5:18 AM Thursday6 - August 2026
ಬ್ರೇಕಿಂಗ್ ನ್ಯೂಸ್
ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ…

ಇತ್ತೀಚಿನ ಸುದ್ದಿ

ಕಣ್ಣಾರೆ ಕಂಡ ಪದ್ಮಶ್ರೀ: ಹತ್ತಾರು ಹಾಜಬ್ಬರು ನಮ್ಮ ನಡುವೆ ಹುಟ್ಟಿಬರಲಿ

20/11/2021, 22:46

ನವೆಂಬರ್ 14, 2021, ಮಕ್ಕಳ ದಿನಾಚರಣೆಯ ಸಂಭ್ರಮ. ಹೊರಗೆ ಜೋರಾಗಿ ಮಳೆ ಸುರಿಯುತ್ತಿತ್ತು. ನಮ್ಮ ಊರಿನ ಹೆಮ್ಮೆಯ ಪದ್ಮಶ್ರೀ ಪುರಸ್ಕೃತ ಹಾಜಬ್ಬ ರವರನ್ನು ಜೆಸಿಐ ಮಂಗಳಗಂಗೋತ್ರಿ ಘಟಕದ ವತಿಯಿಂದ ಭೇಟಿ ಮಾಡುವುದೆಂದು ಮೊದಲೇ ನಿರ್ಧರಿಸಲಾಗಿತ್ತು.

ಮಳೆಯ ಆರ್ಭಟ ನೋಡುವಾಗ ಕತ್ತಲಿನಲ್ಲಿ ಹೋಗುವುದೋ ಬೇಡವೋ ಎಂಬ ದ್ವಂದ್ವದಲ್ಲಿ ನಾನು  ಮುಳುಗಿದೆ. ಏನೇ ಆಗಲಿ ಅವರನ್ನು ಭೇಟಿ ಮಾಡುವುದಾಗಿ ದೃಢ ನಿಶ್ಚಯ ಮಾಡಿ ಅವರ ಮನೆಯಾದ ನ್ಯೂಪಡ್ಪು ಕಡೆಗೆ ನಮ್ಮ ಪ್ರಯಾಣ ಸಾಗಿತ್ತು.

ಅಂದಾಜು 06:45ಕ್ಜೆ ಅವರ ಮನೆಯ ದಾರಿ ತಲುಪಿದೆವು. ವರುಣರಾಯನ ಆರ್ಭಟ ಇನ್ನೂ ಜೋರಾಗಿತ್ತು. ಅದಾಗಲೇ ಕಟೀಲಿನಲ್ಲಿ ಸನ್ಮಾನ ಸಮಾರಂಭ ಮುಗಿಸಿ ಮನೆಗೆ ಬಂದಿದ್ದ ಹಾಜಬ್ಬರು. ಆ ಸುರಿಯುತ್ತಿರುವ ಮಳೆಯಲ್ಲಿ ಮನೆಯ ಜಗಲಿಯಲ್ಲಿ ನಮ್ಮನ್ನು ಎದುರುಗೊಂಡರು.

ಅವರ ಮನೆಯ ಅಂಗಳಕ್ಕೆ ಇಳಿದಾಗ ನಮಗೆ ಅದೇನೋ ಪುನೀತ ಭಾವ.ನಮ್ಮನ್ನು ನೋಡಿದ ತಕ್ಷಣ ಅದೇನು ಆದರಾತಿಥ್ಯ…..

ಅದೇ ಸರಳತೆ, ಅದೇ ನಿರ್ಲಿಪ್ತ ಭಾವ, ಅಹಂಕಾರ ಆಡಂಬರದ ಲವಲೇಶವೂ ಸುಳಿವಿಲ್ಲ..ಅದೇ ಪೂರ್ತಿ ಗುಂಡಿ ಹಾಕದ ಶರ್ಟು…

ಮನೆಯೊಳಗೆ ಬಂದ ತಕ್ಷಣ ಹಲವಾರು ಪ್ರಶಸ್ತಿಗಳು ನಮ್ಮ ಕಣ್ಣನ್ನು ಸೆಳೆದವು.

