4:08 PM Friday7 - August 2026
ಬ್ರೇಕಿಂಗ್ ನ್ಯೂಸ್
ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ…

ಇತ್ತೀಚಿನ ಸುದ್ದಿ

ಬಾರ್ & ರೆಸ್ಟೋರೆಂಟ್ ಮಾಡಿದರೆ ನಮ್ಮ ಬದುಕಿಗೆ ದಕ್ಕೆ ಆಗುತ್ತದೆ: ಸಾರ್ವಜನಿಕರ ಆಕ್ಷೇಪ

21/11/2024, 19:40

ರಶ್ಮಿ ಶ್ರೀಕಾಂತ್ ತೀರ್ಥಹಳ್ಳಿ ಶಿವಮೊಗ್ಗ

info.reporterkarma@gmail.com

ರಾಜ್ಯ ಹೆದ್ದಾರಿಯ ಹೊರಣೆಬೈಲು, ಕೆಸಲೂರು ಗ್ರಾಮದ (ಕಮ್ಮರಡಿಯಿಂದ ಶೃಂಗೇರಿಗೆ ಹೋಗುವ ರಸ್ತೆ) ಸರ್ವೆ ನಂ.72 ರಲ್ಲಿ ಪುರುಶೋತ್ತಮ ಎಂಬುವವರು ರಾತ್ರೋ ರಾತ್ರಿ ರಸ್ತೆಗೆ ಹೊಂದಿಕೊಂಡು ಕೇವಲ 8-10 ಅಡಿ ದೂರದಲ್ಲಿ ಒಂದು ಕಟ್ಟಡ ನಿರ್ಮಿಸಿರುತ್ತಾರೆ.
ಈ ಕಟ್ಟಡದಲ್ಲಿ ಸೊರಬದಿಂದ ಬಾರ್ ಮತ್ತು ರೆಸ್ಟೋರೆಂಟ್ ಮಾಡುತ್ತಿದ್ದು (ಸ್ಥಳಾಂತರ ಮಾಡುತ್ತಿದ್ದು) ಅದನ್ನು ಮಾಡಿದರೆ ನಮ್ಮ ಜೀವನಕ್ಕೆ ದಕ್ಕೆ ಆಗುತ್ತದೆ ಎಂದು ಸ್ಥಳೀಯರಾದ ಇಲಿಯಾಸ್ ಹೇಳಿದರು.
ಗುರುವಾರ ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ತೀರ್ಥಹಳ್ಳಿ ಕಮ್ಮರಡಿ, ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ
50-60 ವರ್ಷಗಳಿಂದ ಸದರಿ ಜಾಗ ಖಾಲಿ ಇದ್ದು, ಅದರಲ್ಲಿ ಯಾವುದೇ ಕಟ್ಟಡ ಇರಲಿಲ್ಲ. ಈಗ ಕಟ್ಟಡದ ಮತ್ತು ರಸ್ತೆಗೆ ಮದ್ಯೆ ಕಾಂಪೌಂಡ್ ಸಹ ನಿರ್ಮಿಸಿದ್ದು ಹಾಗೂ ಹಿಂಭಾಗದಲ್ಲಿ ರಸ್ತೆಯನ್ನು
ಸಹ ಮಾಡುವ ಸಲುವಾಗಿ ಮರ ಗಿಡಗಳನ್ನು ಕಡಿಯಲಾಗಿದೆ. ಅಕ್ಕಪಕ್ಕದಲ್ಲಿ ವಸತಿ ಪ್ರದೇಶವಾಗಿದ್ದು, 30 ಕ್ಕೂ ಹೆಚ್ಚು ಮನೆಗಳಿವೆ. ಈ ರೀತಿ ಇಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ಮಾಡಿದರೆ ನಮ್ಮ ಜೀವನಕ್ಕೆ ಹಾಗೂ ಬದುಕಿಗೆ ದಕ್ಕೆ ಆಗುತ್ತದೆ ಎಂದು ತಿಳಿಸಿದರು.
ಇದನ್ನು ವಿರೋಧಿಸಿ ಅರಣ್ಯ, ಕಂದಾಯ, ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಆದರೆ ನಮ್ಮ ಮನವಿ ಧಿಕ್ಕರಿಸಿ ಅಬಕಾರಿ ಅಧಿಕಾರಿಗಳು ಸದರಿ ಅರಣ್ಯ
ಇಲಾಖೆ ಭೂಮಿಯಲ್ಲಿ ರಾಜ್ಯ ಹೆದ್ದಾರಿಗೆ ಅತೀ ಸಮೀಪ 10-15 ಅಡಿ ಅಂತರದಲ್ಲಿ ಹಾಗೂ ಹತ್ತಾರು ವಾಸದ ಜನ ವಸತಿ ಪ್ರದೇಶದಲ್ಲಿ ಬಾರ್ & ರೆಸ್ಟೋರೆಂಟ್ ಗೆ ಪರವಾನಗಿ ನೀಡಲು ಮುಂದಾಗಿದ್ದಾರೆ. ಕ್ಷೇತ್ರದ ಶಾಸಕರು ಈ ಬಗ್ಗೆ ತಕ್ಷಣ ಈ ಸಮಸ್ಯೆಯನ್ನು ಗಮನಿಸಿ ಸದರಿ ಬಾ‌ರ್ ಗೆ ಲೈಸೆನ್ಸ್ ನೀಡದಂತೆ ಹಾಗೂ ಜನತೆಯ ಮತ್ತು ಗ್ರಾಮಸ್ಥರು ಸಹಾಯಕ್ಕೆ ಬರಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ ಎಂದು ತಿಳಿಸಿದರು.
ಈ ವಿಚಾರವಾಗಿ ನ್ಯಾಯಲಯಕ್ಕೆ ಹಾಗೂ ಲೋಕಾಯುಕ್ತಕ್ಕೆ ಹೋಗಲು ಸಿದ್ಧರಿದ್ದೇವೆ.
ಒಂದು ವೇಳೆ ನಮ್ಮ ಈ ಮನವಿ ಧಿಕ್ಕರಿಸಿ ವಸತಿ ಪ್ರದೇಶ ಹಾಗೂ ಅರಣ್ಯ ಪ್ರದೇಶ ಮತ್ತು ರಾಜ್ಯ ಹೆದ್ದಾರಿ ಪಕ್ಕದಲ್ಲಿ ಬಾರ್ ಗೆ ಪರವಾನಿಗೆ ನೀಡಿದರೆ ಪ್ರತಿಭಟನೆ ಸಹಾ ಮಾಡ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಯಾಹಿಯ, ಅನಿಷಾ, ಮಮ್ತಾಜ್, ನಿಷ್ಮಾ ಸೇರಿ ಹಲವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು