11:33 AM Wednesday19 - August 2026
ಬ್ರೇಕಿಂಗ್ ನ್ಯೂಸ್
ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ…

ಇತ್ತೀಚಿನ ಸುದ್ದಿ

ಫಾದರ್‌ ಮುಲ್ಲರ್ಸ್‌ ಮೆಡಿಕಲ್‌ ಕಾಲೇಜು ಎಂಬಿಬಿಎಸ್‌ 27ನೇ ಬ್ಯಾಚ್‌ ಶೈಕ್ಷಣಿಕ ವರ್ಷಕ್ಕೆ ಚಾಲನೆ: ವೈಟ್‌ ಕೋಟ್‌ ಸಮಾರಂಭ

11/10/2025, 20:33

ಮಂಗಳೂರು(reporterkarnataka.com): ನಗರದ ಫಾದರ್‌ ಮುಲ್ಲರ್ಸ್‌ ಮೆಡಿಕಲ್‌ ಕಾಲೇಜಿನ ಎಂಬಿಬಿಎಸ್‌ ವಿದ್ಯಾರ್ಥಿಗಳ ಈ ಸಾಲಿನ 27ನೇ ಬ್ಯಾಚ್‌ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡುವುದು ಹಾಗೂ ವೈಟ್‌ ಕೋಟ್‌ ಸಮಾರಂಭವು ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೆಥೋಲಿಕ್ ಶೈಕ್ಷಣಿಕ ಮಂಡಳಿಯ ಕಾರ್ಯದರ್ಶಿ ವಂ.ಡಾ|ಲಿಯೋ ಲಸ್ರಾಡೊ ಅವರು ಮಾತನಾಡುತ್ತಾ ಮೂರು ದಶಕಗಳ ಹಿಂದೆ ವೈದ್ಯರಾಗುವುದಕ್ಕೆ ತಮಗೆ ಇದ್ದ ಉತ್ಸಾಹವನ್ನು ನೆನಪಿಸಿಕೊಂಡು, ನನಗೆ ಆ ಕನಸು ನನಸಾಗಿಸಲು ಅಸಾಧ್ಯವಾದರೂ ವೈದ್ಯಕೀಯ ವೃತ್ತಿ ಬಗ್ಗೆ ಎಂದೆಂದೂ ಗೌರವ ಹೊಂದಿದ್ದೇನೆ ಎಂದರು.
ವಿದ್ಯಾರ್ಥಿಗಳು ಯಾವಾಗಲೂ ಜೀವನ ಪರ್ಯಂತ ಕಲಿಕೆ ಹಾಗೂ ಸೇವೆಯ ಪ್ರಯಾಣವನ್ನು ತಮ್ಮದಾಗಿಸಿಕೊಳ್ಳಬೇಕು, ಇತರರ ನೋವುಗಳನ್ನು ಅರಿತುಕೊಂಡು ಅವರಿಗಾಗಿ ಸೇವೆ ಸಲ್ಲಿಸುವುದರತ್ತ ಗಮನ ಹರಿಸಬೇಕು, ಅಲ್ಲದೆ ತಮ್ಮ ಹೆತ್ತವರ ಹಾಗೂ ಹಿತೈಷಿಗಳ ತ್ಯಾಗಗಳನ್ನು ಮರೆಯಬಾರದು, ಭಗವಂತನ ಮಾರ್ಗದರ್ಶನವನ್ನು ಎಂದಿಗೂ ಕೈಬಿಡಬಾರದು ಎಂದು ಸಲಹೆ ನೀಡಿದರು.
ಫಾದರ್‌ ಮುಲ್ಲರ್ಸ್‌ ವೈದ್ಯಕೀಯ ಕಾಲೇಜು ಚಿಕಿತ್ಸೆಯ ತನ್ನ ದೈವೀಕ ಅಭಿಯಾನವನ್ನು ಮುಂದುವರಿಸುತ್ತಾ ಬಂದಿದೆ, ಯಾವುದೇ ಲಾಭ ನಷ್ಟದ ಬಗ್ಗೆ ಚಿಂತಿಸದೆ ಸೇವಾ ನಿರತವಾಗಿರುವುದು ಶ್ಲಾಘನೀಯ ಎಂದರು.
