6:25 AM Monday10 - August 2026
ಬ್ರೇಕಿಂಗ್ ನ್ಯೂಸ್
ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:…

ಇತ್ತೀಚಿನ ಸುದ್ದಿ

ಪೊಲೀಸ್ ಗೆ ಆವಾಜ್: ಮೂಡಿಗೆರೆ ಶಾಸಕ ಕುಮಾರಸ್ವಾಮಿ ಅವರದ್ದು ಎನ್ನಲಾದ ಆಡಿಯೋ ಲೀಕ್

06/05/2022, 08:39

ಚಿಕ್ಕಮಗಳೂರು(reporterkarnataka.com) : ಮೂಡಿಗೆರೆ  ಶಾಸಕ ಎಂ. ಪಿ. ಕುಮಾರಸ್ವಾಮಿ ಅವರದ್ದು ಎನ್ನಲಾದ ಆಡಿಯೋ ಬಹಿರಂಗವಾಗಿದೆ. ಕುಮಾರಸ್ವಾಮಿ ಹಾಗೂ ಪೊಲೀಸರ ಮಧ್ಯೆ ನಡೆದ ಸಂಭಾಷಣೆಯ ವಿಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ .

ಕಾಕತಾಳೀಯ ಎನ್ನುವಂತೆ ಸಚಿವ ಸಂಪುಟ ವಿಸ್ತರಣೆಯ ಮಾತುಗಳು ಕೇಳಿಬರುತ್ತಿರುವ ಬೆನ್ನ ಹಿಂದೆ ಈ ಆಡಿಯೋ ಲೀಕ್ ಆಗಿರುವುದು ವಿಶೇಷ .

ಈ ಹಿಂದೆಯೂ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಶಾಸಕರು ಆಡಿದ ಕೆಲವು ವಿಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿತ್ತು. ಕೆಲ ವಿವಾದಗಳು ನಡೆದಿದ್ದವು .

ಆಡಿಯೋದಲ್ಲಿ ಏನಿದೆ ?

ಶಾಸಕ : ಹಲೋ ಯಾರಪ್ಪಾ ಇದು ನಂಬರು ?

ಪೋಲಿಸ್ : ನಾನು ರವೀಶ್ ಮಾತಾಡೋದು ಸಾರ್ 

ಶಾಸಕ :ಈಗ ಎಲ್ಲಿದ್ದೀಯಪ್ಪ ನೀನು 

ಪೊಲೀಸ್ :ಸ್ಟೇಷನ್ ನಲ್ಲಿ ಸಾರ್

ಶಾಸಕ :ಇಲ್ಲಿಗೆ ಬರ್ಬೇಡ ಅಂದಿದ್ನಲ್ಲ ನಾನು 

ಪೊಲೀಸ್ :  ಐಜಿ ಸಾರ್ ತಗೋ ಅಂತ ಹೇಳಿದ್ರು ಸಾರ್ 

ಶಾಸಕ : ವಾಪಸ್ ಹೊಗಲೇ.. ಮರ್ಯಾದೆಯಿಂದ ವಾಪಸ್ ಹೋಗು

ಪೊಲೀಸ್ : ನಾಳೆ ಬಂದ್ ನಿಮ್ಮನ್ನಾ  ಕಾಣ್ತೀನಿ  

 ಶಾಸಕ : ನನಗೆ ವಾಪಸ್ ಕಳಿಸುವುದು ಗೊತ್ತು ಯಾರ್ಯಾರಿಗೆ ಎಷ್ಟೆಷ್ಟು ಕೊಟ್ಟಿದ್ದೀಯಾ ಎಲ್ಲಾ ಗೊತ್ತು ,

ಪೊಲೀಸ್ : ಇಲ್ಲ ಸಾರ್ ಯಾರಿಗೂ ಏನೂ ಕೊಟ್ಟಿಲ್ಲ ಐಜಿ ಹೇಳಿದ್ರು ಅಷ್ಟೆ 

ಶಾಸಕ : ಯಾವನ್ ಐಜಿ ?  ಮೂಡಿಗೆರೆಗೆ ನಾನೇ ದೊಡ್ಡವನು .ಮರ್ಯಾದೆಯಿಂದ ವಾಪಸ್ ಹೋಗು.(ಇಲ್ಲ ಸಾರ್ ನಾಳೆ ಬಂದು ಕಾಣುತ್ತೇನೆ )ಬಂದ ದಾರಿಯಲ್ಲೇ ವಾಪಸ್ ಹೋಗು

ಇತ್ತೀಚಿನ ಸುದ್ದಿ

ಜಾಹೀರಾತು