1:50 PM Friday7 - August 2026
ಬ್ರೇಕಿಂಗ್ ನ್ಯೂಸ್
ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ…

ಇತ್ತೀಚಿನ ಸುದ್ದಿ

ಇಂಧನ ಇಲಾಖೆಯಲ್ಲಿ ವಿದ್ಯುತ್ ಚಾಲಿತ ವಾಹನ ಬಳಕೆಗೆ ಚಿಂತನೆ: PIAGGIO ಸಂಸ್ಥೆಯ ವಿದ್ಯುತ್ ಚಾಲಿತ‌ ತ್ರಿಚಕ್ರ ವಾಹನ‌ ಶೋ ರೂಂ ಉದ್ಘಾಟಿಸಿ ಸಚಿವ ಸುನಿಲ್ 

16/10/2021, 18:43

ಮಂಗಳೂರು(reporterkarnataka.com): ರಾಜ್ಯ ಸರಕಾರದ ಇಂಧನ ಇಲಾಖೆಯಲ್ಲಿ ಬಳಕೆ ಮಾಡುತ್ತಿರುವ ಸರ್ಕಾರಿ ವಾಹನಗಳು‌ ವಿದ್ಯುತ್ ಚಾಲಿತ ವಾಹನಗಳಾಗಬೇಕು‌ ಎನ್ನುವ ಚಿಂತನೆಯಿದೆ ಎಂದು ಇಂಧನ ಸಚಿವ ವಿ‌. ಸುನಿಲ್‌ ಕುಮಾರ್ ಹೇಳಿದರು.

ಅವರು ಶನಿವಾರ ನಗರದ ಪಂಪ್ ವೆಲ್ ಬಳಿ ನೂತನ PIAGGIO ಸಂಸ್ಥೆಯ ವಿದ್ಯುತ್ ಚಾಲಿತ‌ ತ್ರಿಚಕ್ರ ವಾಹನ‌ ಶೋ ರೂಂ ಉದ್ಘಾಟಿಸಿ ಮಾತನಾಡಿದರು.

ಇಂದು‌ ದೇಶಾದ್ಯಂತ ವಿದ್ಯುತ್ ‌ಚಾಲಿತ ವಾಹನ‌ಗಳ‌ ಬೇಡಿಕೆ ಹೆಚ್ಚಾಗುತ್ತಿದೆ. ಸರ್ಕಾರವೂ ಕೂಡ ಎಲ್ಲ ಹಂತದಲ್ಲಿ ವಿದ್ಯುತ್ ಚಾಲಿತ ವಾಹಗಳಿಗೆ ಹೆಚ್ಚಿನ ಒತ್ತು‌ ನೀಡುತ್ತಿದೆ‌ ಎಂದರು. ಪೆಟ್ರೋಲ್ ಹಾಗೂ ಡೀಸಲ್ ವಾಹನಗಳಿಂದಾಗಿ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ‌, ಬೆಲೆಯೂ ಹೆಚ್ಚು ಎನ್ನು‌ವ ಕೂಗುಗಳು ಕೇಳಿ ಬರುತ್ತವೆ. ಹೀಗಿರುವಾಗ ವಿದ್ಯುತ್ ಚಾಲಿತ ವಾಹನಗಳು ಇಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ.

ಇಂಧನ ಇಲಾಖೆ‌ ವಹಿಸಿಕೊಂಡ‌ ನಂತರ ವಿದ್ಯುತ್ ಚಾಲಿತ ವಾಹನ ತಯಾರಕ ಕಂಪನಿಗಳ‌ ಸಭೆ‌ ನಡೆಸಲಾಗಿತ್ತು. ವಿದ್ಯುತ್ ಚಾಲಿತ ವಾಹನಗಳು ಮುನ್ನಲೆಗೆ ಬರಬೇಕು, ಜನರು ಹೆಚ್ಚು ಆಕರ್ಷಿತರಾಗಬೇಕು. ಇಂದಿನ‌ ವ್ಯವಸ್ಥೆಯಿಂದ‌ ಸುಧಾರಣೆ ಹೊಂದಬೇಕೆಂದು.  ಪೆಟ್ರೋಲ್‌, ಡೀಸಲ್ ವಾಹನಗಳಿಂದ ವಿದ್ಯುತ್ ಚಾಲಿತ ವಾಹನಗಳ‌ ಕಡೆ‌ ಮುಖ ಮಾಡೋದು ಸುಧಾರಣೆಯ ಒಂದು ಭಾಗ, ಜನರು ಬದಲಾವಣೆ ಕಡೆಗೆ ಹೆಜ್ಜೆಯನ್ನ‌ ಇಡಬೇಕು ಎಂದರು.

ವಿದ್ಯುತ್ ಚಾಲಿತ ವಾಹನಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ೨೦-೪೦% ಸಬ್ಸಿಡಿ ನೀಡಲಾಗುತ್ತಿದೆ. ತ್ರಿಚಕ್ರ ವಾಹನಗಳಿಗೆ ಸುಮಾರು 60 ಸಾವಿರ ರೂ. ಸಬ್ಸಿಡಿ‌ ದೊರೆಯುವುದರಿಂದ ಗ್ರಾಹಕರಿಗೆ‌‌ ಹೆಚ್ಚಿನ‌ ಅನುಕೂಲವಾಗಲಿದೆ ಎಂದು‌ ಸಚಿವರು ಅಭಿಪ್ರಾಯ ಪಟ್ಟರು. 

ಇನ್ನು‌ ಇಲಾಖೆ ರಾಜ್ಯದ ವಿವಿಧ ಭಾಗಗಳಲ್ಲಿ ಒಂದು ಸಾವಿರ ವಿದ್ಯುತ್ ವಾಹನ‌ ಚಾರ್ಜಿಂಗ್ ಕೇಂದ್ರ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದರು.


ವಾಹನಗಳ ವಿಚಾರದಲ್ಲಿ ವಿದ್ಯುತ್ ವಾಹನಗಳು‌ ಮುಂದಿನ‌ ಭವಿಷ್ಯ,ಹಾಗಾಗಿ ಆ ನಿಟ್ಟಿನಲ್ಲಿ ಆಲೋಚನೆ‌ ಮಾಡಬೇಕಿದೆ. ವಿದ್ಯುತ್ ಚಾಲಿತ ವಾಹನಗಳ‌ ಬಳಕೆಗೆ ಉತ್ತೇಜನ‌ ಇಂಧನ ಇಲಾಖೆಯಿಂದಲೇ‌ ಆರಂಭವಾಗಲೆಂದು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಳಸುವ ಸರ್ಕಾರಿ ವಾಹನಗಳು ವಿದ್ಯುತ್ ಚಾಲಿತ ವಾಹನಗಳಾಗಬೇಕು ಎನ್ನುವ ಚಿಂತನೆ‌ ಇದೆ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು