9:33 AM Friday17 - April 2026
ಬ್ರೇಕಿಂಗ್ ನ್ಯೂಸ್
ಪುತ್ರನ ಮೇಲಿನ ಹಲ್ಲೆ ಕೇಸ್ ಕೈಬಿಡಿ: ಅನಂತ ಕುಮಾರ್ ಹೆಗಡೆ ಮನವಿಗೆ ಸ್ಪಂದಿಸಿದ… ಕೋಡಪದವಿನಲ್ಲಿ ಚಿನ್ನದ ಸರ ಕದ್ದ ಪ್ರಕರಣಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಫೋಟೋದ ವ್ಯಕ್ತಿಗೂ… Chikkamagaluru | ಬಣಕಲ್: ಚಾಲಕನ ನಿಯಂತ್ರಣ ತಪ್ಪಿ ಐಟ್ವೆಂಟಿ ಕಾರು ವಿದ್ಯುತ್ ಕಂಬಕ್ಕೆ… ಕೊಟ್ಟಿಗೆಹಾರ-ಹೊರನಾಡು–ಶೃಂಗೇರಿ ರಸ್ತೆಯಲ್ಲಿ ಟ್ಯಾಕ್ಟರ್ ಪಲ್ಟಿ: ಅರ್ಧ ಗಂಟೆ ಸಂಚಾರ ಸ್ಥಗಿತ ಮಂಗಳೂರು-ಚೆನ್ನೈ ಎಗ್ಮೋರ್ ವಿಶೇಷ ರೈಲು ಓಡಾಟ ವಿಸ್ತರಣೆ: ಎಲ್ಲೆಲ್ಲಿ ನಿಲುಗಡೆ ಇದೆ? ಕುಶಾಲನಗರ | ರಸ್ತೆ ಅಪಘಾತ: ಕಿರುತೆರೆಯ ನಟ ಹರೀಶ್ ಸ್ಥಳದಲ್ಲೇ ಸಾವು ಗಾಂಧಿ ಬದುಕೇ ಒಂದು ಸಂದೇಶ: ಮಸ್ಕಿಯಲ್ಲಿ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಡಾ. ಕೊಡಗುಂಟಿ 3 ದಿನಗಳಿಂದ ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ಪತ್ತೆ: ಚಂದ್ರದ್ರೋಣ ಪರ್ವತದ 2 ಸಾವಿರ… ಪ್ರಧಾನಿ‌ ಮೋದಿಗೆ ಸಂಬಂಧಿಸಿದ ಗೌಪ್ಯ ಮಾಹಿತಿ ರವಾನೆ: ವಿದೇಶಿ ಏಜೆನ್ಸಿಗಳ ಜತೆ ಸಂಪರ್ಕ;… ಉತ್ತರ ಪ್ರದೇಶದಲ್ಲಿ ಭೀಕರ ದೋಣಿ ದುರಂತ: ಪ್ರವಾಸಿಗರಿದ್ದ ಸ್ಟೀಮರ್ ಪಲ್ಟಿಯಾಗಿ 10 ಮಂದಿ…

ಇತ್ತೀಚಿನ ಸುದ್ದಿ

Sports | ಪುತ್ತೂರು: ಜನವರಿ 4ರಂದು ಅಂತರ್ ಜಿಲ್ಲಾ ಬಲ್ಯಾಯ ಕ್ರೀಡೋತ್ಸವ 2026

22/12/2025, 12:37

ಪುತ್ತೂರು(reporterkarnataka.com): ಕಣಿಯಾನ್ ಸಮಾಜ ಸೇವಾ ಸಂಘ ಮಂಗಳೂರು( ರಿ )ಪುತ್ತೂರು ಹಾಗೂ ಕಣಿಯನ್ ಅಭ್ಯುದಯ ಯುವ ಸಂಘ ಪುತ್ತೂರು, ದ.ಕ. ಇದರ ಸಹ ಯೋಗದಲ್ಲಿ ದ.ಕ,ಉಡುಪಿ, ಕಾಸರಗೋಡು, ಜಿಲ್ಲಾ ಮಟ್ಟದ ಸ್ವ ಜಾತಿ ಬಾಂಧವರ ಕಣಿಯನ್ ಕ್ರೀಡೋತ್ಸವ 2026 ಇದೆ ಬರುವ ಜನವರಿ 4ರಂದು ಪುತ್ತೂರಿನ ಟೆಂಕಿಲ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ನಾಟಿ ವೈದ್ಯ ದೇವಸ್ಯ ನಾರಾಯಣ ಬಲ್ಯಾಯ ಉದ್ಘಾಟಿಸಲಿದ್ದಾರೆ.


ಮುಖ್ಯ ಅತಿಥಿಗಳಾಗಿ ಬಲ್ಯಾಯ ಸಂಘ ಮಂಗಳೂರು ಅಧ್ಯಕ್ಷೆ ಉಮಾಲಕ್ಷ್ಮಿ ಕುಡುಪು, ಕಣಿಯನ್ ಸಮಾಜ ಸಂಘ ಪುತ್ತೂರು ಅಧ್ಯಕ್ಷ ಸತೀಶ್ ಬಲ್ಯಾಯ ಕೆಮ್ಮಯಿ, ಮಂಗಳೂರು ಕೃಷಿ ಇಲಾಖೆಯ ಶಶಿಕಲಾ ಧನಂಜಯ ಅರ್ಕುಳ, ಪ್ರಗತಿ ಪರ ಕೃಷಿಕ ಆರ್ಯಾಪು ರಮಾನಂದ ಎನ್. ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಕಣಿಯನ್ ಅಭ್ಯುದಯ ಯುವ ಸಂಘ ಪುತ್ತೂರು ಪ್ರಸಾದ್ ಬಲ್ಯಾಯ ದೊಡ್ಡಡ್ಕ ವಹಿಸಲಿದ್ದಾರೆ.
ಕ್ರೀಡೋತ್ಸವದಲ್ಲಿ ಸ್ವ ಜಾತಿ ಸಮಾಜ ಬಾಂಧವರಿಗೆ ಕಿರಿಯರಿಂದ ಹಿರಿಯರ ವರೆಗೂ ವಿವಿಧ ಆಟೋಟ ಸ್ಪರ್ಧೆ ಗಳನ್ನು ಏರ್ಪಡಿಸಲಾಗಿದೆ.

*ಸ್ಪರ್ಧೆ ಗಳ ವಿವರ:*
ಸ್ವ ಜಾತಿ ವಿದ್ಯಾರ್ಥಿಗಳಿಗೆ
1 ರಿಂದ 4ನೇ ತರಗತಿಯ ವರೆಗೆ : ಕಪ್ಪೆ ಜಿಗಿತ, ಪಾಸಿಂಗ್ ಬಾಲ್
5 ರಿಂದ 8ನೇ ತರಗತಿಯ ವರೆಗೆ : 100 ಮೀಟರ್ ಓಟ, ಸಂಗೀತ ಕುರ್ಚಿ,ಲಿಂಬೆ ಚಮಚ ಓಟ.

*ಸ್ವಜಾತಿ ಬಾಂಧವರಿಗೆ
ಪುರುಷರಿಗೆ:* ಕ್ರಿಕೆಟ್,ಕಬ್ಬಡಿ ವಾಲಿಬಾಲ್, ಹಗ್ಗಜಗ್ಗಾಟ,ಶಟ್ಲ್ ಬ್ಯಾಡ್ಮಿಂಟನ್.

*ಮಹಿಳೆಯರಿಗೆ:* ತ್ರೋಬಾಲ್, ಹಗ್ಗಜಗ್ಗಾಟ, ಮಡಕೆ ಒಡೆಯುವುದು. ಸಂಗೀತ ಕುರ್ಚಿ.
ಸಂಜೆ 5.00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು,ಸ್ಪರ್ಧಾ ವಿಜೇತ ರಿಗೆ ತಿಂಕಿಲ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ ಭಾಸ್ಕರ ಬಲ್ಯಾಯ ಕಾವು ಬಹುಮಾನ ವಿತರಿಸಲಿದ್ದಾರೆ.
ಅತಿಥಿಗಳಾಗಿ ಅಲಂಗಾರು ಶ್ರೀಧರ ಬಲ್ಯಾಯ, ಆರ್ಲ ಪದವು ಸ್ವಸ್ತಿಕ್ ಜ್ಯೋತಿಷ್ಯಾ ಲಯ ಜ್ಯೋತಿಷಿ ಲೋಕೇಶ್ ಬಲ್ಯಾಯ ದೊಡ್ಡಡ್ಕ, ಮಂಗಳೂರು ಬಲ್ಯಾಯ ಸಂಘ ಯುವ ವೇದಿಕೆ ಸಂಚಾಲಕ ಅರವಿಂದ ಪೆರ್ಮಂಕಿ, ಎಲೆ ಕಲಾವಿದ ಶಶಿ ಅಡ್ಕಾರ್ , ಪುತ್ತೂರು ಉದ್ಯಮಿ ಉಪೇಂದ್ರ ಬಲ್ಯಾಯ ದೇವಸ್ಯ, ಜ್ಯೋತಿಷಿ ಜಯರಾಮ ಬಲ್ಯಾ ಯ ಪರ್ಲಡ್ಕ ಉಪಸ್ಥಿತರಿರುವರು.

ಇತ್ತೀಚಿನ ಸುದ್ದಿ

ಜಾಹೀರಾತು