5:05 AM Thursday23 - April 2026
ಬ್ರೇಕಿಂಗ್ ನ್ಯೂಸ್
ಬಳ್ಳಾರಿ ಜಿಲ್ಲಾಡಳಿತದಿಂದ ಸರಕಾರಿ ಜಮೀನು ಒತ್ತುವರಿ ವಿರುದ್ಧ 3ನೇ ಹಂತದ ಕಾರ್ಯಾಚರಣೆ Chikkamagaluru | ಸಿಇಟಿ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಶಾಕ್: ಮೂಗುತಿಗೆ ಬಿತ್ತು ಗಮ್… ತಮಿಳುನಾಡಿನಲ್ಲಿ 84% ದಾಟಿದ ಮತದಾನ: ಬಂಗಾಳದಲ್ಲಿ 91% ದಾಖಲೆ ಪ್ರಮಾಣದ ವೋಟಿಂಗ್ ತೀರ್ಥಹಳ್ಳಿ | ಆಗುಂಬೆಯ ಲಕ್ಕುಂದದಲ್ಲಿ ವೃದ್ದೆಯ ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ… ಪಕ್ಷ ಕಟ್ಟಲು ಕಾರ್ಯಕರ್ತರು ಇದ್ದಾರೆ, ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್… ವಿದೇಶಿ ಮಹಿಳೆಯ ಅತ್ಯಾಚಾರ ದೌರ್ಜನ್ಯ ಪ್ರಕರಣ: ‘ದೇವಿ ವಿಲ್ಲಾ’ ಹೋಂಸ್ಟೇ ಪರವಾನಗಿ ರದ್ದು ಬಸವಕಲ್ಯಾಣ ಬಸವೇಶ್ವರ ರಥೋತ್ಸವದಲ್ಲಿ ಭೀಕರ ದುರಂತ: ರಥದ ಚಕ್ರಕ್ಕೆ ಸಿಲುಕಿ ಭಕ್ತನ ಎರಡು… ತಮಿಳುನಾಡಿನಲ್ಲಿ ಮತದಾನ: ಸಿಎಂ ಸ್ಟಾಲಿನ್, ಸೂಪರ್ ಸ್ಟಾರ್ ರಜನೀಕಾಂತ್, ಪ್ರಸಿದ್ಧ ನಟ ವಿಜಯ್… ಪ್ರಧಾನಿ ಮೋದಿಗೆ ಭಯೋತ್ಪಾದಕ ಎಂದು ನಿಂದನೆ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಚುನಾವಣಾ ಆಯೋಗ… ಚಾಮರಾಜನಗರ | ಮಲೆ ಮಹದೇಶ್ವರ ವನ್ಯಜೀವಿ ಧಾಮದ ದಟ್ಟ ಕಾಡಿನಲ್ಲಿ ಮಾನವನ ಅಸ್ಥಿಪಂಜರ…

ಇತ್ತೀಚಿನ ಸುದ್ದಿ

ಚಳ್ಳಕೆರೆ ದೊಡ್ಡಉಳ್ಳಾರ್ತಿ ಜಾತ್ರೆ  ಸಮಾಪನ: ಗೌರಿದೇವಿ ವಿಸರ್ಜನೆ; ಮಕ್ಕಳಿಗಾಗಿ ಹೂ ತೊಟ್ಟಿಲ ಸೇವೆ

23/11/2021, 19:16

ಗೋಪಾನಹಳ್ಳಿ ಶಿವಣ್ಣ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ಚಳ್ಳಕೆರೆ ತಾಲೂಕಿನ ದೊಡ್ಡಉಳ್ಳಾರ್ತಿಯ ಶ್ರೀಗೌರಿದೇವಿ ಜಾತ್ರೆ ಸಡಗರ ಸಂಭ್ರಮದಿಂದ ನಡೆದಿದ್ದು, ಗೌರಿದೇವಿ ವಿಸರ್ಜನೆ ಕಾರ್ಯ ನೆರವೇರಿತು.

ಗೌರಿ ದೇವಿಯ ಮೂರ್ತಿಗೆ ದೀಪಾಲಂಕರದಿಂದ ಶೃಂಗಾರಗೊಳಿಸಿ ದೊಡ್ಡ ಹಬ್ಬದಂತೆ ಆಚರಣೆ ಮಾಡಿದ್ದು ಒಂದು ವಿಶೇಷವಾಗಿತ್ತು. ಗ್ರಾಮದ ಗಂಡನ ಮನೆಯಾದ ವೀರಭದ್ರಸ್ವಾಮಿ ದೇವಾಲಯದಿಂದ ಸಂಪ್ರದಾಯದಂತೆ ಗೌರಿದೇವಿಯನ್ನು ಬೆಳಗಿನ ಜಾವ ಸುಮಾಎಉ 3.30ರಲ್ಲಿ ಎಡೆಮುಡಿ ಮೇಲೆ ಗೌರಿಯನ್ನು ಮೆರವಣಿಗೆಯ ಮೂಲಕ ತವರು ಮನೆಗೆ ಕರೆ ತರಲಾಯಿತು.ಊರಿನಲ್ಲಿ ಗುಡಿ ನಿರ್ಮಿಸಿ ಜಾತ್ರೆ ಮಾಡುತ್ತಿದ್ದರು ಎಂಬ ಪ್ರತೀತಿ ಇದೆ.ನಾವು ಸಹ ಹಿರಿಯರ ಆಶಯದಂತೆ ಮುಂದುವರೆಸಿಕೊಂಡು ಬರಲಾಗಿದೆ ಎಂಬುದು ಭಕ್ತರ ನಂಬಿಕೆ.

ಗೌರಿದೇವಿ ಜಾತ್ರೆ ಮೂಲತಃ ಹೆಣ್ಣು ಮಕ್ಕಳ ಹಬ್ಬ. ದೇವಿಗೆ ಪೂಜಾ ಕೈಂಕರ್ಯ ನಡೆಸುವವರೆಲ್ಲ ಒಪ್ಪತ್ತು ಮಾತ್ರ ಊಟ ಮಾಡಬೇಕು. ಆಚರಣೆಯಂತೆ ವಿದಿವಿಧಾನದಂತೆ ಸಮಂಗಲಿಯರು ಮಧ್ಯೆ ರಾತ್ರಿ ತಣ್ಣಿರಿನ ಸ್ನಾನ ಬಣ್ಣಬಣ್ಣದ ಮಡಿ ಸೀರೆಗಳನ್ನು ಉಟ್ಟುಕೊಂಡು ಮಂಜಾನೆ ದೇವಿಗೆ ಮಹಾ ಮಂಗಳಾರತಿ ಸಮರ್ಪಿಸಿದರು.

ದಿನವೆಲ್ಲ ಉಪವಾಸವಿರುವ ಪುರುಷರು ನಂತರ ರಾತ್ರಿ  ಚಳಿಯನ್ನು ಲೆಕ್ಕಿಸದೆ ತಣ್ಣಿರಿನಲ್ಲಿ ಸ್ನಾನಮಾಡಿ ದೇವಿಯನ್ನು ತವರು ಮನೆಯಿಂದ ಕರೆ ತರುವ ಸಂದರ್ಭದಲ್ಲಿ ಡಿಂಡುರುಳು ಸೇವೆ ಅರ್ಪಿಸಿದರು. ಇವರಿಗೆ ಮಹಿಳೆಯರು ಆರತಿ ಹಿಡಿಯುವ ಮೂಲಕ ಪ್ರೋತ್ಸಾಹ ನೀಡಿ ಚಳಿಯಲ್ಲು ಜಾತ್ರೆ ಕಳೆಕಟ್ಟುವಂತೆ ಮಾಡಿದರು.

ಕಂಕಣ ಬಲ ಕೂಡಿ ಬರಲು, ಒಳ್ಳೆಯ ಪತಿ ದೊರೆಯಲೆಂದು ಯುವತಿಯರು ದಿಂಡುರುಳು ಮತ್ತು ಆರತಿ ಹಿಡಿಯುವ ಹರಕೆ ಅರ್ಪಿಸಿದರು. ಮಕ್ಕಳ ಫಲ ಲಭಿಸಲಿ ಎಂದು ಮಕ್ಕಳಿಲ್ಲದವರು ಹೂವಿನ ತೊಟ್ಟಿಲ ಹರಕೆ ತೀರಿಸಿ ದೇವಿಯಲ್ಲಿ ತಮ್ಮ ಇಷ್ಟಾರ್ಥಗಳನ್ನು ಪುರೈಸು ಎಂಬ ಭಾವ ಮಹಿಳೆಯರಲ್ಲಿ ಎದ್ದು ಕಾಣುತ್ತಿತ್ತು. 

ಇತ್ತೀಚಿನ ಸುದ್ದಿ

ಜಾಹೀರಾತು