8:43 PM Saturday25 - April 2026
ಬ್ರೇಕಿಂಗ್ ನ್ಯೂಸ್
ಕಾಂತಾರ ದೈವ ಪಾತ್ರದ ಅನುಕರಣೆ ವಿವಾದ: ಬಾಲಿವುಡ್ ನಟ ರಣವೀರ್ ಚಾಮುಂಡೇಶ್ವರಿಯಲ್ಲಿ ಕ್ಷಮೆ… ಚಿಕ್ಕಮಗಳೂರು: ಸೊಪ್ಪು ತರಲು ಹೋದ ವೃದ್ಧೆ ಹೇಮಾವತಿ ನದಿಯಲ್ಲಿ ನೀರುಪಾಲು ಮೇಕೆದಾಟು ಕಾವೇರಿ ಸಂಗಮದಲ್ಲಿ ಆಟವಾಡುತ್ತಿದ್ದವರ ಮೇಲೆ ನುಗ್ಗಿಬಂದ ಕಾಡಾನೆ: ಎದ್ದು ಬಿದ್ದೋಡಿದ ಪ್ರವಾಸಿಗರು Kodagu | ವಿರಾಜಪೇಟೆ: 9 ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿದ ಅರಣ್ಯ ಇಲಾಖೆ ಬೆಂಗಳೂರಿನಲ್ಲಿ ಭೀಕರ ಅಗ್ನಿ ದುರಂತ: 10 ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ ತುಮಕೂರು: ಒಂದು ವಾರದ ಅಂತರದಲ್ಲಿ 32 ನವಿಲುಗಳು ಸಾವು; ತಾಪಮಾನ ಕಾರಣ? ಬಳ್ಳಾರಿ ಜಿಲ್ಲಾಡಳಿತದಿಂದ ಸರಕಾರಿ ಜಮೀನು ಒತ್ತುವರಿ ವಿರುದ್ಧ 3ನೇ ಹಂತದ ಕಾರ್ಯಾಚರಣೆ Chikkamagaluru | ಸಿಇಟಿ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಶಾಕ್: ಮೂಗುತಿಗೆ ಬಿತ್ತು ಗಮ್… ತಮಿಳುನಾಡಿನಲ್ಲಿ 84% ದಾಟಿದ ಮತದಾನ: ಬಂಗಾಳದಲ್ಲಿ 91% ದಾಖಲೆ ಪ್ರಮಾಣದ ವೋಟಿಂಗ್ ತೀರ್ಥಹಳ್ಳಿ | ಆಗುಂಬೆಯ ಲಕ್ಕುಂದದಲ್ಲಿ ವೃದ್ದೆಯ ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ…

ಇತ್ತೀಚಿನ ಸುದ್ದಿ

Mangaluru | ಐಡಿಎಸ್ ಕಾಲೇಜಿನಲ್ಲಿ ಡಿಸೈನ್ ಸೆಲೆಬ್ರೇಷನ್ ವರ್ಕ್‌ಶಾಪ್

02/09/2025, 21:10

ಮಂಗಳೂರು(reporterkarnataka.com): ಐ. ಡಿ. ಎಸ್. ಕಾಲೇಜಿನಲ್ಲಿ ಡಿಸೈನ್ ಸೆಲೆಬ್ರೇಷನ್ ವರ್ಕ್‌ಶಾಪ್ – “ಡೀಪ್ ಡೈವ್ ಇನ್‌ಟು ಡಿಸೈನ್ ಅಂಡ್ AI” ಸೃಜನಶೀಲತೆ, ಡಿಸೈನ್ ಥಿಂಕಿಂಗ್ ಮತ್ತು ಡಿಸೈನ್ ಕ್ಷೇತ್ರದಲ್ಲಿ AIಯ ಅಭಿವೃದ್ಧಿಶೀಲ ಪಾತ್ರವನ್ನು ಅನ್ವೇಷಿಸುವ ಉದ್ದೇಶದಿಂದ ಇತ್ತೀಚೆಗೆ ಆಯೋಜಿಸಲಾಯಿತು.
ಕಾರ್ಯಕ್ರಮವು ಅಂತಿಮ ವರ್ಷದ ಬಿ. ಎಸ್. ಸಿ. ಫ್ಯಾಷನ್ ಡಿಸೈನ್ ವಿದ್ಯಾರ್ಥಿನಿ ಕು. ಫಾತಿಮಾ ನಸುಹಾ ಅವರ ಆತ್ಮೀಯ ಸ್ವಾಗತ ಭಾಷಣದಿಂದ ಆರಂಭವಾಗಿ, ಅತಿಥಿ ವಕ್ತಾರರಾದ ಆರ್ಕಿಟೆಕ್ಟ್ ನಿಶಿತ್ ಉರ್ವಲ್ ಅವರನ್ನು ಅಂತಿಮ ವರ್ಷದ ವಿದ್ಯಾರ್ಥಿನಿ ಕು. ಅಲಿಷಾ ಆಯಿಷಾ ಪರಿಚಯಿಸಿದರು.


