5:23 PM Thursday23 - April 2026
ಬ್ರೇಕಿಂಗ್ ನ್ಯೂಸ್
ಪಕ್ಷ ಕಟ್ಟಲು ಕಾರ್ಯಕರ್ತರು ಇದ್ದಾರೆ, ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್… ವಿದೇಶಿ ಮಹಿಳೆಯ ಅತ್ಯಾಚಾರ ದೌರ್ಜನ್ಯ ಪ್ರಕರಣ: ‘ದೇವಿ ವಿಲ್ಲಾ’ ಹೋಂಸ್ಟೇ ಪರವಾನಗಿ ರದ್ದು ಬಸವಕಲ್ಯಾಣ ಬಸವೇಶ್ವರ ರಥೋತ್ಸವದಲ್ಲಿ ಭೀಕರ ದುರಂತ: ರಥದ ಚಕ್ರಕ್ಕೆ ಸಿಲುಕಿ ಭಕ್ತನ ಎರಡು… ತಮಿಳುನಾಡಿನಲ್ಲಿ ಮತದಾನ: ಸಿಎಂ ಸ್ಟಾಲಿನ್, ಸೂಪರ್ ಸ್ಟಾರ್ ರಜನೀಕಾಂತ್, ಪ್ರಸಿದ್ಧ ನಟ ವಿಜಯ್… ಪ್ರಧಾನಿ ಮೋದಿಗೆ ಭಯೋತ್ಪಾದಕ ಎಂದು ನಿಂದನೆ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಚುನಾವಣಾ ಆಯೋಗ… ಚಾಮರಾಜನಗರ | ಮಲೆ ಮಹದೇಶ್ವರ ವನ್ಯಜೀವಿ ಧಾಮದ ದಟ್ಟ ಕಾಡಿನಲ್ಲಿ ಮಾನವನ ಅಸ್ಥಿಪಂಜರ… ಅಮಾನತು ಅಂತ್ಯವಲ್ಲ, ಅಬ್ದುಲ್ ಜಬ್ಬಾರ್‌ಗೆ ಇನ್ನೂ ಅವಕಾಶ ಇದೆ: ಸಚಿವ ದಿನೇಶ್ ಗುಂಡೂರಾವ್ ವರ್ಗಾವಣೆ ಆದೇಶವಿದ್ದರೂ ಪೊಲೀಸ್ ಕಮಿಷನರ್ ಕರ್ತವ್ಯದಿಂದ ಬಿಡುಗಡೆಗೊಳಿಸಿಲ್ಲ: ಮಂಗಳೂರಿನಲ್ಲಿ ಪೊಲೀಸ್ ಮಹಾ ನಿರ್ದೇಶಕ… ಕೊಡಗಿನ ಹೋಂಸ್ಟೇಯಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಮಾಲೀಕ ಸೇರಿ ಇಬ್ಬರ… ಇಡಿ ದಾಳಿಗೂ ತಂದೆ ಹ್ಯಾರಿಸ್ ಗೂ ಯಾವುದೇ ಸಂಬಂಧವಿಲ್ಲ; ನಾನೊಬ್ಬ ಒಳ್ಳೆಯ ಮಗನಾಗಲು…

ಇತ್ತೀಚಿನ ಸುದ್ದಿ

ನಿಡುವಾಳೆ ಗ್ರಾಪಂ ಉಪ ಚುನಾವಣೆ: ಒಂದು ಸ್ಥಾನಕ್ಕೆ ಸರ್ವಪಕ್ಷದ ಸಹಕಾರದಿಂದ ಕಮಲಮ್ಮ ಆಯ್ಕೆ

16/11/2024, 18:58

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ನಿಡುವಾಳೆ ಗ್ರಾಮ ಪಂಚಾಯಿತಿಯ ಒಂದು ಸದಸ್ಯರ ಸ್ಥಾನಕ್ಕೆ ನಡೆಯಬೇಕಾಗಿದ್ದ ಉಪಚುನಾವಣೆಗೆ ಸರ್ವ ಪಕ್ಷಗಳಾದ ಸಹಕಾರದಿಂದ ಕಮಲಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ‌.

ಬಿಜೆಪಿ,ಕಾಂಗ್ರೆಸ್, ಸಿಪಿಐ ಜೆಡಿಎಸ್ ಹಾಗೂ ನಿಡುವಾಳೆ ಗ್ರಾಮಸ್ಥರ ಸಹಕಾರದೊಂದಿಗೆ ಕಮಲಮ್ಮ ಅವರ ಅವಿರೋಧವಾಗಿ ಆಯ್ಕೆ ನಡೆದಿದೆ. ಆಡಳಿತಾವಧಿ ಕೇವಲ ಇನ್ನೂ ಒಂದು ವರ್ಷ ಮಾತ್ರ ಇರುವುದರಿಂದ ಸರ್ವ ಪಕ್ಷದವರ ಸಲಹೆ ಹಾಗೂ ಮಾರ್ಗದರ್ಶನದಂತೆ ಕಮಲಮ್ಮ
ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಬಾಳೂರು ಹೋಬಳಿ ಅಧ್ಯಕ್ಷ ಬಿ.ಬಿ. ಮಂಜುನಾಥ್, ಸಿಪಿಐ ತಾಲೂಕು ಕಾರ್ಯದರ್ಶಿ ರಮೇಶ್ ಕೆಳಗೂರು, ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಶ್ರೀನಾಥ್ , ಜೆಡಿಎಸ್ ಯುವ ಮುಖಂಡ ಅಭಯ್ ಮರ್ಕಲ್ ಹಾಗೂ ಸ್ಥಳೀಯರಾದ ಸುಧಾಕರ್ ನಿಡುವಾಳೆ , ಎಂ.ಎಲ್. ವಿಜೇಂದ್ರ ಮರ್ಕಲ್, ಬ್ಯಾಂಡ್ ರವಿ ,ಚಂದ್ರಣ್ಣ ಎಚ್.ಆರ್, ಸೀನ , ಯಶ್ವಂತ್, ದಿಲೀಪ್, ಪ್ರದೀಪ್ ಕಾವಲನ್, ಚೇತನ್ ಶರ್ಮ , ವಸಂತ ಜಂಗಲ್,
ಸಂಜಯ್, ಸಂಜೀವ ಉರ್ವಿನ್ ಖಾನ್, ದಿನೇಶ್ ಉರ್ವಿನ್ ಖಾನ್ ,ತನಿಯಪ್ಪ, ಅಶೋಕ್, ಸ್ವಾಮಿ ಮರ್ಕಲ್, ಸಾಗರ್ ಚಂದ್ರು ಆಟೋ ಕೂವೆ ,ಪ್ರಮೋದ್ ,ಮಹೇಶ್ ಬಾಳೂರು, ಲಾರೆನ್ಸ್ ಬಾಳೂರು, ಸಂದೀಪ್ ಬಾಳೂರು, ಪರೀಕ್ಷಿತ್ ಜಾವಳಿ , ಚಂದ್ರಶೇಖರ್ ನಿಡುವಾಳೆ,ಸೀನ ಶಂಕರ ಹೇಮಾವತಿ, ವಿಜಯ್ ಕಲ್ಲಕ್ಕಿ, ರಾಜಕುಮಾರ್ ಕಲ್ಲಕ್ಕಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗುಲಾಬಿ ಹಾಗೂ ನವೀನ್ ಹಾವಳಿ, ಸಚಿನ್ ಮರ್ಕಲ್, ಕಮಲಮ್ಮ ಅವರ ಮಕ್ಕಳಾದ ಆನಂದ, ಉಮೇಶ್, ಅವರ ಮನೆಯವರಾದ ನಾರಾಯಣ ಅವರು ಸಹ ಜೊತೆಯಲ್ಲಿ ಇದ್ದರು. ಚುನಾವಣೆ ಅಧಿಕಾರಿಗಳಾದ ಶಿವರಾಂ, ಗ್ರಾಮ ಪಂಚಾಯತಿ ಪಿಡಿಒ ಮಹೇಶ್, ಬಾಳೂರು ಆರಕ್ಷಕ ಠಾಣ ಸಿಬ್ಬಂದಿಗಳಾದ ನಂದೀಶ್ ಹಾಗೂ ರಾಘವೇಂದ್ರ ಜನ್ನಾಪುರ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು