ಇತ್ತೀಚಿನ ಸುದ್ದಿ
ಡಿಕೆಶಿ ಸಂಪುಟದ ಖಾತೆ ಹಂಚಿಕೆ: ಖಾದರ್ ಗೆ ಆರೋಗ್ಯ; ಉಳಿದಂತೆ ಯಾರು ಯಾರಿಗೆ ಯಾವ ಯಾವ ಖಾತೆ?
04/06/2026, 21:39
ಮಂಗಳೂರು(reporterkarnataka.com): ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಕಾಂಗ್ರೆಸ್ ಸರಕಾರದ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ನಡೆದಿದ್ದು, ಡಿಸಿಎಂ ಡಾ. ಜಿ. ಪರಮೇಶ್ವರ್ ಅವರಿಗೆ ಕಂದಾಯ ಹಾಗೂ ಮಾಜಿ ಸ್ಪೀಕರ್, ಮಂಗಳೂರು ಶಾಸಕ ಯು.ಟಿ. ಖಾದರ್ ಅವರಿಗೆ ಆರೋಗ್ಯ ಖಾತೆ ನೀಡಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಉಳಿದಂತೆ ಸತೀಶ್ ಜಾರಕಿಹೊಳಿ (ಲೋಕೋಪಯೋಗಿ), ಕೃಷ್ಣೇಭೈರೇಗೌಡ (ಬೆಂಗಳೂರು ನಗರಾಭಿವೃದ್ಧಿ), ರಾಮಲಿಂಗಾ ರೆಡ್ಡಿ(ಜಲ ಸಂಪನ್ಮೂಲ), ಯತೀಂದ್ರ ಸಿದ್ದರಾಮಯ್ಯ (ನಗರಾಭಿವೃದ್ಧಿ), ಪ್ರಿಯಾಂಕ್ ಖರ್ಗೆ(ಐಟಿ ಬಿಟಿ), ಎಂ.ಬಿ. ಪಾಟೀಲ್(ಬೃಹತ್ ಕೈಗಾರಿಕೆ), ಡಾ. ಶರಣ್ ಪ್ರಕಾಶ್ (ವೈದ್ಯಕೀಯ), ಭೈರತಿ ಸುರೇಶ್ (ಸಾರಿಗೆ) ಖಾತೆ ನೀಡಲಾಗಿದೆ.













