8:34 PM Saturday20 - June 2026
ಬ್ರೇಕಿಂಗ್ ನ್ಯೂಸ್
Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್… ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ…

ಇತ್ತೀಚಿನ ಸುದ್ದಿ

ಕಾರ್ಕಳ ಉತ್ಸವಕ್ಕೆ ಹಣದ ಹೊಳೆ: ತುಳು ಶಿಕ್ಷಕರ ಸೇವೆಗಿಲ್ಲ ಬೆಲೆ: 2 ವರ್ಷದಿಂದ ಗೌರವ ಧನ ಕೊಡದಿದ್ದರೂ ತುಟಿ ಬಿಚ್ಚದ ಸಂಸ್ಕೃತಿ ಸಚಿವರು!!

18/03/2022, 17:06

ಮಂಗಳೂರು(reporterkarnataka.com): ನಮ್ಮ ರಾಜಕಾರಣಿಗಳಲ್ಲಿ, ಅಧಿಕಾರಸ್ಥರಲ್ಲಿ ಸೋಗಲಾಡಿತನ ಯಾವ ಮಟ್ಟದಲ್ಲಿ ಬೆಳೆದಿದೆ ಎನ್ನುವುದಕ್ಕೆ ಇದೊಂದು ತಾಜಾ ನಿದರ್ಶನ. ನಿಮಗೊತ್ತಿರುವಾಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ಅವರ ತವರು ಕ್ಷೇತ್ರದಲ್ಲಿ ಕಾರ್ಕಳ ಉತ್ಸವ ನಡೆಯುತ್ತಿದೆ. ಇದರ ಭಾಗವಾಗಿ ಕಾರ್ಕಳದ ಪೌರ ಕಾರ್ಮಿಕರಿಗೆ ಹೆಲಿಕಾಪ್ಟರ್ ನಲ್ಲಿ ತಿರುಗಾಟ ನಡೆಸಲಾಗಿದೆ. ಇನ್ನೊಂದು ಕಡೆ ನಮ್ಮ ಕರಾವಳಿಯ ಮಾತೃ ಭಾಷೆಯಾದ ತುಳು ಭಾಷೆಯನ್ನು ಕಲಿಸುವ ಬಡ ಶಿಕ್ಷಕರಿಗೆ 2 ವರ್ಷದಿಂದ ಸಂಬಳ ನೀಡದೆ ದುಡಿಸಿ ಸತಾಯಿಸಲಾಗುತ್ತಿದೆ.

ಕಾರ್ಕಳದ ಪೌರ ಕಾರ್ಮಿಕರನ್ನು ಹೆಲಿಕಾಪ್ಟರ್ ಸುತ್ತಿಸಿದ ಬಗ್ಗೆ ಯಾರು ತಕರಾರು ಎತ್ತುವುದಿಲ್ಲ. ಆದರೆ ಹೊಟ್ಟೆಗೆ ಹಿಟ್ಟಿಲ್ಲದವನ ಜುಟ್ಟಿಗೆ ಮಲ್ಲಿಗೆ ಬೇಕೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಪೌರ ಕಾರ್ಮಿಕರಿಗೆ ಸಾಕಷ್ಟು ಸೌಲಭ್ಯಗಳ ಕೊರತೆ ಕಾಡುತ್ತಿದೆ. ಅವರಿಗೆ ಶೂ ಕೊಡುವುದಿಲ್ಲ, ಕೈಗೆ ಗ್ಲೌಸ್ ಇಲ್ಲ. ಆರೋಗ್ಯ ಸಮಸ್ಯೆ ಬಂದ್ರೆ ಸರಿಯಾದ ಹೆಲ್ತ್ ಇನ್ಸೂರೆನ್ಸ್ ಇಲ್ಲ. ಈ ಎಲ್ಲ ಇಲ್ಲಗಳ ನಡುವೆ, ಒಬ್ಬರಿಗೆ ತಲಾ 2 ಸಾವಿರ ರೂ. ಖರ್ಚು ಮಾಡಿ ಹೆಲಿಕಾಪ್ಟರ್ ನಲ್ಲಿ ಸುತ್ತಾಡಿಸುವ ಅಗತ್ಯವಿತ್ತೇ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಾರೆ. ಈ ನಡುವೆ ತುಳು ಭಾಷೆ ಕಲಿಸುವ ಸುಮಾರು 43 ಮಂದಿ ಶಿಕ್ಷಕರಿಗೆ ಕಳೆದ 30 ತಿಂಗಳಿನಿಂದ ಗೌರವ ಧನ ನೀಡಿಲ್ಲ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 42 ಶಾಲೆಗಳಲ್ಲಿ ತುಳು ಭಾಷೆಯನ್ನು ತೃತೀಯ ಭಾಷೆಯಾಗಿ ಕಲಿಸಲಾಗುತ್ತಿದೆ. ಇದಕ್ಕೆ 43 ತುಳು ಶಿಕ್ಷಕರನ್ನು ನೇಮಿಸಲಾಗಿತ್ತು. ಇವರಿಗೆ ತಿಂಗಳಿಗೆ ಜುಜುಬಿ 3 ಸಾವಿರ ರೂ. ಗೌರವ ಧನ ನಿಗದಿಪಡಿಸಲಾಗಿತ್ರು. ಆದರೆ ಈ ಶಿಕ್ಷಕರಿಗೆ 30 ತಿಂಗಳಿನಿಂದ ಆ  ಗೌರವ ಧನವನ್ನು ಕೂಡ ನೀಡಿಲ್ಲ. 

ತುಳು ಶಿಕ್ಷಕರಲ್ಲಿ ಹೆಚ್ಚಿನವರು ತೀರಾ ಬಡವರು, ವಿಕಲಚೇತನರೂ ಕೂಡ ಇದ್ದಾರೆ. ಜುಜುಬಿ 3 ಸಾವಿರಕ್ಕಾಗಿ ತಮ್ಮ ಅಮೂಲ್ಯ ಸಮಯವನ್ನು ತುಳುವಿಗಾಗಿ ಮೀಸಲಿಟ್ಟಿದ್ದಾರೆ. ಆದರೆ ಸರಕಾರ ಇವರಿಗೆ ಗೌರವ ಧನ ಕೊಡುತ್ತಿಲ್ಲ. ಉಸ್ತವಾರಿ ಸಚಿವ ಸುನಿಲ್ ಕುಮಾರ್ ಅವರು ತನಗೆ ಆ ವಿಷಯವೇ ಗೊತ್ತಿಲ್ಲದಂತೆ ವರ್ತಿಸುತ್ತಾರೆ. ತುಳು ಶಿಕ್ಷಕರ ಗೌರವ ಧನದ ಜವಾಬ್ದಾರಿಯನ್ನು ತುಳು ಸಾಹಿತ್ಯ ಅಕಾಡೆಮಿಗೆ ವಹಿಸಲಾಗಿತ್ತು. ಆದರೆ ಅಕಾಡೆಮಿಗೆ ಸರಕಾರ ಅನುದಾನ ನೀಡಿದರೆ ತಾನೆ ಸಂಬಳ ನೀಡಲು ಸಾಧ್ಯ. ಅದಲ್ಲದೆ ಈ ಎಲ್ಲ ಭಾಷಾ ಅಕಾಡೆಮಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುತ್ತದೆ. ಸುನಿಲ್ ಕುಮಾರ್ ಇದರ ಸಚಿವರು.

……

ಇತ್ತೀಚಿನ ಸುದ್ದಿ

ಜಾಹೀರಾತು