10:41 AM Thursday23 - April 2026
ಬ್ರೇಕಿಂಗ್ ನ್ಯೂಸ್
ಪ್ರಧಾನಿ ಮೋದಿಗೆ ಭಯೋತ್ಪಾದಕ ಎಂದು ನಿಂದನೆ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಚುನಾವಣಾ ಆಯೋಗ… ಚಾಮರಾಜನಗರ | ಮಲೆ ಮಹದೇಶ್ವರ ವನ್ಯಜೀವಿ ಧಾಮದ ದಟ್ಟ ಕಾಡಿನಲ್ಲಿ ಮಾನವನ ಅಸ್ಥಿಪಂಜರ… ಅಮಾನತು ಅಂತ್ಯವಲ್ಲ, ಅಬ್ದುಲ್ ಜಬ್ಬಾರ್‌ಗೆ ಇನ್ನೂ ಅವಕಾಶ ಇದೆ: ಸಚಿವ ದಿನೇಶ್ ಗುಂಡೂರಾವ್ ವರ್ಗಾವಣೆ ಆದೇಶವಿದ್ದರೂ ಪೊಲೀಸ್ ಕಮಿಷನರ್ ಕರ್ತವ್ಯದಿಂದ ಬಿಡುಗಡೆಗೊಳಿಸಿಲ್ಲ: ಮಂಗಳೂರಿನಲ್ಲಿ ಪೊಲೀಸ್ ಮಹಾ ನಿರ್ದೇಶಕ… ಕೊಡಗಿನ ಹೋಂಸ್ಟೇಯಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಮಾಲೀಕ ಸೇರಿ ಇಬ್ಬರ… ಇಡಿ ದಾಳಿಗೂ ತಂದೆ ಹ್ಯಾರಿಸ್ ಗೂ ಯಾವುದೇ ಸಂಬಂಧವಿಲ್ಲ; ನಾನೊಬ್ಬ ಒಳ್ಳೆಯ ಮಗನಾಗಲು… ಕಳಸ: ಕಾಫಿ ತೋಟದ ಕಾರ್ಮಿಕರ ಮಕ್ಕಳ ಮೇಲೆ ಸಾಕು ನಾಯಿಗಳ ದಾಳಿ; ಓರ್ವ… ಪ್ರಧಾನಿ ಮೋದಿ ಜತೆ ಗುಟ್ಟಾಗಿ ಮಾತನಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಇಡಿ ಶಾಕ್: ಶಾಸಕ ಹ್ಯಾರಿಸ್, ನಲಪಾಡ್ ನಿವಾಸ ಸೇರಿ 17… ಚಿರತೆಯಿಂದ ಅತ್ತೆಯ ಕಾಪಾಡಿದ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ: ಸಚಿವ ಲಕ್ಷ್ಮಿ…

ಇತ್ತೀಚಿನ ಸುದ್ದಿ

ಸಾಧಕನಿಗೆ ಹುಟ್ಟೂರ ಸನ್ಮಾನವೇ ಬಹುದೊಡ್ಡ ಬಹುಮಾನ: ಮಾಜಿ ಸಚಿವ ಅಭಯಚಂದ್ರ ಜೈನ್

17/11/2021, 21:38

ಕಾರ್ಕಳ(reporterkarnataka.com):
ಸಾಧಕನಿಗೆ ಹುಟ್ಟೂರ ಸನ್ಮಾನವೇ ಬಹುದೊಡ್ಡ ಉಡುಗೊರೆ. ಸಾಧಿಸುವ ಛಲವಿದ್ದರೆ ಉದ್ಯಮವನ್ನು ಹುಟ್ಟು ಹಾಕಬಹುದು. ಅದರಿಂದ ನೂರಾರು ಜನರಿಗೆ ಉದ್ಯೋಗವನ್ನು ನೀಡಬಹುದು ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.  

ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಅಜೆಕಾರಿನ ಉದ್ಯಮಿ ಶಿವರಾಂ ಶೆಟ್ಟಿ ಅವರ 75 ವರ್ಷದ ಪಂಚ ಸಪ್ತತಿ ಜನ್ಮದಿನೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಜೆಕಾರು ಪದ್ಮ ಗೋಪಾಲ್ ಟ್ರಸ್ಟ್ ಅಧ್ಯಕ್ಷ ಸುಧಾಕರ್ ಶೆಟ್ಟಿ ಮಾತನಾಡಿ, ಸಮಾಜದ ಎತ್ತರವನ್ನು ಹುಡುಕುತ್ತೆವೆ. ಆದರೂ ಅದರ ಹಿಂದಿನ ಶ್ರಮ ಅರ್ಥವಾದರೆ ಅದರ ಮೌಲ್ಯ,ಹಾಗೂ  ಕಷ್ಠವು ತಿಳಿಯುವುದು ಎಂದರು.

ಮಣಿಪಾಲ ಪ್ರಸನ್ನ ಗಣಪತಿ ದೇವಸ್ಥಾನದ ಧರ್ಮದರ್ಶಿ ಬೆಳ್ಳಿಪ್ಪಾಡಿ ಹರಿಪ್ರಸಾದ್ ರೈ  ಮಾತನಾಡಿ, ಕೋಟ್ಯಾಂತರ ರೂಪಾಯಿದ್ದರು ದೇವಸ್ಥಾನ ಕಟ್ಟಲು ಸಾದ್ಯವಿಲ್ಲ. ಅದಕ್ಕೆ ಯೋಗವಿದ್ದರೆ, ಸಾಮರ್ಥ್ಯ ವಿದ್ದರೆ ಮಾತ್ರ ದೇವಾಲಯದ  ಕಾರ್ಯ ಮಾಡಲು ಸಾಧ್ಯ , ಛಲ ,ಶ್ರದ್ಧೆ ನಮ್ಮಲಿರಬೇಕು ಎಂದು ಹೇಳಿದರು.

ಸಾರ್ವಜನಿಕ ಅಭಿನಂದನೆ ಸ್ವೀಕರಿಸಿ ಮಾತನಾಡಿದ  ಶಿವರಾಂ ಶೆಟ್ಟಿ, ತಂದೆ ತಾಯಿ ಸೇವೆ ಮೊದಲು ಮಾಡಿ ನಂತರ ದೇವರ ಸೇವೆ ,ದೇಶ ಸೇವೆ ಮಾಡಬೇಕು. ಅಮ್ಮನ ಪ್ರೀತಿ ಯೇ ದೇಶ ಪ್ರೀತಿಯನ್ನು ಬೆಳೆಸುವುದು. ದೇವರ ಭಯವಿರಲಿ ಅಗಲೆ ಭಕ್ತಿ ಹುಟ್ಟಲು ಸಾಧ್ಯ ಎಂದರು.

ಶಿವರಾಂ ಶೆಟ್ಟಿ ಹಾಗೂ ಪುಷ್ಪ ಶಿವರಾಂ ಶೆಟ್ಟಿ ಯವರನ್ನು ಅಭಿನಂದಿಸಲಾಯಿತು.

ದೇವಸ್ಥಾನದ ತಂತ್ರಿ ವಾದಿರಾಜ ತಂತ್ರಿ,ಉದ್ಯಮಿ ಸುಜಯ್ ಶೆಟ್ಟಿ , ವಿಜಯ್ ಶೆಟ್ಟಿ, ಶೋಭ ಶೆಟ್ಟಿ, ಮುಖ್ಯ ಅರ್ಚಕ ರಂಗನಾಥ ಭಟ್ ಉಪಸ್ಥಿತರಿದ್ದರು. 

ಅಶೋಕ ಶೆಟ್ಟಿ ಪ್ರಾರ್ಥಿಸಿದರು. ಹರೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.ಭಾಸ್ಕರ ಶೆಟ್ಟಿ ಕುಂಠಿನಿ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು