ಇತ್ತೀಚಿನ ಸುದ್ದಿ
ದುಬಾರೆ: ಸಾಕಾನೆ ದಾಳಿಯಿಂದ ಗಾಯಗೊಂಡಿದ್ದ ಮಾರ್ತಾಂಡ ಸಾವು
19/05/2026, 15:50
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.ಕಂ
ದುಬಾರೆ ಆನೆ ಶಿಬಿರದಲ್ಲಿ ಸೋಮವಾರ ಕಂಜನ್ ಸಾಕಾನೆ ದಾಳಿಯಿಂದ ಗಾಯಗೊಂಡಿದ್ದ ಮಾರ್ತಾಂಡ ಆನೆ (34) ಸಾವನ್ನಪ್ಪಿದೆ.
ದುಬಾರೆ ಯಲ್ಲಿ ಎರಡು ಆನೆಗಳ ನಡುವೆ ನಡೆದ ಕಾದಾಟದಲ್ಲಿ ಕಂಜನ್ ಆನೆ ದಾಳಿಯ ತಿವಿತದಿಂದ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಇಂದು ಮಾರ್ತಾಂಡ ಆನೆ ಕೊನೆಯುಸಿರೆಳೆದಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿನ್ನೆ ದುಬಾರೆ ಯಲ್ಲಿ ನಡೆದ ದುರ್ಘಟನೆಯಿಂದ ಎರಡು ದಿನಗಳ ಕಾಲ ದುಬಾರೆ ಸಾಕಾನೆ ಶಿಬಿರ ಬಂದ್ ಹಾಗೂ ಅರಣ್ಯ ಇಲಾಖೆಯ ತುರ್ತು ಕ್ರಮದಂತೆ ಇನ್ನು ಮುಂದೆ ಆನೆಗಳು ಸ್ಥಾನ ಮಾಡುವಾಗ ಸಾರ್ವಜನಿಕರನ್ನು ಹತ್ತಿರಕ್ಕೆ ಬಿಡದಂತೆ ಆದೇಶ ಹೊರಡಿಸಲಾಗಿದೆ.












