12:43 AM Sunday9 - August 2026
ಬ್ರೇಕಿಂಗ್ ನ್ಯೂಸ್
ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:…

ಇತ್ತೀಚಿನ ಸುದ್ದಿ

ಜೆಪ್ಪು ಮಾರ್ಕೆಟ್ -ಬೋಳಾರ ಮಾರಿಗುಡಿ ರಸ್ತೆಯಲ್ಲೇ ವಾಹನಗಳ ಪಾರ್ಕಿಂಗ್: ಪಾದಚಾರಿಗಳ ಗೋಳು ಕೇಳುವವರಿಲ್ಲ: ಸ್ಥಳೀಯ ಕಾರ್ಪೋರೇಟರ್ ಏನು ಮಾಡುತ್ತಿದ್ದಾರೆ?

20/04/2024, 15:58

ಮಂಗಳೂರು(reporterkarnataka.com): ನಗರದ ಯಾವುದೇ ಮೂಲೆಗೆ ಹೋಗಿ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸುವುದು ಸಾಮಾನ್ಯವಾಗಿ ಹೋಗಿದೆ. ಯಾರಿಗೆ ಏನೇ ತೊಂದರೆಯಾಗಲಿ, ತನ್ನ ವಾಹನ ಪಾರ್ಕಿಂಗ್ ಆದ್ರೆ ಸಾಕು ಎನ್ನುವ ಮನಸ್ಥಿತಿಯೇ ಇದಕ್ಕೆ ಕಾರಣ. ಇಂತಹ ಸಮಸ್ಯೆ ಜೆಪ್ಪು ಮಾರ್ಕೆಟ್- ಬೋಳಾರ ಮಾರಿಗುಡಿ ರಸ್ತೆಯಲ್ಲೂ ಜೀವಂತವಾಗಿದೆ.
ಜೆಪ್ಪು ಮಾರ್ಕೆಟ್ ನಿಂದ ಇತಿಹಾಸ ಪ್ರಸಿದ್ಧ ಬೋಳಾರ ಮಾರಿಗುಡಿ ದೇವಸ್ಥಾನದ ರಥ ಬೀದಿ ರಸ್ತೆ ವರೆಗೆ ವಾಹನಗಳನ್ನು ರಸ್ತೆಯಲ್ಲಿ ಮತ್ತು ಪಾದಚಾರಿಗಳು ನಡೆದಾಡುವ ಜಾಗದಲ್ಲಿ ಪಾರ್ಕಿಂಗ್ ಮಾಡುವುದು ಮಾಮೂಲಿಯಾಗಿದೆ. ಇದರಿಂದ ಪಾದಚಾರಿಗಳು
ಸಂಕಷ್ಟ ಎದುರಿಸುವಂತಾಗಿದೆ.
ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಮಂಗಳಾದೇವಿ ಮತ್ತು ಶ್ರೀ ಕ್ಷೇತ್ರ ಬೋಳಾರ ಮಾರಿಗುಡಿ ತೆರಳುವ ಬಸ್ಸುಗಳು ಸಂಚರಿಸುವ ಈ ರಸ್ತೆಯು ಜನನಿಬಿಡ ಪ್ರದೇಶವಾಗಿದೆ. ಎಳೆಯ ಮಕ್ಕಳು, ವಯೋ ವೃದ್ಧರು ಈ ಭಾಗದಲ್ಲಿ ತೆರಳುವುದು ಕಷ್ಟಕರವಾಗಿದೆ. ಘನ ವಾಹನಗಳು ಸಂಚರಿಸುವಾಗ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವ ದ್ವಿಚಕ್ರ ವಾಹನಗಳಿಂದ ಪಾದಚಾರಿಗಳಿಗೆ ನಡೆದಾಡಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಜೆಪ್ಪು ಮಾರ್ಕೆಟ್,ಮಹಾಲಸಾ ಕಂಪ್ಯೂಟರ್ ಕೇಂದ್ರ, ಪ್ರಧಾನ ಮಂತ್ರಿ ಜನೌಷಧಿ,ಬ್ಯಾಂಕುಗಳಿಗೆ ನಿತ್ಯ ದೈನಂದಿನ ತಮ್ಮ ವ್ಯವಹಾರಗಳಿಗೆ ತೆರಳುವವರಿಗೆ ಈ ಭಾಗದಲ್ಲಿ ನಡೆದಾಡುವುದು ದುಸ್ತರ ಎನಿಸಿದೆ.
ಆಯಾಯ ಕಟ್ಟಡಗಳಲ್ಲಿ ಪಾರ್ಕಿಂಗ್ ಮಾಡದೇ ಜನರು ನಡೆದಾಡುವ ಜಾಗದಲ್ಲಿ ಮತ್ತು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವವರಿಗೆ ಸಂಬಂಧ ಪಟ್ಟವರು ದಂಡ ವಿಧಿಸುವ ಅಗತ್ಯತೆ ಇದೆ. ಪ್ರಮುಖವಾಗಿ ಈ ಪ್ರದೇಶದ ಸ್ಥಳೀಯ ಜನಪ್ರತಿನಿಧಿಗಳು ಪಾದಚಾರಿಗಳಿಗೆ ನಡೆದಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಿ ಪಾದಚಾರಿಗಳಿಗೆ ಪ್ರಾಣಕ್ಕೆ ಸಂಕಷ್ಟ ಎದುರಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು