10:14 PM Wednesday17 - June 2026
ಬ್ರೇಕಿಂಗ್ ನ್ಯೂಸ್
ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ

ಇತ್ತೀಚಿನ ಸುದ್ದಿ

ಕಲಬುರ್ಗಿ: ವಕ್ಫ್ ಬೋರ್ಡ್ ಸದಸ್ಯರಾಗಿ ಆಯ್ಕೆಯಾದ ಹಫೀಜ್ ಮುಹಮ್ಮದ್ ಅಲಿ ಅಲ್ ಹುಸೇನಿಗೆ ಅದ್ಧೂರಿ ಸ್ವಾಗತ

25/11/2024, 19:09

ಶಿವು ರಾಠೋಡ್ ಹುಣಸಗಿ ಕಲಬುರ್ಗಿ

info.reporterkarnataka@gmail.com

ವಕ್ಫ್ ಬೋರ್ಡ್ ಸದಸ್ಯರಾಗಿ ನೂತನವಾಗಿ ಆಯ್ಕೆಯದ ಕೆಬಿಎನ್ ದರ್ಗಾದ ಸಜ್ಜಾದೆ ನಶೀನ ಹಫೀಜ ಸಯ್ಯದ ಮುಹಮ್ಮದ್ ಅಲಿ ಅಲ್ ಹುಸ್ಸೇನಿ ಅವರನ್ನು ಕಲಬುರ್ಗಿಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ನಗರದ ಹುಮ್ನಾಬಾದ್ ರಿಂಗ್ ರೋಡ್ ನಲ್ಲಿ ಹೂವುಗಳಿಂದ ತುಂಬಿದ ಜೇಸಿಬಿಗಳಿಂದ ಅಲಿ ಹುಸೇನಿರಿಗೆ ಪುಷ್ಪಾರ್ಪಣೆ ನಡೆಯಿತು. ಅಲ್ಲದೇ 600 ಕೆಜಿ ಹಾಗೂ 50 ಮೀಟರ ಉದ್ದದ ಮಾಲಾರ್ಪಣೆಗೆ ನೆರೆದ ಸಮೂಹ ಸಾಕ್ಷಿಯಾಯಿತು.
ಹೂ ಮಳೆಯ ನಂತರ ಕಪನೂರ ಏರಿಯಾದ ಬಾಬಾಸಾಹೇಬ ಅಂಬೇಡ್ಕರ ಮೂರ್ತಿಗೆ ಅಲಿ ಅಲ ಹುಸ್ಸೇನಿ ಮಾಲಾರ್ಪಣೆ ಮಾಡಿದರು.

ಪುಂಜಾ ಗ್ರೂಪ್ ಆಫ್ ಇಂಡಸ್ಟ್ರಿ (ಕರಿಗಾರ ಕುಟುಂಬ),ದರ್ಗಾ ಹಜರತ್ ಬೈ ಬಿ ಕುಂಜಾ ಮಸಾಬಿ ದರ್ಗಾ, ಅಯಾಜ್ ಖಾನ್, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ನಯೀಮ್ ಖಾನ ಸೇರಿದಂತೆ ಅನೇಕ ಜನ ಅವರಿಗೆ ರೋಡ ಶೋ ರ್ಯಾಲಿಯಲ್ಲಿಯೇ ಸನ್ಮಾನ ಮಾಡಿ ಅಭಿನಂದಿಸಿದರು. ರೋಡ ಶೋ ಉದ್ದಕ್ಕೂ “ಅಲಿ ಹಮಾರಿ ಜಾನ್ ಹೈ, ಗುಲ್ಬರ್ಗಾ ಕಿ ಶಾನ ಹೈ ” ಎಂಬ ಜೈಕಾರ ಕೇಳಿ ಬಂತು.
ಹಫೀಜ ಮುಹಮ್ಮದ ಅಲಿ ಅಲ್ ಹುಸ್ಸೇನಿ ಇವರು ಜನರನ್ನು ಉದ್ದೇಶಿಸಿ ಮಾತನಾಡಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ಸಹಸ್ರಾರು ಜನರು ಪಾಲ್ಗೊಂಡಿದ್ದ ಈ ರ್ಯಾಲಿ ಕಮಲಾಪುರದಿಂದ ಪ್ರಾರಂಭವಾಗಿ ಕಪ್ನೂರ್,ಹುಮನಾಬಾದ್ ಸರ್ಕಲ್, ನಾಗೇಶ್ವರ ಶಾಲೆ, ಮುಸ್ಲಿಂ ಚೌಕ್, ಮಕ್ಬಾರಾ ಮಸೀದಿ, ಜಲಾಲವಾಡಿ, ಕೆಬಿಎನ್ ದರ್ಗಾ. ದರ್ಗಾ ತಲುಪಿದ ನಂತರ ಖಾಜಾ ಬಂದಾನವಾಜರ ಆಶೀರ್ವಾದ ಪಡೆದ ಅಲಿ ಅಲ್ ಹುಸ್ಸೇನಿ ದೇವಡಿ ತೆರಳಿದರು. ದೇವಡಿಯಲ್ಲಿ ಭಕ್ತರು ಅನುಯಾಯಿಗಳು ಸನ್ಮಾನ ಮಾಡಿದರು. ಶಾಂತಿಯುತವಾಗಿ ನಡೆದ ರ್ಯಾಲಿಯಲ್ಲಿ ಪೊಲೀಸ್
ಬಿಗಿ ಬಂದೋಬಸ್ತ್ ಮಾಡಲಾಗಿತು.

ಇತ್ತೀಚಿನ ಸುದ್ದಿ

ಜಾಹೀರಾತು