ನನ್ನ ಮನದಲ್ಲಿದ್ದ ಕುತೂಹಲ, ಆಸೆ ಎಂದರೆ ರಾಷ್ಟ್ರಪತಿಯವರು ಕೊಟ್ಟ ಪದ್ಮಶ್ರೀ ಪುರಸ್ಕಾರವನ್ನು ಕಣ್ಣಾರೆ ನೋಡಿ ಮುಟ್ಟಿ ನಮಸ್ಕರಿಸಬೇಕು ಎಂಬುದಾಗಿತ್ತು.

ಕೇವಲ ಟಿವಿಯಲ್ಲಿ ಮಾತ್ರ ಪದ್ಮಶ್ರೀ ಪುರಸ್ಕಾರದ ದೃಶ್ಯಾವಳಿ ನೋಡುತ್ತಿದ್ದ ನನಗೆ ಪದ್ಮಶ್ರೀಯನ್ನು ನೋಡಿದಾಗ ಆದ ಆನಂದ ಹೇಳತೀರದು.

ಹಾಜಬ್ಬರ ಪದ್ಮಶ್ರೀ ಪುರಸ್ಕಾರದ ಹಿಂದಿರುವ ಸಾಧನೆ ಮತ್ತು ಹಳ್ಳಿಯಿಂದ ದಿಲ್ಲಿಯವರೆಗೆ ಆದಂತಹ ಅನುಭವ ಕೇಳಿದಾಗ ರೋಮಾಂಚನವಾಯಿತು.

ಪ್ರಶಸ್ತಿಯ ಬಗ್ಗೆ ಎಂದಿಗೂ ಕನಸು ಕಾಣದೆ ತನ್ನ ಮಹದಾಸೆಯನ್ನು ಈಡೇರಿಸಲು ಪಣತೊಟ್ಟ ಸಾಮಾನ್ಯ ವ್ಯಕ್ತಿಗೆ ಇಂತಹ ಪುರಸ್ಕಾರ ಬಂದಾಗ ಅದರ ಮೌಲ್ಯ ಹೆಚ್ಚಾಗುತ್ತದೆ. ಪ್ರಶಸ್ತಿಗೆ ಹಣ ಶ್ರೀಮಂತಿಕೆ ಮುಖ್ಯವಲ್ಲ ಸಾಧಿಸಲೇಬೇಕೆಂಬ ಛಲ ಒಂದಿದ್ದರೆ ಸಾಕು ಎಂಬುದಕ್ಕೆ ಹಾಜಬ್ಬರೇ ಸಾಕ್ಷಿ.


ಹಾಜಬ್ಬರ ನಿರ್ಮಲ ಮನಸ್ಸು ಸರಳತೆ ಸಹೃದಯತೆ ಮುಗ್ಧತೆ ಸಾಧಿಸುವ ಛಲ ಅಭಿಮಾನಕ್ಕೆ ಶರಣು ಶರಣು. ಇಂತಹ ಹತ್ತಾರು ಹಾಜಬ್ಬರು ನಮ್ಮ ಭಾರತ ಮಾತೆಯ ಒಡಲಿನಲ್ಲಿ ಹುಟ್ಟಿಬರಲಿ ಎಂಬುದೇ ನಮ್ಮೆಲ್ಲರ ಆಶಯ.

ಇವರ ಜೊತೆ ಮಾತನಾಡುವಾಗ ನನಗೆ ಅನಿಸಿದ್ದು ಇಷ್ಟೇ ಇವರಿಂದ ಇನ್ನೂ ನಾನು ಎಷ್ಟೊಂದು ಕಲಿಯಬೇಕಿದೆ.

ಇತ್ತೀಚಿನ ಸುದ್ದಿ

ಜಾಹೀರಾತು