11:01 AM Saturday2 - May 2026
ಬ್ರೇಕಿಂಗ್ ನ್ಯೂಸ್
ಕೃಷಿ ಅಧಿಕಾರಿಗಳ ದಾಳಿ: ಅಕ್ರಮ ಯೂರಿಯಾ ದಾಸ್ತಾನು ಪತ್ತೆ; 399 ಬ್ಯಾಗ್ ರಸಗೊಬ್ಬರ… ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು 1.20 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಆಭರಣ,… Mangaluru | ಪರಪ್ಪನ ಅಗ್ರಹಾರ ಜೈಲ್ ನಲ್ಲಿ ಕೈದಿಯಿಂದ ಮೊಬೈಲ್ ನಲ್ಲೇ ಪತ್ನಿಯ… ಮಗಳ ಮದುವೆ ಸಾಲ ತೀರಿಸಲು ಅಳಿಯನ ಮನೆಗೆ ಅತ್ತೆ ಕನ್ನ: 110 ಗ್ರಾಂ… ಹೇಮಾವತಿ ನಾಲೆಗೆ ಉರುಳಿ ಬಿದ್ದ ಕಾರು: ತಾಯಿ- ಮಗು ಸಾವು; ಧರ್ಮಸ್ಥಳದಿಂದ ದೇವನಹಳ್ಳಿಗೆ… ಧಾರವಾಡದಲ್ಲಿ ಟಿಬೇಟಿಯನ್ ಬಿಕ್ಕು ಹತ್ಯೆ: ಬೇರೆ ಕಡೆ ಕೊಲೆ ಮಾಡಿ ಎಸೆದಿರುವ ಶಂಕೆ ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು: ಬಿಸಿಲಿನ ತಾಪಮಾನಕ್ಕೆ… ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಯತ್ನ: ಸಂಡೂರಿನಲ್ಲಿ ಕಾರ್ಮಿಕ ಸಚಿವ… ಬಿಜೆಪಿ ಪಕ್ಷದಿಂದಲೇ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ಪ್ರಕಟಿಸಲಿ: ಸಚಿವ ಸಂತೋಷ್ ಲಾಡ್… Mangaluru | ಕುಕ್ಕರ್‌ ಬಾಂಬ್‌ ಸ್ಫೋಟದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು: ಸಂತ್ರಸ್ತ…

ಇತ್ತೀಚಿನ ಸುದ್ದಿ

ಪರಶುರಾಮ ಮೂರ್ತಿಗೆ ಅಪಚಾರ; ಶಾಸಕ ಸುನಿಲ್ ಕುಮಾರ್ ಬಿಜೆಪಿಯಿಂದ ಉಚ್ಚಾಟಿಸಿ: ಸುಭಾಸ್ ಹೆಗ್ಡೆ ಒತ್ತಾಯ

17/10/2023, 10:08

ಕಾರ್ಕಳ(reporterkarnataka.com): ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ವಿಶ್ವ ಗುರು ಆಗುತ್ತಿರುವ ಸಂದರ್ಭದಲ್ಲಿ ನಕಲಿ ಪರಶುರಾಮರ ಮೂರ್ತಿ ನಿರ್ಮಾಣ ಹಿಂದುತ್ವಕ್ಕೆ ಅಪಚಾರ ಮಾಡಿರುವುದು ಭಯೋತ್ಪಾದನೆಗೆ ಸಮಾನ.
ಹಿಂದುತ್ವಕ್ಕೆ ಅಪಚಾರ ಮಾಡಿದ ಸುನಿಲ್ ಕುಮಾರ್ ಬಿಜೆಪಿಯಿಂದ ಉಚ್ಚಾಟನೆ ಮಾಡಿ ಹಿಂದುತ್ವ ಉಳಿಸಿ ಎಂದು ಉಚ್ಚಾಟಿತ ಬಿಜೆಪಿ ಮುಖಂಡ ಸುಭಾಸ್ ಹೆಗ್ಡೆ ಒತ್ತಾಯಿಸಿದ್ದಾರೆ.
ಕಾರ್ಕಳ ಬೈಲೂರುನಲ್ಲಿ ನಿರ್ಮಾಣಗೊಂಡು ಶಾಸಕ ಸುನಿಲ್ ಕುಮಾರ್ ಅವರಿಂದ ಅಪಚಾರಕ್ಕೊಳಗಾದ ಕರಾವಳಿ ಸೃಷ್ಟಿಕರ್ತ ಪರಶುರಾಮರ ಹೊಸ ಮೂರ್ತಿಯನ್ನು ಸರಕಾರ ಶಾಸ್ತ್ರ ಪೂರ್ವಕವಾಗಿ ಮತ್ತೊಮ್ಮೆ ಪ್ರತಿಷ್ಠಾಪನೆ ಮಾಡಿ ಧರ್ಮ ಉಳಿಸಲಿ ಎಂದು ಹೆಗ್ಡೆ ತಿಳಿಸಿದ್ದಾರೆ.
ಪರಶು ರಾಮರು ವಿಷ್ಣುವಿನ ಅವತಾರವೆತ್ತವರು. ಕಾರ್ಕಳದಲ್ಲಿ ಅಂತಹ ಪುಣ್ಯ ಪುರುಷರ ಮೂರ್ತಿ ಕಾರ್ಕಳದಲ್ಲಿ ನಿರ್ಮಾಣ ಕಂಡಾಗ ಹಿಂದೂ ಧರ್ಮದ ಎಲ್ಲರೂ ಸಂತಸ ಪಟ್ಟಿದ್ದರು.
ಎಲ್ಲಾ ಹಿಂದೂ ಸಂಘಟನೆಗಳು ಕೂಡ ಈ ವಿಚಾರ ಬಂದಾಗ ಸಂತಸ ಪಟ್ಟಿದ್ದರು. ಹೆಮ್ಮೆ ಪಟ್ಟಿದ್ದರು. ಆದರೆ ಈ ಮೂರ್ತಿಯನ್ನು ಹಿಂದುತ್ವದ ಹೆಸರಲ್ಲಿ ರಾಜಕೀಯ ಮಾಡಿಕೊಂಡು ಬಂದವರು ನಕಲಿ ಮಾಡುತ್ತಾರೆ ಎಂದು ಕನಸಲ್ಲಿ ಕೂಡ ಎಣಿಸಿರಲಿಲ್ಲ ಎಂದು ಅವರು
ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ವಿಶ್ವ ಗುರು ಆಗುತ್ತಿದೆ. ಇಂತಹ ಸಂತಸದ ದಿನಗಳಲ್ಲಿ ಕರಾವಳಿಯ ಸೃಷ್ಟಿ ಕರ್ತನ ಮೂರ್ತಿಯನ್ನೇ ನಕಲಿ ಮಾಡಿರುವುದು ಹಿಂದುತ್ವಕ್ಕೆ ಮಾಡಿದ ದ್ರೋಹ. ಹಿಂದುತ್ವಕ್ಕೆ ಯಾರೇ ದ್ರೋಹ ಮಾಡಿದರು ಕ್ಷಮೆ ಇಲ್ಲ. ಅದು ಭಯೋತ್ಪಾದನೆಗೆ ಸಮಾನ.
ಈ ದ್ರೋಹದಲ್ಲಿ ಸುನಿಲ್ ಕುಮಾರ್ ಅವರ ನೇರ ಪಾತ್ರ ಇರುವುದರಿಂದ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡುವಂತೆ ಉಚ್ಚಾಟಿತ ಬಿಜೆಪಿ ಮುಖಂಡ ಸುಭಾಶ್ಚಂದ್ರ ಹೆಗ್ಡೆ ಅಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು