2:01 PM Sunday21 - June 2026
ಬ್ರೇಕಿಂಗ್ ನ್ಯೂಸ್
ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ… Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್… ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ…

ಇತ್ತೀಚಿನ ಸುದ್ದಿ

ಚಳ್ಳಕೆರೆ ಚಿಗುರು ಈ ಕಿಡ್ಸ್ ಶಾಲಾ 8ನೇ ವರ್ಷದ ವಾರ್ಷಿಕೋತ್ಸವ:   ಮನಸೂರೆಗೊಂಡ ಮಕ್ಕಳ ಕಾರ್ಯಕ್ರಮ ವೈವಿಧ್ಯ

07/03/2024, 11:54

ಮುರುಡೇಗೌಡ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ಚಿಗುರು ಈ ಕಿಡ್ಸ್ ಶಾಲಾ 8ನೇ ವರ್ಷದ ವಾರ್ಷಿಕೋತ್ಸವ ಚಳ್ಳಕೆರೆಯ ಯಾದವ ವಿದ್ಯಾರ್ಥಿ ಹಾಸ್ಟೇಲ್ ನಲ್ಲಿ ನಡೆಯಿತು.
ಶಾಲೆಯ ಶಿಕ್ಷಕ ನಾಗೇಶ್ ಅವರು ಮಾತನಾಡಿ, ಈ ಸಂಸ್ಥೆ ಮಕ್ಕಳಿಗೆ ಸಿಗುವ ಒಳ್ಳೆಯ ಸಂಸ್ಕಾರ, ಬೋಧನೆ ಎಲ್ಲದಕ್ಕಿಂತ ಒಂದು ಹೆಜ್ಜೆ ಮುಂದೆ ಇದೆ. ಎಲ್ಲಾ ಶಾಲೆಗಳಲ್ಲಿ ನಾನು ನೋಡಿದ ಹಾಗೇ ಮಕ್ಕಳನ್ನು ಪ್ರೀತಿಯಿಂದ ಶಿಕ್ಷಕರು ನೋಡಿಕೊಳ್ಳುವುದು. ಅವರು ಕಲಿಸುವ ರೀತಿ ಮಂತ್ರ ಪಠನೆ, ಮಕ್ಕಳ ಮಾತುಗರಿಕೆ, ಈ ಶಾಲೆಯ ಬೋಧನೆಯನ್ನು ಎತ್ತಿ ಹಿಡಿಯುತ್ತದೆ ಎಂದರು. ಮಕ್ಕಳು ಸಹ ಅಷ್ಟೇ ವೇಗವಾಗಿ ಕಲಿಯುತ್ತಿರುವುದು ಎಲ್ಲಾ ಪೋಷಕರಿಗೆ ಸಂತಸ ತರುತ್ತದೆ ಎಂದರು.


ಚಿಗುರು ಈ ಕಿಡ್ಸ್ ಪ್ರಿ ಸ್ಕೂಲ್ ಸಂಸ್ಥೆಯ ಅಧ್ಯಕ್ಷರಾದ ಜಡೆಕುಂಟೆ ಎನ್.ಚಿಕ್ಕಣ್ಣ ಮಾತನಾಡಿ, ನಮ್ಮ ಸಂಸ್ಥೆ 8 ವರ್ಷ ದಿಂದ ನೆಡೆಸಿಕೊಂಡು ಬರುತ್ತಿದ್ದು, ಉತ್ತಮ ಶಿಕ್ಷಕರ ವೃಂದ ಹೊಂದಿದೆ. ಮಕ್ಕಳಿಗೆ ಉತ್ತಮ ಆಚಾರ ವಿಚಾರ ಮತ್ತು ಬೋಧನೆಯನ್ನು ನೀಡುತ್ತಿದ್ದಾರೆ. ಇದರಿಂದಾಗಿಯೇ ನಮ್ಮ ಸಂಸ್ಥೆ ಹೆಸರನ್ನು ನಮ್ಮ ಶಾಲೆಯ ಮಕ್ಕಳೇ ಈ ಶಾಲೆಗೆ ಕೀರ್ತಿ ತರುತ್ತಿದ್ದಾರೆ ಎಂದರು.
ಗ್ರಾಮ ಲೆಕ್ಕಾಧಿಕಾರಿ ಹರೀಶ್, ಶಿಕ್ಷಕರಾದ ನಾಗೇಶ್ , ಐಎಂಐ ಟಿಐ ಕಾಲೇಜು ಕಾರ್ಯದರ್ಶಿ ಸಯ್ಯದ್ ಅಹಮ್ಮದ್, ಸಂಸ್ಥೆಯ ಅಧ್ಯಕ್ಷರು ಎನ್. ಚಿಕ್ಕಣ್ಣ ಜಯಮ್ಮ, ಕಾರ್ಯದರ್ಶಿ ಶಶಿಕುಮಾರ್,
ಮುಖ್ಯಶಿಕ್ಷಕಿ ಸ್ಫೂರ್ತಿ ಎಸ್, ಪುಷ್ಪಾ, ಶಾಂತಾ, ಸಾವಿತ್ರಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು