮಾಜ ಸಂಘ ಪುತ್ತೂರು ಅಧ್ಯಕ್ಷ ಸತೀಶ್ ಬಲ್ಯಾಯ ಕೆಮ್ಮಯಿ, ಮಂಗಳೂರು ಕೃಷಿ ಇಲಾಖೆಯ ಶಶಿಕಲಾ ಧನಂಜಯ ಅರ್ಕುಳ, ಪ್ರಗತಿ ಪರ ಕೃಷಿಕ ಆರ್ಯಾಪು ರಮಾನಂದ ಎನ್. ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಕಣಿಯನ್ ಅಭ್ಯುದಯ ಯುವ ಸಂಘ ಪುತ್ತೂರು ಪ್ರಸಾದ್ ಬಲ್ಯಾಯ ದೊಡ್ಡಡ್ಕ ವಹಿಸಲಿದ್ದಾರೆ.
ಕ್ರೀಡೋತ್ಸವದಲ್ಲಿ ಸ್ವ ಜಾತಿ ಸಮಾಜ ಬಾಂಧವರಿಗೆ ಕಿರಿಯರಿಂದ ಹಿರಿಯರ ವರೆಗೂ ವಿವಿಧ ಆಟೋಟ ಸ್ಪರ್ಧೆ ಗಳನ್ನು ಏರ್ಪಡಿಸಲಾಗಿದೆ.

*ಸ್ಪರ್ಧೆ ಗಳ ವಿವರ:*
ಸ್ವ ಜಾತಿ ವಿದ್ಯಾರ್ಥಿಗಳಿಗೆ
1 ರಿಂದ 4ನೇ ತರಗತಿಯ ವರೆಗೆ : ಕಪ್ಪೆ ಜಿಗಿತ, ಪಾಸಿಂಗ್ ಬಾಲ್
5 ರಿಂದ 8ನೇ ತರಗತಿಯ ವರೆಗೆ : 100 ಮೀಟರ್ ಓಟ, ಸಂಗೀತ ಕುರ್ಚಿ,ಲಿಂಬೆ ಚಮಚ ಓಟ.

*ಸ್ವಜಾತಿ ಬಾಂಧವರಿಗೆ
ಪುರುಷರಿಗೆ:* ಕ್ರಿಕೆಟ್,ಕಬ್ಬಡಿ ವಾಲಿಬಾಲ್, ಹಗ್ಗಜಗ್ಗಾಟ,ಶಟ್ಲ್ ಬ್ಯಾಡ್ಮಿಂಟನ್.

*ಮಹಿಳೆಯರಿಗೆ:* ತ್ರೋಬಾಲ್, ಹಗ್ಗಜಗ್ಗಾಟ, ಮಡಕೆ ಒಡೆಯುವುದು. ಸಂಗೀತ ಕುರ್ಚಿ.
ಸಂಜೆ 5.00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು,ಸ್ಪರ್ಧಾ ವಿಜೇತ ರಿಗೆ ತಿಂಕಿಲ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ ಭಾಸ್ಕರ ಬಲ್ಯಾಯ ಕಾವು ಬಹುಮಾನ ವಿತರಿಸಲಿದ್ದಾರೆ.
ಅತಿಥಿಗಳಾಗಿ ಅಲಂಗಾರು ಶ್ರೀಧರ ಬಲ್ಯಾಯ, ಆರ್ಲ ಪದವು ಸ್ವಸ್ತಿಕ್ ಜ್ಯೋತಿಷ್ಯಾ ಲಯ ಜ್ಯೋತಿಷಿ ಲೋಕೇಶ್ ಬಲ್ಯಾಯ ದೊಡ್ಡಡ್ಕ, ಮಂಗಳೂರು ಬಲ್ಯಾಯ ಸಂಘ ಯುವ ವೇದಿಕೆ ಸಂಚಾಲಕ ಅರವಿಂದ ಪೆರ್ಮಂಕಿ, ಎಲೆ ಕಲಾವಿದ ಶಶಿ ಅಡ್ಕಾರ್ , ಪುತ್ತೂರು ಉದ್ಯಮಿ ಉಪೇಂದ್ರ ಬಲ್ಯಾಯ ದೇವಸ್ಯ, ಜ್ಯೋತಿಷಿ ಜಯರಾಮ ಬಲ್ಯಾ ಯ ಪರ್ಲಡ್ಕ ಉಪಸ್ಥಿತರಿರುವರು.

ಇತ್ತೀಚಿನ ಸುದ್ದಿ

ಜಾಹೀರಾತು