6:18 PM Friday19 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3…

ಇತ್ತೀಚಿನ ಸುದ್ದಿ

ಹಾಕಿ ಗ್ರೌಂಡ್ ಗೆ ಕಾಂಕ್ರೀಟ್!: ಶಾಸಕರು, ಸಂಸದರು ಫ್ಲೈಟ್ ನಲ್ಲಿ ಹೋಗ್ತಾರೆ; ಮತ್ಯಾಕೆ ಬೇಕು ರೀ.. ಸರ್ವಿಸ್ ಬಸ್ ಸ್ಟಾಂಡ್?!!

11/04/2022, 13:09

ಅಶೋಕ್ ಕಲ್ಲಡ್ಕ ಮಂಗಳೂರು

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

‘ಛೀ…. ಏನ್ರೀ ಇದು ಬಸ್ ಸ್ಟಾಂಡ್?  ಗಬ್ಬು ವಾಸ್ನೆ…

ನಿಮ್ಮ ಶಾಸಕರು, ಸಂಸದರು ಏನು ಮಾಡುತ್ತಿದ್ದಾರೆ? ಅಲ್ಲಾ ರೀ…ಇಬ್ರು ಮುಖ್ಯಮಂತ್ರಿಗಳನ್ನು ಕೊಟ್ರೂ ಒಂದು ಬಸ್ ಸ್ಟಾಂಡ್ ಕಟ್ಟಿಸೋಕೆ ಆಗಿಲ್ವಾ?’

ಇದು ನೆರೆಯ ಹಾಸನ ಜಿಲ್ಲೆಯ ಶಂಕರಲಿಂಗೇಗೌಡ ಅವರ ನುಡಿ. ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿಯಿರುವ ಹಾಕಿ ಗ್ರೌಂಡ್ ನಲ್ಲಿ 3 ದಶಕಗಳಿಂದ ತಾತ್ಕಾಲಿಕ ನೆಲೆಯಲ್ಲಿ ಬೀಡು ಬಿಟ್ಟಿರುವ ಖಾಸಗಿ ಸರ್ವಿಸ್ ಬಸ್ ನಿಲ್ದಾಣದ ಬಗ್ಗೆ ಶಂಕರ ಲಿಂಗೇಗೌಡರು ಆಕ್ರೋಶದಿಂದ ಹೇಳಿದ ಮಾತು.

‘ನಮ್ಮೂರಿನ(ಹಾಸನ) ಬಸ್ ಸ್ಟಾಂಡ್ ನೋಡ್ರಿ… ಮಾಲ್ ..ಮಾಲ್ ತರಹ ಇದೆ. ಅಲ್ಲಾ ರೀ..


ವೀರಪ್ಪ ಮೊಯ್ಲಿ, ಸದಾನಂದ ಗೌಡ್ರು ಮುಖ್ಯಮಂತ್ರಿ ಆದಾಗಲೂ ಇದನ್ನು ಮಾಡಿಸೋಕೆ ಆಗಿಲ್ವಾ ರೀ. ಏನ್ ಶಾಸಕರೀ ನಿಮ್ ಕಡೆಯವರು?’

ಕೆಲಸದ ನಿಮಿತ್ತ, ಪ್ರವಾಸದ ನಿಮಿತ್ತ ಮಂಗಳೂರಿಗೆ ಆಗಮಿಸಿದ ಅನ್ಯ ಜಿಲ್ಲೆಯ ನಾಗರಿಕರು ಸ್ಟೇಟ್ ಬ್ಯಾಂಕ್ ಬಳಿಯ ಬಸ್ ಸ್ಟಾಂಡ್ ಕಂಡ ಕೂಡಲೇ ಬೆಚ್ಚಿ ಬೀಳುತ್ತಾರೆ. ತನ್ನಿಂದ ತಾನಾಗಿ ಅವರ ಬಾಯಿಯಿಂದ ಆಕ್ಷೇಪದ ಮಾತು ಹೊರಬೀಳುತ್ತದೆ.


ಅದೊಂದು ಚಕ್ರವ್ಯೂಹ ಮಾದರಿಯ ಬಸ್ ನಿಲ್ದಾಣ. ಒಳ ಹೊಕ್ಕವ ಹೊರಗೆ ಬರುವುದು ಸ್ವಲ್ಪ ಕಷ್ಟ. ಒಂದು ಕಡೆಯಲ್ಲಿ ಉದ್ದಕ್ಕೆ ಇರುವ ಮೀನು ಮಾರುಕಟ್ಟೆ, ಇನ್ನೊಂದು ಕಡೆ ಕಾರ್ಪೋರೇಷನ್ ಬ್ಯಾಂಕ್ ಪ್ರಾಯೋಜಿತ ಪಾರ್ಕ್ ನ ಎತ್ತರದ ಗೋಡೆ, ಮತ್ತೊಂದು ಕಡೆ ಗೋಡೆ ಕಟ್ಟಿರುವ ಹಾಗೆ ಗೂಡಂಗಡಿ, ಆಮ್ಲೆಟ್ ಸ್ಟಾಲ್, ತಳ್ಳುಗಾಡಿ, ಫ್ರೂಟ್ಸ್ ಗಾಡಿ, ತಂಪು ಪಾನೀಯ ಮುಂತಾದುವುಗಳು. ಮಗದೊಂದು ಕಡೆಯಲ್ಲಿ ಮೆಸ್ಕಾಂ ಕಚೇರಿ. ಇವೆಲ್ಲದರ ನಡುವೆ ಎರಡು ಬದಿಗಳಲ್ಲಿ ಬಸ್ ನುಸುಳಿಕೊಂಡು ಒಳಬಂದು ಹೊರಗೆ ಹೋಗುವಷ್ಟು ಇಕ್ಕಟ್ಟಾದ ಮಾರ್ಗ. ಈ ವ್ಯವಸ್ಥೆ ಕಳೆದ ಮೂರು ದಶಕಗಳಿಂದಲೂ ಹಾಗೆಯೇ ಇದೆ. ಆದರೆ ರಾಜ್ಯದಲ್ಲಿ ಈ ನಡುವೆ ಹಲವು ಸರಕಾರಗಳು ಅಸ್ತಿತ್ವಕ್ಕೆ ಬಂದು ಹೋಗಿವೆ. ದಕ್ಷಿಣ ಕನ್ನಡ ಜಿಲ್ಲೆ ಹಲವು ಮಂದಿ ಉಸ್ತುವಾರಿ ಸಚಿವರುಗಳನ್ನು ಕಂಡಿದೆ. ಹಲವು ಮಂದಿ ಶಾಸಕರಾಗಿದ್ದಾರೆ. ಹಾಗೆ ಸಂಸದರಾಗಿದ್ದಾರೆ. ಉಪಯೋಗ ಮಾತ್ರ ಶೂನ್ಯ. ಬಿಜೆಪಿ ಸರಕಾರದಲ್ಲಿ


ಜೆ. ಕೃಷ್ಣ ಪಾಲೆಮಾರ್ ಅವರು ಉಸ್ತುವಾರಿ ಸಚಿವರಾಗಿದ್ದಾಗ ಪಂಪ್ ವೆಲ್ ಬಳಿಯ ಜಾಗವನ್ನು ನೂತನ ಸರ್ವಿಸ್ ಬಸ್ ನಿಲ್ದಾಣಕ್ಕೆ ನಿಗದಿಪಡಿಸಲಾಯಿತು. ಆದರೆ ಅವರು ಅಧಿಕಾರ ಕಳೆದುಕೊಳ್ಳುವವರೆಗೆ ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. ನಂತರ ಕಾಂಗ್ರೆಸ್ ಆಡಳಿತಕ್ಕೆ ಬಂತು. ಬಿ. ರಮಾನಾಥ ರೈ ಅವರು ಉಸ್ತುವಾರಿ ಸಚಿವರಾದರು. ಆದರೆ ಅವರ ಅಧಿಕಾರದ ಅವಧಿಯಲ್ಲೂ ನೂತನ ಸರ್ವಿಸ್ ಬಸ್ ನಿಲ್ದಾಣಕ್ಕೆ ಅಡಿಪಾಯ ಹಾಕಲು ಸಾಧ್ಯವಾಗಲಿಲ್ಲ. ಮತ್ತೆ ಬಿಜೆಪಿ ಗದ್ದುಗೆ ಏರಿತು. ಕೋಟ ಶ್ರೀನಿವಾಸ ಪೂಜಾರಿ ಅವರು ಉಸ್ತುವಾರಿ ಸಚಿವರಾದರು. ಇವರಿಗೂ ಬಸ್ ನಿಲ್ದಾಣದ ಕುರಿತಂತೆ ಒಂದು ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಈಗ ಸುನಿಲ್ ಕುಮಾರ್ ಅವರು ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿದ್ದಾರೆ. ಎಲ್ಲರೂ ಮತ್ತೆ ಆಸೆಗಣ್ಣಿನಿಂದ ಅವರತ್ತ ನೋಡುತ್ತಿದ್ದಾರೆ. ವಾಸ್ತವದಲ್ಲಿ ಯಾವುದೇ ಜನಪ್ರತಿನಿಧಿಗಳಿಗೆ ಮಂಗಳೂರಿಗೊಂದು ಸುಸಜ್ಜಿತ ಬಸ್ ನಿಲ್ದಾಣ ಬೇಕೆಂಬ ಕನಸಿಲ್ಲ. ಯಾಕೆಂದರೆ ಇವರು ಯಾರೂ ವೈಕುಂಠ ಬಾಳಿಗ, ಡಾ. ವಿ.ಎಸ್. ಆಚಾರ್ಯ, ಬ್ಲೇಸಿಯಸ್ ಎಂಡಿ ಸೋಜ, ಬಾಕಿಲ ಹುಕ್ರಪ್ಪ ಅವರ ತರಹ ಬಸ್ ನಲ್ಲಿ ಓಡಾಡುವುದಿಲ್ಲ. ಚಾರ್ಟರ್ ಫ್ಲೈಟ್ ನಲ್ಲಿ ಓಡಾಡುವಷ್ಟು ಸಮರ್ಥರಿದ್ದಾರೆ. ಹಾಗಿರುವಾಗ ಯಾಕೆ ಬೇಕ್ರಿ ಬಸ್ ಸ್ಟಾಂಡ್. ಓನ್ಲಿ ಏರ್ ಪೋರ್ಟ್!

ಇತ್ತೀಚಿನ ಸುದ್ದಿ

ಜಾಹೀರಾತು