ತಮ್ಮ ಅಧಿವೇಶನದಲ್ಲಿ ನಿಶಿತ್ ಉರ್ವಲ್ ಅವರು ವಾಸ್ತುಶಿಲ್ಪ ಮತ್ತು ಡಿಸೈನ್ ಕ್ಷೇತ್ರದಲ್ಲಿನ ತಮ್ಮ ಪ್ರಯಾಣವನ್ನು ಹಂಚಿಕೊಂಡು, ಸೃಜನಶೀಲತೆ ಒಂದು ದೃಷ್ಟಿಕೋನದಿಂದ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು. ಸರಳ ಪೆನ್ಸಿಲ್ ಚಿತ್ರವೂ ಒಬ್ಬರ ಕಲ್ಪನೆಗೆ ಅನುಗುಣವಾಗಿ ಅರ್ಥಪೂರ್ಣ ಕಲೆಯಾಗಬಹುದು ಎಂದು ವಿವರಿಸಿದರು. ಡಿಸೈನ್ ವೈಯಕ್ತಿಕ ಮತ್ತು ವಿಶಿಷ್ಟವಾಗಿರುತ್ತದೆ, ಏಕೆಂದರೆ ಪ್ರತಿಯೊಬ್ಬರೂ ಆಲೋಚನೆಗಳನ್ನು ವಿಭಿನ್ನವಾಗಿ ಅರ್ಥೈಸುತ್ತಾರೆ ಎಂದು ಒತ್ತಿಹೇಳಿದರು.
ಇದನ್ನು ಸಾಬೀತುಪಡಿಸಲು, ಅವರು ಅನೇಕ ಮುಖಗಳನ್ನು ಒಳಗೊಂಡ ಒಂದು ಚಿತ್ರವನ್ನು ಬರೆದರು. ಪ್ರತಿ ವ್ಯಕ್ತಿಯೂ ಅದನ್ನು ವಿಭಿನ್ನವಾಗಿ ನೋಡುತ್ತಾರೆ ಎಂಬುದನ್ನು ವಿವರಿಸಿದರು. ಈ ಚಟುವಟಿಕೆ ಡಿಸೈನ್ ದೃಷ್ಟಿಕೋನ ಮತ್ತು ಸೃಜನಶೀಲತೆಯಲ್ಲಿ ನೆಲೆಸಿದೆ ಎಂಬ ಬಲವಾದ ಸಂದೇಶವನ್ನು ನೀಡಿತು.
ಇದಾದ ಬಳಿಕ, ವಿದ್ಯಾರ್ಥಿಗಳಿಗೆ ತಮ್ಮದೇ ಕಲ್ಪನೆಗಳನ್ನು ಬಳಸಿಕೊಂಡು ಚಿತ್ರ ಬಿಡಿಸಲು ಅವಕಾಶ ನೀಡಲಾಯಿತು.

ದ್ವಿತೀಯ ಅಧಿವೇಶನವನ್ನು ಶ್ರೀ ಮೊಹಮ್ಮದ್ ಇಕ್ಬಾಲ್ ಅವರು ನಡೆಸಿ, “ಕೃತಕ ಬುದ್ಧಿಮತ್ತೆ (AI) ಮತ್ತು ಅದರ ಪಾತ್ರ ವಿನ್ಯಾಸದಲ್ಲಿ” ಎಂಬ ವಿಷಯದ ಕುರಿತು ಆಳವಾದ ಉಪನ್ಯಾಸ ನೀಡಿದರು. ಅವರು ಕೃತಕ ಬುದ್ಧಿಮತ್ತೆಯ ಮೂಲಭೂತ ಅರ್ಥವನ್ನು ವಿವರಿಸಿ, ಅದು ಡಿಸೈನ್ ಕ್ಷೇತ್ರದಲ್ಲಿ ಹೇಗೆ ವ್ಯಾಪಕವಾಗಿ ಬಳಕೆಯಾಗುತ್ತಿದೆ ಎಂಬುದನ್ನು ಉದಾಹರಣೆಗಳೊಂದಿಗೆ ತಿಳಿಸಿದರು. ChatGPT ಮುಂತಾದ ಸಾಧನಗಳು ಕಲ್ಪನೆಗಳ ರೂಪಿಸುವುದು, ವಿಷಯ ಸೃಷ್ಟಿ ಮತ್ತು ಡಿಸೈನ್ ಪ್ರಕ್ರಿಯೆಯನ್ನು ಸುಲಭಗೊಳಿಸುವಲ್ಲಿ ಹೇಗೆ ನೆರವಾಗುತ್ತವೆ ಎಂಬುದನ್ನು ಅವರು ಪ್ರಾತ್ಯಕ್ಷಿಕೆಗೊಳಿಸಿದರು. ಜೊತೆಗೆ, AI ಉಪಕರಣಗಳನ್ನು ಸಮರ್ಥವಾಗಿ ಬಳಸಲು ಸಂಪ್ರದಾಯಬದ್ಧ ವಿನ್ಯಾಸ ವಿಧಾನಗಳ ಮೂಲಭೂತ ಜ್ಞಾನ ಅತ್ಯಗತ್ಯವೆಂದು ಒತ್ತಿ ಹೇಳಿದರು.
ಈ ಕಾಯ೯ಕ್ರಮದಲ್ಲಿ ಕಾಲೇಜಿನ ಚೆೇಮ೯ನ್ ಆಕಿ೯ಟೆಕ್ಟ್ ಮೊಹಮ್ಮದ್ ನಿಸ್ಸಾರ್, ಪ್ರಾಂಶುಪಾಲರಾದ ಶ್ರೀಮತಿ ತಾರಾ ಎಸ್. ಶೆಟ್ಟಿ, ಮುಖ್ಯ ಶೈಕ್ಷಣಿಕ ಅಧಿಕಾರಿ (CAO) ಶ್ರೀ ಮೊಹಮ್ಮದ್ ಸಮೀರ್ ದೀನ್, ಅಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿಗಳು, ಉಪಸ್ಥಿತರಿದ್ದರು.
B.Sc. Fashion Designing, B.Sc. Interior Design and Decoration ಮತ್ತು BCA ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು, ಈ ಕಾರ್ಯಕ್ರಮವನ್ನು ಅತ್ಯಂತ ಸಕ್ರಿಯ ಮತ್ತು ಸಂವಾದಾತ್ಮಕ ಕಲಿಕೆಯ ಅನುಭವವನ್ನು ಪಡೆದರು.
IDS ಕಾಲೇಜಿನ ಚೇರ್ಮನ್ ಆರ್ಕಿಟೆಕ್ಟ್ ಮೊಹಮ್ಮದ್ ನಿಸ್ಸಾರ್, ಪ್ರಾಂಶುಪಾಲರಾದ ಶ್ರೀಮತಿ ತಾರಾ ಎಸ್. ಶೆಟ್ಟಿ ಮತ್ತು CAO ಶ್ರೀ ಮೊಹಮ್ಮದ್ ಸಮೀರ್ ದಿನ್ ಅವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಪ್ರಥಮ ವರ್ಷದ ಬಿ. ಸಿ. ಎ. ವಿದ್ಯಾರ್ಥಿ ಶ್ರೀ ಮೊಹಮ್ಮದ್ ಮಂಸೂರ್ ವಂದನಾರ್ಪಣೆ ಸಲ್ಲಿಸಿದರು.
ಸಮಗ್ರ ಕಾರ್ಯಕ್ರಮವನ್ನು ಬಿ. ಎಸ್ಸಿ. ಫ್ಯಾಷನ್ ಡಿಸೈನಿಂಗ್ ಅಂತಿಮ ವರ್ಷದ ವಿದ್ಯಾರ್ಥಿನಿ ಸಹ್ದಾ ಶಾಧನ್ ನಿರೂಪಿಸಿದರು.
ಕೊನೆಗೆ ಗುಂಪು ಛಾಯಾಚಿತ್ರದೊಂದಿಗೆ ಈ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಇತ್ತೀಚಿನ ಸುದ್ದಿ

ಜಾಹೀರಾತು