ಫಾ.ಮುಲ್ಲರ್ಸ್‌ ಚಾರಿಟಬಲ್‌ ಟ್ರಸ್ಟ್‌ ನಿರ್ದೇಶಕ ವಂ.ಫಾ.ಫಾವೊಸ್ತಿನ್‌ ಲ್ಯೂಕಸ್‌ ಲೋಬೊ ಅವರು ಮಾತನಾಡುತ್ತಾ, ವಿದ್ಯಾರ್ಥಿಗಳು ದೈವಿಕ ಶಕ್ತಿಯ ಕರೆಯನ್ನು ಸ್ವೀಕರಿಸಿ ಆರೈಕೆ, ಚಿಕಿತ್ಸೆಯ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದೀರಿ, ಇದು ಕೇವಲ ಜ್ಞಾನ ಮಾತ್ರವಲ್ಲದೆ ಅನುಭೂತಿ, ಮಾನವೀಯತೆ ಹಾಗೂ ನಂಬಿಕೆಯನ್ನೂ ಕೇಳುತ್ತದೆ ಎಂದು ನೆನಪಿಸಿದರು.
ವೈದ್ಯಕೀಯ ವೃತ್ತಿಗೆ ಹೊಸದಾಗಿ ಪಾದಾರ್ಪಣೆ ಮಾಡುವ ವಿದ್ಯಾರ್ಥಿಗಳ ಸೇರ್ಪಡೆಯನ್ನು ಸಂಕೇತಿಸುವ ವೈಟ್‌ ಕೋಟ್‌ ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ ಘಟಕ ಮುಖ್ಯಸ್ಥ ಪ್ರೊ.ಡಾ.ನಾಗೇಶ್‌ ಕೆ ಅವರು ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಾರ್ಗಸೂಚಿಯಂತೆ ಪ್ರತಿಜ್ಞಾವಿಧಿ ಬೋಧಿಸಿದರು. ಮೊದಲಬಾರಿಗೆ ವೈದ್ಯರು ಧರಿಸುವ ವೈಟ್‌ ಕೋಟ್‌ ಧರಿಸುವ ಮೂಲಕ ವಿದ್ಯಾರ್ಥಿಗಳು ಹೆಮ್ಮೆ ವ್ಯಕ್ತಪಡಿಸಿ, ಆರೈಕೆ, ಚಿಕಿತ್ಸೆಯ ಪವಿತ್ರ ಜವಾಬ್ದಾರಿ ನಿರ್ವಹಿಸುವ ಪ್ರತಿಜ್ಞೆ ಸ್ವೀಕರಿಸಿದರು.
ಸಮಾರಂಭದ ಭಾಗವಾಗಿ ಫಾ.ಮುಲ್ಲರ್ಸ್‌ ಆಸ್ಪತ್ರೆಯ ಆಡಳಿತಾಧಿಕಾರಿ ಫಾ.ಜಾರ್ಜ್‌ ಜೀವನ್‌ ಸಿಕ್ವೇರ ಅವರು ಪ್ಲಾಸ್ಟಿಕ್‌ ಫ್ರೀ ಕ್ಯಾಂಪಸ್‌ ಅಭಿಯಾನಕ್ಕೆ ಚಾಲನೆ ನೀಡಿದರು.
ಫಾ.ಮುಲ್ಲರ್ಸ್‌ ಮೆಡಿಕಲ್‌ ಕಾಲೇಜು ಆಡಳಿತಾಧಿಕಾರಿ ವಂ.ಡಾ.ಮೈಕೇಲ್‌ ಸಾಂತುಮಯೊರ್‌ ಸ್ವಾಗತಿಸಿ, ವೈದ್ಯಕೀಯ ಕಾಲೇಜಿನ ಡೀನ್ ಡಾ.ಆಂಟನಿ ಸಿಲ್ವನ್‌ ಡಿʼಸೋಜ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು