7:30 AM Friday7 - August 2026
ಬ್ರೇಕಿಂಗ್ ನ್ಯೂಸ್
ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ…

ಇತ್ತೀಚಿನ ಸುದ್ದಿ

ಕೂಡ್ಲಗಿ ಬಸ್ ನಿಲ್ದಾಣದಲ್ಲಿ 1 ವರ್ಷದಿಂದ ವಾಸವಾಗಿರುವ ಅನಾಥನ ರಕ್ಷಿಸಿದ ಪೊಲೀಸರು; ಅನಾಥಾಶ್ರಮಕ್ಕೆ ಸೇರ್ಪಡೆ

13/09/2021, 09:41

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ವರ್ಷಗಳಿಂದ ವಾಸವಿದ್ದ ತಮಿಳುನಾಡು ಮೂಲದ ಅನಾಥನನ್ನು ಕೂಡ್ಲಿಗಿ ಡಿವೈಎಸ್ಪಿ ಹರೀಶ್ ನಿರ್ದೇಶನದ ಮೇರೆಗೆ  ಸಿಪಿಐ ವಸಂತ ಅಸೋದೆ ಹಾಗೂ ಪಿಎಸ್ಐ ಶರತ್ ನೇತೃತ್ವದಲ್ಲಿ ಪೊಲೀಸ್ ರು ಸಿಂಧನೂರಿನ ಕರಣಾ ಆಶ್ರಮಕ್ಕೆ ಸೇರಿಸಿದ್ದಾರೆ.

ಪೊಲೀಸರು ನಿಯಮಾನುಸಾರ ತಮಿಳುನಾಡು ಮೂಲದ ಸುಮಾರು 50 ವಯಸ್ಸಿನ ಅನಾಥ ವ್ಯಕ್ತಿಯನ್ನು ರಕ್ಷಿಸಿ ಆತನಿಗೆ ಹೊಸ ಉಡುಪುಗಳನ್ನು ನೀಡಿ ಸತ್ಕರಿಸಿ ಮಾನವೀಯತೆ ಮೆರೆದಿದ್ದಾರೆ.

ಅನಾಥನನ್ನು ಸಿಂಧನೂರಿನ ಕರುಣಾ ಅನಾಥಾಶ್ರಮಕ್ಕೆ ಕಳುಹಿಸಿಕೊಟ್ಟಿದ್ದಾರೆ. ಈ ಮೂಲಕ ಅನಾಥನನ್ನು ರಕ್ಷಣೆ ಮಾಡಿ ಆಶ್ರಯ ಕಲ್ಪಿಸುವಲ್ಲಿ ಕಾಳಜಿ ವಹಿಸಿ ಅನಾಥನ ಪಾಲಿಗೆ ಆಪ್ತ ರಕ್ಷಕರಾಗಿದ್ದಾರೆ ಪೊಲೀಸರು. ಇತ್ತೀಚೆಗೆ ಅನಾಮಧೇಯ ಶವ ಪತ್ತೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು,ಅನಾಥರಿಗೆ ಅನಾಥಾಶ್ರಮದಲ್ಲಿ ಆಶ್ರಯ ಕಲ್ಪಿಸುವುದರಿಂದಾಗಿ ಪ್ರಕರಣಗಳನ್ನು ತಗ್ಗಿಸಬಹುದಾಗಿದೆ. ಈ ನಿಟ್ಟಿನಲ್ಲಿ ತಾವು ಹಾಗೂ ತಮ್ಮ ಸಿಬ್ಬಂದಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದು, ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರ ತುಂಬ‍ಾ ಮುಖ್ಯವಾಗಿದೆ ಎಂದು ಸಿಪಿಐ ವಸಂತ ಅಸೋದೆ ತಿಳಿಸಿದ್ದಾರೆ. 

ನಾಗರೀಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಾಲ್ಮೀಕಿ ಮುಖಂಡ  ಹಾಗೂ ಪಪಂ ಸದಸ್ಯರಾದ ಕಾವಲ್ಲಿ ಶಿವಪ್ಪನಾಯಕ ಮಾತನಾಡಿ, ಎಲ್ಲಿಯಾದರೂ ಯಾರೇ ಅನಾಥರು ಹಾಗೂ ಬುದ್ಧಿಮಾಂಧ್ಯರು  ಕಂಡು ಬಂದಲ್ಲಿ ಅಥವಾ ಅನಾಥ ವೃದ್ಧರು ಕಂಡುಬಂದಲ್ಲಿ, ಶೀಘ್ರವಾಗಿ ಹತ್ತಿರ  ಆಶ್ರಮವನ್ನು ಸಂಪರ್ಕಿಸಬಹುದಾಗಿದೆ ಅಥವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಿದೆ. ದೂರವಾಣಿ ಮೂಲಕ ಸಂಪರ್ಕಿಸಿ ರಕ್ಷಿಸಬೇಕಿದೆ. ಈ ಮೂಲಕ ಹಿರಿಯ ನಾಗರೀಕರನ್ನ ಬುದ್ದಿಮಾಂಧ್ಯರನ್ನು ರಕ್ಷಿಸಬೇಕು ಹಾಗೂ ಅಪರಾಧ ನಿಯಂತ್ರಿಸುವಲ್ಲಿ ಪೊಲೀಸರೊಂದಿಗೆ ಎಲ್ಲರೂ ಸಹಕರಿಸಬೇಕು ಎಂದು ಅವರು ಕೋರಿದರು.

ಈ ಸಂದರ್ಭದಲ್ಲಿ ಹೊಟೇಲ್ ಮಾಲೀಕ ಬಾಲರಾಜಪ್ಪ, ಮುಖ್ಯ ಪೊಲೀಸ್ ಪೇದೆ ಸತ್ಯಪ್ಪ, ಸಿಂಧನೂರಿನ ಕರುಣಾ ಆಶ್ರಮದ ಸ್ವಯಂ ಸೇವಕ ಪಂಪಯ್ಯಸ್ವಾಮಿ ಸೇರಿದಂತೆ ಆಸ್ರಮದ ಸಿಬ್ಬಂದಿ ಹಾಗೂ ಕೂಡ್ಲಿಗಿ ಪೊಲೀಸ್ ಸಿಬ್ಬಂದಿ ಹಾಗೂ ನಾಗರೀಕರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು