4:04 PM Saturday20 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ…

ಇತ್ತೀಚಿನ ಸುದ್ದಿ

ಸ್ಮಾರ್ಟ್ ಸಿಟಿ: ಗಟ್ಟಿ ಮುಟ್ಟಾದ ರಸ್ತೆ ಅಗೆದು ಕಾಂಕ್ರೀಟ್ ಹಾಕಿದರೂ ಮೂಲ ಸಮಸ್ಯೆ ಜನಪ್ರತಿನಿಧಿಗಳಿಗೆ ಕಾಣಿಸ್ಲೇ ಇಲ್ಲ!

14/12/2023, 22:06

ಮಂಗಳೂರು(reporterkarnataka.com): ನೀವು ನೋಡುತ್ತಿರುವ ಈ ಚಿತ್ರಗಳು ನೀವು ಅಂದುಕೊಂಡಂತೆ ಸ್ಮಾರ್ಟ್ ಸಿಟಿ ಮಂಗಳೂರಿನದ್ದೇ ಆಗಿದೆ. ಅದಲ್ಲದೆ ನೀವು ತಿಳ್ಕೊಂಡಂತೆ ಹಂಪನಕಟ್ಟೆಯ ಪಿರೇರಾ ಹೊಟೇಲ್ ಸಮೀಪದ ಚಿತ್ರಣವಾಗಿದೆ.


ಸರಿ, ಹಾಗಾದರೆ ಇದರಲ್ಲೇನು ವಿಶೇಷ ಅಂದು ಕೊಳ್ಳಬಹುದು ನೀವು. ಪಿರೇರಾ ಹೊಟೇಲ್ ಬಳಿ ನಿಂತರೆ ಅಲ್ಲೇ ಸೆಂಟ್ರಲ್ ಮಾರ್ಕೆಟ್ ಕಡೆ ಹೋಗುವ ಕ್ರಾಸ್ ರೋಡ್ ಇದೆ. ಈ ರಸ್ತೆಯಲ್ಲಿ ಸಾಗಿದರೆ ರಥಬೀದಿಯತ್ತಲೂ ಹೋಗಬಹುದು, ಇಲ್ಲವೇ ಕೆ.ಎಸ್. ರಾವ್ ರಸ್ತೆಗೂ ಸೇರಬಹುದು. ಆದರೆ ಈ ಪಿರೇರಾ ಹೊಟೇಲ್ ಬಳಿಯ ಸಮಸ್ಯೆ ಏನೆಂದರೆ ಇಲ್ಲೇ ಸಿಟಿ ಬಸ್ ಸ್ಟಾಪ್ ಕಲ್ಪಿಸಲಾಗಿದೆ. ಬಸ್ ಶೆಲ್ಟರ್ ಕೂಡ ಇದೆ. ರೋಡ್ ಟರ್ನ್ ಆಗುವ ಜಾಗದಲ್ಲೇ ಪ್ರಭಾವಿಗಳಿಗೆ ತೊಂದರೆಯಾಗದಂತೆ ಅವೈಜ್ಞಾನಿಕ ಮಾದರಿಯಲ್ಲಿ ಬಸ್ ಶೆಲ್ಟರ್ ನಿರ್ಮಿಸಲಾಗಿದೆ. ಅಷ್ಟೇ ಅಲ್ಲದೆ ಇಲ್ಲಿ ರಸ್ತೆ ಬದಿಯೂ ಸರಿ ಇಲ್ಲ. ಗಟ್ಟಿಮುಟ್ಟಾದ ರಸ್ತೆಯನ್ನು ಅಗೆದು ಸ್ಮಾರ್ಟ್ ಸಿಟಿ ಹಣದಲ್ಲಿ ಕಾಂಕ್ರೀಟ್ ಹಾಕಿದವರಿಗೆ ಇದೆಲ್ಲ ಕಾಣಿಸೋಲ್ಲ. ರಸ್ತೆ ಬದಿ ತಗ್ಗು ದಿಣ್ಣೆಗಳಿಂದ ಕೂಡಿದೆ. ಪೀಕ್ ಅವರ್ ನಲ್ಲಿ ಇಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಬಸ್ ಸೇರಿದಂತೆ ವಾಹನಗಳು ರಸ್ತೆ ಬಿಟ್ಟು ಕೆಳಗಿಳಿಯುತ್ತವೆ. ತಗ್ಗು ದಿಣ್ಣೆಯಲ್ಲಿ ಸಂಚರಿಸುತ್ತವೆ. ಇಂತಹ ನೂರಾರು ಸಮಸ್ಯೆಗಳು ನಿತ್ಯ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಆದರೆ ಅಧಿಕಾರಸ್ಥರಿಗೆ ಕಾಣಿಸೋದೇ ಇಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು