3:44 AM Saturday5 - July 2025
ಬ್ರೇಕಿಂಗ್ ನ್ಯೂಸ್
Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ…

ಇತ್ತೀಚಿನ ಸುದ್ದಿ

ಸಿದ್ದರಾಮಯ್ಯ ಮಾಡಿರುವ ತಪ್ಪಿಗೆ ಕನಿಷ್ಠ ಶಿಕ್ಷೆ ಎಂದರೆ ಅವರು ರಾಜೀನಾಮೆ ಕೊಡುವುದು: ಆರಗ ಜ್ಞಾನೇಂದ್ರ

01/10/2024, 20:48

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಮುಡಾ ಹಗರಣದ ಬಗ್ಗೆ ನಾನು ನಿನ್ನೆ ರಾತ್ರಿ ಮಾಧ್ಯಮದಲ್ಲೇ ನೋಡುತ್ತಾ ಇದ್ದೆ. 14 ಸೈಟ್ ಗಳನ್ನು ನಾನು ಹಿಂತಿರುಗಿಸುತ್ತೇನೆಂದು ಪತ್ರ ಬರೆದಿದ್ದಾರೆ. ವಿಚಾರಣೆಯನ್ನು ಎದುರಿಸಲು ನಾನು ಸಿದ್ದ ನಾನು ಯಾವುದೇ ತಪ್ಪು ಮಾಡಿಲ್ಲ ಹೇಳುತ್ತಾ ಬರುತ್ತಿದ್ದರು. ಇದುವರೆಗೂ ಯಾಕೆ ಹೋರಾಟ ಮಾಡಿದ್ದರು ಎಂದು ಗೊತ್ತಿಲ್ಲ ಎಂದು ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಮಂಗಳವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಿಎಂ ಪತ್ನಿ ಮುಡಾ ಸೈಟ್ ಹಿಂದಿರುಗಿಸಿದ ವಿಚಾರ ಮಾಧ್ಯಮದ ಜೊತೆಗೆ
ಮಾತನಾಡಿ,ಸಿದ್ದರಾಮಯ್ಯನವರನ್ನು ಅಪರಾಧಿ ಎಂದು ರಾಜ್ಯಪಾಲರು ಹೇಳಿಲ್ಲ. ನಿಮ್ಮ ಮೇಲೆ ತನಿಖೆ ಆಗಲಿ ಎಂದು ಒಪ್ಪಿಗೆ ನೀಡಿದ್ದರು
ರಾಜ್ಯಪಾಲರ ಸ್ಥಾನ ಒಂದು ಸಂವಿಧಾನದ ದತ್ತ ಪೀಠ. ಅಂತವರಿಗೆ ಪ್ರತಿಭಟನೆ ಮಾಡಿ ಚಪ್ಪಲಿ ಹಾರ ಹಾಕುವಂತಹ ಕೆಲಸಗಳನ್ನು ಮಾಡಿದ್ದರು.
ಹಳ್ಳಿ ಹಳ್ಳಿಗಳಲ್ಲೂ ಕಾಂಗ್ರೆಸ್ ಕಾರ್ಯಕರ್ತರ ಈ ರೀತಿ ಮಾಡಿದ್ದಾರೆ. ಕಾನೂನು ಸಂವಿಧಾನ ನಮಗೆ ಯಾವುದು ಅಪ್ಲೈ ಆಗುವುದಿಲ್ಲ ಎಂಬ ದೌರ್ಜನ್ಯದಿಂದ ಕಾಂಗ್ರೆಸ್ ನವರು ಮಾಡಿದ್ದಾರೆ ಎಂದರು.
ಕಾನೂನು ಸಂವಿಧಾನ ಎಲ್ಲವೂ ಬೇರೆಯವರಿಗೆ ಎಂದು ಭಾವಿಸಿದ್ದಾರೆ. ಆದರೆ ಸೋಮವಾರ ಅವರು ನಾವು ತಪ್ಪು ಮಾಡಿದ್ದೇವೆ ಎಂದು ಶರಣಾಗತಿ ಆದಂತೆ ಕಾಣುತ್ತಿದೆ. ಈ ಕೆಲಸವನ್ನ ಮೊದಲೇ ಮಾಡಬಹುದಿತ್ತಲ್ಲ.ನನ್ನ ನಲವತ್ತು ವರ್ಷದ ಸರ್ವಿಸ್ ನಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ, ಕಪ್ಪು ಚುಕ್ಕೆ ಇಲ್ಲ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ಅವರು ಯಾಕೆ ಹಿಂಗೆ ಆಗೋದ್ರು
ನಾನು ಘರ್ಜನೆ ಮಾಡಿದರೆ ನಡೆಯುತ್ತದೆ, ನಾನು ನೂರು ಸಾರಿ ಸುಳ್ಳು ಹೇಳಿದರೆ ಅದು ಸತ್ಯ ಆಗುತ್ತದೆ ಎಂಬ ಎಂಬ ಭಾವನೆ ಅವರಲ್ಲಿತ್ತು.
ಈಗ ಅವರು ಒಪ್ಪಿಕೊಂಡಿದ್ದವರದಿಂದ ಅವರ ತಪ್ಪು ಹೊರಗೆ ಬಂದಿದೆ ಹಾಗೆ ಅವರ ತಪ್ಪು ಒಪ್ಪಿಕೊಂಡಂತಾಗಿದೆ. ಅವರು ಮಾಡಿರುವ ತಪ್ಪಿಗೆ ಕನಿಷ್ಠ ಶಿಕ್ಷೆ ಎಂದರೆ ಅವರು ರಾಜೀನಾಮೆ ಕೊಡುವುದು. ಅದು ಶಿಕ್ಷೆ ಅಲ್ಲ ಒಬ್ಬ ಅಪರಾಧಿ ಆ ಸ್ಥಾನದಲ್ಲಿ ನಿಂತು ರಾಜ್ಯಭಾರ ಮಾಡಬಾರದು ಎಂಬುದು ನಮ್ಮ ಅಭಿಪ್ರಾಯ ಎಂದರು.
ಎಲೆಕ್ಷನ್ ಬಾಂಡ್ ವಿಚಾರ ಮಾತನಾಡಿ ಪಾರ್ಟಿ ಫಂಡ್ಗೆ ಹಣ ತೆಗೆದುಕೊಳ್ಳುವುದು ಎಲ್ಲಾ ಪಕ್ಷಗಳು ತೆಗೆದುಕೊಂಡಿವೆ. ಕಾಂಗ್ರೆಸ್ ಅವರು ಕೂಡ ತೆಗೆದುಕೊಂಡಿದ್ದಾರೆ. ಹಾಗಾದ್ರೆ ಎಲ್ಲರೂ ರಾಜೀನಾಮೆ ಕೊಡಬೇಕು, ರಾಹುಲ್ ಗಾಂಧಿ, ಖರ್ಗೆ ಅವರು ಎಲ್ಲರೂ ಕೊಡಬೇಕು. ಮುಡಾ ಪ್ರಕರಣವನ್ನು ಪ್ರಸ್ತಾಪ ಮಾಡಿದ್ದಕ್ಕಾಗಿ ಈ ರೀತಿ ಹುಡುಕಿ ಎಫ್ಐಆರ್ ಮಾಡಿಸುವಂತ ಕೆಲಸ ಮಾಡುತ್ತಿದ್ದಾರೆ. ಇದು ಒಂದು ದುರಂತ ಎಲ್ಲ ಜನರಿಗೂ ಈ ವಿಚಾರ ಗೊತ್ತಾಗುತ್ತಿದೆ. ಬೇರೆ ಅವರಿಗೆ ಬೆರಳು ತೋರಿಸುವ ಮುನ್ನ ನಾನೇನು ಮಾಡಿದ್ದೇನೆ ಎಂಬುದನ್ನು ಯೋಚಿಸಬೇಕು ಮೊದಲು ನೀವು ರಾಜೀನಾಮೆ ಕೊಡಿ ಎಂದು ಸಿದ್ದರಾಮಯ್ಯನವರಿಗೆ ಒತ್ತಾಯಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು